ಆ್ಯಪ್ನಗರ

ಹಾಸನ: ಪ್ರೀತಂಗೌಡ-ಶಿವಲಿಂಗೇಗೌಡ ನಡುವೆ ಜಟಾಪಟಿ..! ಅತಿವೃಷ್ಠಿ ಅನುದಾನಕ್ಕಾಗಿ ಶಾಸಕರ ವಾಗ್ವಾದ

ಹಾಸನ ಜಿಲ್ಲಾ ಪಂಚಾಯಿತಿ ಸಭಾಗಂಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಜೆ ಪ್ರೀತಂಗೌಡ ಹಾಗೂ ಕೆಎಮ್‌ ಶಿವಲಿಂಗೇಗೌಡ ನಡುವೆ ವಾಗ್ವಾದವೇ ನಡೆಯಿತು. ಅತಿವೃಷ್ಠಿ ಅನುದಾನದ ವಿಚಾರವಾಗಿ ಜಟಾಪಟಿ ನಡೆದಿದ್ದು, ಇಬ್ಬರು ಶಾಸಕರನ್ನು ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಸಮಾಧಾನಪಡಿಸಿದರು..

Vijaya Karnataka Web 26 Nov 2020, 7:48 pm
ಹಾಸನ: ಅತಿವೃಷ್ಠಿಗೆ ಬಿಡುಗಡೆಯಾದ ಹಣ ಹಂಚಿಕೆಗೆ ಸಂಬಂಧಿಸಿದಂತೆ ಶಾಸಕ ಪ್ರೀತಂಗೌಡ ಹಾಗೂ ಶಿವಲಿಂಗೇಗೌಡರ ನಡುವೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಟಾಪಟಿ ನಡೆಯಿತು. ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ಕ್ಷೇತ್ರಗಳನ್ನು ಕಡೆಗಣಿಸಿ ಕೆಲವು ಕ್ಷೇತ್ರಗಳಿಗೆ ಮಾತ್ರ ಅನುದಾನ ಹಂಚಲಾಗಿದೆ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
Vijaya Karnataka Web PreethamGowda and ShivalingeGowda


ಜಿಲ್ಲೆಗೆ ಬಂದ 19 ಕೋಟಿ ರೂ. ಅನುದಾನವನ್ನು ಮಳೆಯಿಂದ ಹಾನಿಗೊಳಗಾ ಎಲ್ಲಾ ಕಡೆಗೂ ಹಂಚಿ ಎಂದು ಶಾಸಕರಾದ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಒತ್ತಾಯಿಸಿದರು. ಈ ವೇಳೆ ಶಾಸಕ ಪ್ರೀತಂಗೌಡ ಹಾಗು ಶಿವಲಿಂಗೇಗೌಡ ನಡುವೆ ವಾಗ್ವಾದ ನಡೆದಿದ್ದು, ನೀನು ತಂದಿರುವುದು ಸರಕಾರದ ಅನುದಾನ. ಅದು ಎಲ್ಲಾ ಕ್ಷೇತ್ರಕ್ಕೆ ಹಂಚಿಕೆಯಾಗಬೇಕು
ಎಂದು ಟೇಬಲ್ ಕುಟ್ಟಿ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನೀವು ಟೇಬಲ್‌ ಬಡಿದ್ರೆ ನಮಗೂ ಬಡಿಯೋಕೆ‌ ಬರುತ್ತೆ ಸುಮ್ಮನಿರಿ ಎಂದು ತಿರುಗೇಟು ನೀಡಿದ ಪ್ರೀತಂಗೌಡ, ನಮ್ಮ ಕ್ಷೇತ್ರದ ಬಗ್ಗೆ ಮಾತಾಡೋಕೆ ನೀವ್ಯಾರು, ನಮ್ಮ ಸರಕಾರ, ನಮ್ಮ ಸಿಎಂ, ನಮಗೆ ಅನುದಾನ ನೀಡಿದ್ದಾರೆ ಎಂದು ಹೇಳಿದರು. ಈ ಸಮಯದಲ್ಲಿ ಶಾಸಕರನ್ನು ಸಮಾಧಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಯಾಕೆ ಇಷ್ಟೊಂದು ಸಿಟ್ಟಾಗ್ತಿರಾ. ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ಎರಡು ಕ್ಷೇತ್ರಗಳಿಗೂ ತಲಾ 2 ಕೋಟಿ ರೂ. ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಹಾಸನ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಡೇಟ್‌ ಫಿಕ್ಸ್‌..! ಸುಪ್ರೀಂ ಮೆಟ್ಟಿಲೇರಲು ರೇವಣ್ಣ ತಯಾರಿ

ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡದಿದ್ದರೆ ಅತಿವೃಷ್ಠಿಯೇ ಇಲ್ಲ ಎಂದು ಪತ್ರ ಬರೆಯುತ್ತೇವೆ. ನೀವು ಅದೆಂಗೆ ಟೆಂಡರ್ ಕರೀತೀರೋ ನೋಡೋಣ ಎಂದು ಎಚ್ಚರಿಕೆ ನೀಡಿದ ಶಿವಲಿಂಗೇಗೌಡ, ಬರಕ್ಕೆ ಹಣ ಬಂದ್ರೂ ನಿಮಗೇನೇ, ಮಳೆಗೆ ಅನುದಾನ ಬಂದ್ರು ನಿಮಗೇನೆ. ಹಾಗಿದ್ರೆ ನಾವ್ಯಾಕೆ ಇರೋದು ಎಂದು ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬಹುಮತವಿದ್ದರೂ ಜೆಡಿಎಸ್‌ಗಿಲ್ಲ ನಗರಸಭೆ ಅಧ್ಯಕ್ಷ ಸ್ಥಾನ..! ಮೀಸಲು ಅನ್ಯಾಯಕ್ಕೆ ಎಚ್‌.ಡಿ.ರೇವಣ್ಣ ಆಕ್ರೋಶ

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂಗೌಡ ಹೌದು ಗೌಡ್ರೆ ನೀವು ಹೇಳ್ತಿರೋದು ಸರಿ, ಯಾವುದಕ್ಕೂ ಅನುದಾನ ಬಂದ್ರೂ ರೇವಣ್ಣ ಅವರು ತಗೊಂಡ್ ಹೋಗ್ತಿದ್ರು, ನೇರವಾಗಿ ರೇವಣ್ಣ ಅವರಿಗೆ ಹೇಳೋಕಾಗದೇ ಶಿವಲಿಂಗೇಗೌಡರು ನಮ್ಮೆದುರು ಹೇಳ್ತಿದ್ದಾರೆ ಎಂದು ಹೇಳಿದರು.

ಹಾಸನ: ಕಿಡ್ನಾಪರ್ಸ್‌ಗಳಿಂದ ಸಿನಿಮೀಯ ಮಾದರಿಯಲ್ಲಿ ಯುವತಿ ರಕ್ಷಿಸಿದ ಯುವಕ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ