ಆ್ಯಪ್ನಗರ

ಅರ್ಧ ಕ್ವಿಂಟಾಲ್‌ ತೂಗುವ ಹಲಸು !

ಬಯಲು ಸೀಮೆಯ ಹಲಸಿನ ಹಣ್ಣೊಂದು ಅರ್ಧ ಕ್ವಿಂಟಾಲ್‌ಗೂ ಹೆಚ್ಚು ತೂಗುವ ಮೂಲಕ ಎಲ್ಲರ ಗಮನ ಸೆಳೆದಿದೆ.

Vijaya Karnataka 1 May 2019, 5:00 am
ಚನ್ನರಾಯಪಟ್ಟಣ: ಬಯಲು ಸೀಮೆಯ ಹಲಸಿನ ಹಣ್ಣೊಂದು ಅರ್ಧ ಕ್ವಿಂಟಾಲ್‌ಗೂ ಹೆಚ್ಚು ತೂಗುವ ಮೂಲಕ ಎಲ್ಲರ ಗಮನ ಸೆಳೆದಿದೆ.
Vijaya Karnataka Web HSN-HSN30CRP3


ತಾಲೂಕಿನ ಶ್ರವಣೇರಿ ಗ್ರಾಮದ ತೋಪೇಗೌಡ ಎಂಬುವರ ತೋಟದಲ್ಲಿರುವ 15 ವರ್ಷದ ಹಲಸಿನ ಮರ ಈ ಬಾರಿ ಅಚ್ಚರಿಯ ಫಸಲು ನೀಡಿದೆ.

ತೋಟದ ಮಾಲೀಕ ತೋಪೇಗೌಡರು ಮರದಿಂದ ಹಣ್ಣನ್ನು ಕಿತ್ತು ಮಾರುಕಟ್ಟೆಗೆ ಮಾರಾಟ ಮಾಡುವ ವೇಳೆ ಈ ಬಾರಿ ಅವರಿಗೇ ಅಚ್ಚರಿಯೊಂದು ಕಾದಿತ್ತು. ಇದುವರೆಗೆ ಸಾಧಾರಣವಾಗಿ 30 ರಿಂದ 37 ಕೆಜಿ ತನಕವೂ ಹಲಸಿನಹಣ್ಣು ದಪ್ಪ ಆಗುತ್ತಿದ್ದು, ಒಳ್ಳೆಯ ಬೆಲೆಯೂ ಸಿಗುತ್ತಿತ್ತು. ಈಗ ಎಲ್ಲರ ಗಮನ ಸೆಳೆದಿರುವ ಈ ಹಣ್ಣು ಬರೋಬ್ಬರಿ 51.36 ಕೆಜಿ ಇದ್ದು 700 ರೂ.ಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರವರು.

ಈ ಮರಕ್ಕೆ ತಾವು ವಿಶೇಷ ಆರೈಕೆಯನ್ನೇನೂ ಮಾಡಿಲ್ಲ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ಅದರೊಂದಿಗೆ ಹಲಸಿನ ಮರಕ್ಕೂ ಎಲೆಗೊಬ್ಬರ ಮತ್ತು ತಿಪ್ಪೆಗೊಬ್ಬರವನ್ನು ಆಗಾಗ್ಗೆ ಹಾಕುತ್ತಿದ್ದೆ ಅಷ್ಟೇ. ಈವರೆಗೂ ಒಂದು ಹಣ್ಣಿಗೆ 300 ರೂ. ತನಕ ಬೆಲೆ ಸಿಕ್ಕಿದ್ದು ಒಳ್ಳೆಯ ಲಾಭವಾಗಿದೆ. ಆರಂಭದಲ್ಲಿ ಬಿಡುವ ಕಾಯಿಗಳು ಹೆಚ್ಚು ತೂಕವಿರುತ್ತವೆ ಹಾಗೂ ರುಚಿಯಾಗಿರುತ್ತವೆ ಎನ್ನುತ್ತಾರೆ ತೋಪೇಗೌಡರು. ಈ ಹಣ್ಣನ್ನು ನೋಡಲು ಕುತೂಹಲದಿಂದ ಜನರು ತೋಪೇಗೌಡರ ಮನೆಗೆ ಭೇಟಿ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ