ಆ್ಯಪ್ನಗರ

ಅರಕಲಗೂಡು: ವಾರದೊಳಗೆ ಇಂದಿರಾ ಕ್ಯಾಂಟೀನ್‌ ಆರಂಭ

ಅರಕಲಗೂಡು: ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ ವಾರ ಉದ್ಘಾಟನೆಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್‌ ತಿಳಿಸಿದರು.

Vijaya Karnataka 19 Feb 2019, 5:00 am
ಅರಕಲಗೂಡು: ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ ವಾರ ಉದ್ಘಾಟನೆಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್‌ ತಿಳಿಸಿದರು.
Vijaya Karnataka Web indira canteen inaguration within week
ಅರಕಲಗೂಡು: ವಾರದೊಳಗೆ ಇಂದಿರಾ ಕ್ಯಾಂಟೀನ್‌ ಆರಂಭ


ಪಪಂ ಅಧಿಕಾರಿಗಳೊಂದಿಗೆ ಇಂದಿರಾ ಕ್ಯಾಂಟೀನ್‌ ವೀಕ್ಷ ಣೆ ಮಾಡಿದ ಬಳಿಕ ಮಾತನಾಡಿ, ಈ ಹಿಂದೆ ಕಟ್ಟಡ ಕೆಲಸ ಮುಗಿದಿತ್ತು. ಉಳಿದಂತೆ ಕುಡಿಯುವ ನೀರು, ರಕ್ಷ ಣಾ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ, ಕುಳಿತುಕೊಳ್ಳುವ ಆಸನಗಳು, ಸಿಸಿ ಕ್ಯಾಮೆರಾ ಕೆಲಸ ಸೇರಿದಂತೆ ಇತರೆ ಕಾಮಗಾರಿ ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಮುಖ್ಯಾಧಿಕಾರಿ ಸುರೇಶ ಬಾಬು ಮಾತನಾಡಿ, ಇಂದಿರಾ ಕ್ಯಾಂಟೀನ್‌ ಮುಂಭಾಗದಲ್ಲಿ ಬೀದಿ ಬದಿ ತಿಂಡಿ ಗಾಡಿಗಳನ್ನು ಹಾಕುತ್ತಿದ್ದು ಇನ್ನೂ ಮುಂದೆ ಕ್ಯಾಂಟೀನ್‌ ಕಾರ್ಯನಿರ್ವಹಿಸುವ ವೇಳೆ ಪರಾರ‍ಯಯ ಜಾಗದ ವ್ಯವಸ್ಥೆಯನ್ನು ವ್ಯಾಪಾರಸ್ಥರು ಮಾಡಿಕೊಳ್ಳಬೇಕು. ಕ್ಯಾಂಟೀನ್‌ ಸುತ್ತಾ ಕಾಂಪೌಂಡ್‌, ಅಲಂಕಾರಿಕ ಗಿಡಗಳನ್ನು ಅಳವಡಿಸಲಾಗಿದೆ. ಕ್ಯಾಂಟೀನ್‌ ರಸ್ತೆ ಬದಿ ಇರುವ ಕಾರಣ ಮುಂಭಾಗದಲ್ಲಿ ಯಾವುದೇ ರೀತೀಯ ಅಂಗಡಿಗಳನ್ನು ಇಟ್ಟುಕೊಳ್ಳಬಾರದು.ಇಟ್ಟುಕೊಂಡರೇ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಂಜಿನಿಯರ್‌ ಕವಿತಾ ಮಾತನಾಡಿ, ಇಂದಿರಾ ಕ್ಯಾಂಟೀನ್‌ ಕಟ್ಟಡದ ಕೆಲಸ ಮುಗಿದಿದ್ದರೂ ಒಳಾಂಗಣ ಮತ್ತು ಹೊರಾಂಗಣದಲ್ಲಿ ಗುತ್ತಿಗೆದಾರ ಇನ್ನೂ ಕೆಲವು ಕೆಲಸಗಳನ್ನು ಮುಗಿಸಿರಲಿಲ್ಲ. ಇದನ್ನು ಮನಗಂಡು ಸರಕಾರಿ ನಿಯಮದಂತೆ ಕ್ಯಾಂಟೀನ್‌ಗೆ ಬೇಕಿರುವ ಎಲ್ಲ ಕೆಲಸಗಳನ್ನು ಖುದ್ದು ನಿಂತು ಪರಿಶೀಲನೆ ನಡೆಸಿ ಮಾಡಿಸಲಾಗುತ್ತಿದೆ. ಕ್ಯಾಂಟಿನ್‌ನ ಆವರಣ ಸ್ವಚ್ಛವಾಗಿ ಇರಬೇಕಿದ್ದು ಮುಂಭಾಗದಲ್ಲಿ ಯಾವುದೇ ರೀತೀಯ ವ್ಯಾಪಾರ ಅಂಗಡಿಗಳನ್ನು ಹಾಕಬಾರದು. ಅಲ್ಲದೆ ಅಕ್ಕಪಕ್ಕದಲ್ಲಿ ವಾಹನ ನಿಲುಗಡೆ ಸೇರಿದಂತೆ ಇತರೆ ಅಶುಚಿತ್ವ ಹರಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಬೀದಿಬದಿ ವ್ಯಾಪಾರಿಗಳಿಗೆ ಸೂಚನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ