ಆ್ಯಪ್ನಗರ

ಹಾಸನ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ಪೊಲೀಸ್‌ ದಾಳಿ, ಐವರು ಸೆರೆ!

​​ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಶ್ರೀನಿವಾಸಗೌಡ ಮತ್ತು ಎಎಸ್‌ಪಿ ನಂದಿನಿ ಮಾರ್ಗದರ್ಶನದಲ್ಲಿ ಡಿಸಿಐಬಿ ಘಟಕದ ಇನ್ಸ್‌ಪೆಕ್ಟರ್ ಯೋಗೇಶ್ ಚಂದ್ರ ಮಾಹಿತಿ ಕಲೆಹಾಕಿ ನಗರದ ಸತ್ಯಮಂಗಲ ಬಡಾವಣೆ ಎಚ್‌ಎಂಟಿ ಕಾಂಪ್ಲೆಕ್ಸ್‌ನಲ್ಲಿ ಆಕಾಶ್‌ ಇತರರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ. ಸೆರೆ ಸಿಕ್ಕವರಿಂದ ಐದು ಮೊಬೈಲ್ ಫೋನ್‌ ಮತ್ತು ನೋಟ್ ಪುಸ್ತಕ ವಶಪಡಿಸಿಕೊಳ್ಳಲಾಗಿದೆ.

Vijaya Karnataka 24 Sep 2020, 3:15 pm
ಹಾಸನ: ಐಪಿಎಲ್ ಕ್ರಿಕೆಟ್ ಪಂದ್ಯಾಟಗಳ ಸಂಬಂಧ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ. ಆಕಾಶ(20), ಕುಮಾರಸ್ವಾಮಿ(20), ಪೂರ್ಣಚಂದ್ರ ತೇಜಸ್ವಿ(20),ಅವಿನಾಶ್‌(21), ನಿರಂಜನ್ (24).ಬಂಧಿತರು.
Vijaya Karnataka Web bet


ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಶ್ರೀನಿವಾಸಗೌಡ ಮತ್ತು ಎಎಸ್‌ಪಿ ನಂದಿನಿ ಮಾರ್ಗದರ್ಶನದಲ್ಲಿ ಡಿಸಿಐಬಿ ಘಟಕದ ಇನ್ಸ್‌ಪೆಕ್ಟರ್ ಯೋಗೇಶ್ ಚಂದ್ರ ಮಾಹಿತಿ ಕಲೆಹಾಕಿ ನಗರದ ಸತ್ಯಮಂಗಲ ಬಡಾವಣೆ ಎಚ್‌ಎಂಟಿ ಕಾಂಪ್ಲೆಕ್ಸ್‌ನಲ್ಲಿ ಆಕಾಶ್‌ ಇತರರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ. ಸೆರೆ ಸಿಕ್ಕವರಿಂದ ಐದು ಮೊಬೈಲ್ ಫೋನ್‌ ಮತ್ತು ನೋಟ್ ಪುಸ್ತಕ ವಶಪಡಿಸಿಕೊಳ್ಳಲಾಗಿದೆ.

ಬಂತರು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್, ಮತ್ತೊಬ್ಬ ವಿದ್ಯಾರ್ಥಿ, ಮತ್ತೊಬ್ಬ ಫೈನಾನ್ಸ್‌ನಲ್ಲಿ ಉದ್ಯೋಗ, ಹಾಲಿನ ಕ್ಯಾಂಟರ್ ಚಾಲಕ, ರೆಸಿಡೆನ್ಸಿ ಕ್ಯಾಷಿಯರ್ ಎಂದು ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ. ಐಪಿಎಲ್‌ ಕ್ರಿಕೆಟ್‌ ಯುಎಇನಲ್ಲಿ ನಡೆಯುತ್ತಿದ್ದರು ರಾಜ್ಯದ ಹಲವೆಡೆ ಬೆಟ್ಟಿಂಗ್‌ ದಂಧೆ ನಡೆಯುತ್ತಿದೆ. ಈಗಾಗಲೇ ಪೊಲೀಸರು ಅನೇಕರನ್ನ ಬಂಧಿಸಿ ಹಣ, ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದರು.

ಕಾಫಿ, ಮೆಣಸಿಗೆ ಮಳೆ ಕಂಟಕ: ವರುಣನ ಆರ್ಭಟಕ್ಕೆ ನೆಲಕಚ್ಚುತ್ತಿರುವ ಬೆಳೆ, ಇಳುವರಿ ಕುಂಠಿತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ