ಆ್ಯಪ್ನಗರ

ಜಲ ಸಂರಕ್ಷಣೆಗೆ ವೈಜ್ಞಾನಿಕ ಚಿಂತನೆ ಅವಶ್ಯ

ಯುವಕರಲ್ಲಿ ವೈಜ್ಞಾನಿಕ ಚಿಂತನೆ ಬಂದರೆ ಜಲ ಸಂರಕ್ಷಣೆ ಸಾಧ್ಯ ಜಿಲ್ಲಾ ನಿಕಟ ಪೂರ್ವ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದರು.

Vijaya Karnataka 24 Aug 2019, 9:33 pm
ಹಾಸನ : ಯುವಕರಲ್ಲಿ ವೈಜ್ಞಾನಿಕ ಚಿಂತನೆ ಬಂದರೆ ಜಲ ಸಂರಕ್ಷಣೆ ಸಾಧ್ಯ ಜಿಲ್ಲಾ ನಿಕಟ ಪೂರ್ವ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದರು.
Vijaya Karnataka Web HSN-HSN24 M 2


ತಾಲೂಕಿನ ಗೊರೂರು ಪ್ರವಾಸಿ ಮಂದಿರದಲ್ಲಿ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಗಹ ವಿಜ್ಞಾನ ಕಾಲೇಜು, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಹೇಮಾವತಿ ಜಲಾಶಯ ಅಣೆಕಟ್ಟೆ ವಿಭಾಗದ ವತಿಯಿಂದ ಜಲ ಸಂರಕ್ಷಣೆ ವಿಷಯದ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘‘ವಿಶ್ವದಲ್ಲಿ ನೀರಿನ ಸಮಸ್ಯೆ ದಿನ ನಿತ್ಯ ಹೆಚ್ಚಾಗುತ್ತಿದೆ. ಅಲ್ಲದೇ ವಾತಾವರಣವೂ ಕಲುಷಿತಗೊಳ್ಳುತ್ತಿದ್ದು, ಇಂತ ಹದ್ದೇ ಸ್ಥಿತಿ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ನೀರಿಗಾಗಿ ಯುದ್ಧ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ನಮ್ಮ ಯುವಕರಿಗೆ ನೀರಿನ ಮಹತ್ವದ ಬಗ್ಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ. ಪ್ರತಿ ನೀರಿನ ಹನಿಗೂ ಇರುವ ಮಹತ್ವ ತಿಳಿಸಿಕೊಡುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆ ಮಾಡುವುದರ ಕುರಿತು ತಿಳಿಸಿಕೊಡಬೇಕಾಗಿದೆ,’’ ಎಂದು ತಿಳಿಸಿದರು.

ಪ್ರಾಂಶುಪಾಲ ಮೋಹನ್‌ಕುಮಾರ್ ಮಾತ ನಾಡಿ,‘‘ಪರಿಸರ ಉಳಿಸುವಿಕೆ ಯೋಜನೆ ಪ್ರವಾಹ ಪ್ರಕತಿ ವಿಕೋಪ ಇವುಗಳ ಅಧ್ಯಯನ ಪತ್ರಿಕೋದ್ಯಮ ವಿಧ್ಯಾರ್ಥಿ ಗಳ ಜವಾಬ್ದಾರಿಯಾಗಿದೆ. ಪ್ರತಿ ಮನೆಯಲ್ಲೂ ತಮ್ಮ ವಾಹನಗಳನ್ನು ಸ್ವಚ್ಛ ಮಾಡಲು ಅಮೂಲ್ಯವಾದ ನೀರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗಿ ಈ ಹಿಂದೆ ನೀರು ಬಳಸಿ ವಾಹನ ಸ್ವಚ್ಛ ಮಾಡುತ್ತಿದ್ದರೆ ಎಂದು ಆಶ್ಚರ್ಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ,’’ ಎಂದರು.

ಸರಕಾರಿ ಗಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ.ಕಷ್ಣೇಗೌಡ ಮಾತನಾಡಿ, ‘‘ನೀರಿನ ಸದ್ಭಳಕೆ ಮಾಡಿಕೊಳ್ಳುವ ಕುರಿತು ಅಧ್ಯಾಪಕರು, ಹಿರಿಯರು ಮಕ್ಕ ಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರ ಅತ್ಯವಶ್ಯಕ ವಾಗಿದ್ದು, ಮುಂದಿನ ಸಮಾಜದ ಸುಧಾರಣೆ ಈ ಕಾರ್ಯಗಾರ ಪೂರಕವಾಗಲಿದೆ,’’ ಎಂದು ಹೇಳಿದರು.
‘‘ಹೇಮಾವತಿ ಅಣೆಕಟ್ಟೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟರವಣಪ್ಪ ಮಾತನಾಡಿ, ನೈಸರ್ಗಿಕ ಮಳೆಯಂದ ತುಂಬಿ ಹರಿಯಬೇಕಾಗಿದ್ದ ಜಲಾಶಯ ಪ್ರಕತಿ ವಿಕೋಪದಿಂದ ತುಂಬಿದೆ. ಜಲಾಶಯವು ಒಟ್ಟು 37,103 ಟಿಎಂಸಿ ನೀರಿನ ಸಂಗ್ರಹಣೆಗೆ ಅರ್ಹವಾಗಿದೆ. ಒಂದು ಸೆಕೆಂಡಿಗೆ 1 ಘನ ಅಡಿ ನೀರು ಹರಿದರೆ ಅದು 1 ಕ್ಯೂಸೆಕ್ ಹಾಗೆಯೇ 24 ಗಂಟೆಗಳ ಕಾಲ ಹರಿದರೆ 11,576 ಕ್ಯೂಸೆಕ್ ಹರಿದರೆ ಅದು 1 ಟಿಎಂಸಿ ಗೆ ಸಮ. ಎಂಬ ಮುಖ್ಯ ಮಾಹಿತಿಯ ಜೊತೆಗೆ ಕಷಿ ಇತ್ಯಾದಿ ಚಟುವಟಿಕೆಗಳಿಗೆ ಜಲಾಶಯದಿಂದ ಬಳಕೆಯಾಗುತ್ತಿದೆ,’’ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹೇಮಾವತಿ ಅಣೆಕಟ್ಟೆಯನ್ನು ವೀಕ್ಷಣೆ ಮಾಡಿದರು. ಗೊರೂರು ಪೊಲೀಸ್ ಠಾಣಾಧಿಕಾರಿ ಜಗದೀಶ್, ಅತಿಥಿ ಉಪನ್ಯಾಸಕರಾದ ಎಚ್.ಕೆ.ದಿಲೀಪ್ ಕುಮಾರ್, ಪಿ.ರವಿ, ಪತ್ರಕರ್ತ ಕುಮಾರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ