ಕಫ್ರ್ಯೂಗೆ ಜನತಾ ಚಪ್ಪಾಳೆ
ವಿಕ ಸುದ್ದಿಲೋಕ ಹಾಸನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೋಧಿದಿ ಕೊರೊನಾ ನಿಯಂತ್ರಣಕ್ಕಾಗಿ ಕರೆ ನೀಧಿಡಿಧಿದ್ದ ಜಧಿನತಾ ಕಫ್ರ್ಯೂಗೆ ಇಡೀ ಜಿಲ್ಲೆಸ್ತಂಬ್ಧಧಿವಾಧಿಗಿಧಿತ್ತು...
Vijaya Karnataka 23 Mar 2020, 5:00 am
ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೋಧಿದಿ ಕೊರೊನಾ ನಿಯಂತ್ರಣಕ್ಕಾಗಿ ಕರೆ ನೀಧಿಡಿಧಿದ್ದ ಜಧಿನತಾ ಕಫ್ರ್ಯೂಗೆ ಇಡೀ ಜಿಲ್ಲೆಸ್ತಂಬ್ಧಧಿವಾಧಿಗಿಧಿತ್ತು. ಜನತಾ ಕಫ್ರ್ಯೂ ವೇಳೆ ಜನರ ಜಧಿತೆಧಿಗೆ ಪೊಲೀಸರು ಕೂಡ ಬೀದಿಗೆ ಇಳಿಯಲ್ಲಿಲ್ಲ. ಸುಡು ಬಿಸಿಲಿನ ತಾಪಬಿಟ್ಟರೆ ಎಲ್ಲೆಲ್ಲೂನೀರವ ಆವರಿಸಿತ್ತು.
ನಗರದ ಕಲ್ಯಾಣ ಮಂಟಪದಲ್ಲಿನಧಿಡೆಧಿದ ವಿವಾಹಕ್ಕೆ ಬೆರಳೆಣಿಕೆ ಜನ ಇದ್ದದ್ದು ಕಂಡುಬಂತು. ಒಂದು ಕಲ್ಯಾಣ ಮಂಟಪದಲ್ಲಿಪೋಷಕರ ಸಮ್ಮುಖದಲ್ಲಿವರನ ಕೊಠಡಿಯಲ್ಲಿಮಾಂಗಲ್ಯ ಧಾರಣೆ ಮಾಡಲಾಯಿತು. ಭಾನುವಾರ ರಜೆ ದಿನ, ಶುಭದಿನ ಇತ್ಯಾದಿ ಕಾರಣದಿಂದ ಮದುವೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮ ನಿಗದಿಯಾಗಿತ್ತಾದರೂ, ಬಂಧುಗಳು, ಸ್ನೇಹಿತರು ಇಲ್ಲದೆ ಒಂದೆಡೆ ಬೇಸರ ಮೂಡಿಸಿದ್ದರೆ, ಎಲ್ಲಕ್ಕಿಂತ ಸಮಾಜದ ಆರೋಗ್ಯ ಮುಖ್ಯ ಅದಕ್ಕೆ ನಾವು ಕೈಜೋಡಿಸುವುದು ಸಾಮಾಜಿಕ ಜವಾಬ್ದಾರಿಯೂ ಹೌದು ಎಂಬ ಅಭಿಪ್ರಾಯ ಆಯೋಜಕರಿಂದ ಕೇಳಿಬಂತು.
ಸಂಚಾರ ಸ್ಥಗಿತ: ಜಿಲ್ಲಾಕೇಂದ್ರದಿಂದ ನಿತ್ಯ 569 ಬಸ್ಗಳು ರಾಜ್ಯದ ನಾನಾ ಭಾಗಕ್ಕೆ ಸಂಚರಿಸುತ್ತಿದ್ದು, ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿಶೇ.100 ರಷ್ಟು ಬಸ್ ಸಂಚಾರ ಸ್ಥಗಿತ ಗೊಂಡಿತ್ತು. ಬಸ್ನಿಲ್ದಾಣದಲ್ಲಿನೀರವ ಆವರಿಸಿತ್ತು.ರೈಲು ನಿಲ್ದಾಣದಲ್ಲಿಯೂ ಅದೇ ದೃಶ್ಯಗಳು ಕಂಡುಬಂತು.ನಿಲ್ದಾಣದಲ್ಲಿದ್ದ ರೈಲು ನಿಶಬ್ಧವಾಗಿತ್ತು ಇಂತಹ ವಾತಾವರಣವನ್ನು ನಾವು ಹಿಂದೆಂದೂ ಕಂಡಿರಲಿಲ್ಲಎಂದು ರೈಲ್ವೆ ಪೊಲೀಸರೊಬ್ಬರು ತಿಳಿಸಿದರು. ಹಣ್ಣು, ತರಕಾರಿ ಮಾರುಕಟ್ಟೆ ಸಂಪೂರ್ಣ ಮುಚ್ಚಲಾಗಿತ್ತು.
ರಸ್ತೆಬದಿ ಪೆಟ್ಟಿಗೆ ಅಂಗಡಿಯಿಂದ ಹಿಡಿದು ಮಾಲ್ಗಳವರೆಗೂ ಸಂಪೂರ್ಣ ಮುಚ್ಚಲಾಗಿತ್ತು.ಬದುಕಿನ ಬಂಡಿ ನಡೆಸಲು, ತುತ್ತಿನ ಚೀಲ ತುಂಬಿಕೊಳ್ಳಲು ದೈನಂದಿನ ದುಡಿಮೆಯೇ ನೆಚ್ಚಿಕೊಂಡಿದ್ದ ಸಣ್ಣ,ಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಕೂಡ ಮಾರುಕಟ್ಟೆ ಮತ್ತಿತರ ಪ್ರದೇಶದಲ್ಲಿಕಂಡುಬರಲಿಲ್ಲ. ಬಿಸಿಲಿನ ತಾಪಕ್ಕೆ ಕುಡಿಯಲು ಒಂದು ಲೋಟ ನೀರುಬೇಕು ಎಂದರೂ, ಸಿಗದಂತಾಗಿತ್ತು. ಯುಗಾದಿ ಹಬ್ಬದ ಮುನ್ನ ಭಾನುವಾರ ವ್ಯಾಪಾರ, ವಹಿವಾಟು ಭರ್ಜರಿ ಯಾಗಿರುತ್ತದೆ ಎಂಬ ನಿರೀಕ್ಷೆ ಮರೆಯಾಗಿ ಎಲ್ಲವೂ ಬಂದ್ಮಯ ವಾಗಿತ್ತು.
ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು ಕರೆ ನೀಡಿ ದ್ದರೂ ಜನತಾ ಕಫ್ರ್ಯೂನಷ್ಟು ಯಶಸ್ಸು ಕಾಣುತ್ತಿರಲ್ಲಿ. ಕೊರೊನಾ ಇನ್ನಿಲ್ಲದ ಆತಂಕ, ಭಯ ಸೃಷ್ಟಿಸಿದ್ದು, ಜಿಲ್ಲೆಗೆ ಈ ಸೋಂಕು ಕಾಲಿಡುವುದೇ ಬೇಡ ಎಂಬ ಮುನ್ನೆಚ್ಚರಿಕೆಯಿಂದ ಪ್ರತಿಯೊಬ್ಬರು ಕೈಜೋಡಿಸಿದ್ದಾರೆ.
ನಗರದ ಕಲ್ಯಾಣ ಮಂಟಪದಲ್ಲಿನಧಿಡೆಧಿದ ವಿವಾಹಕ್ಕೆ ಬೆರಳೆಣಿಕೆ ಜನ ಇದ್ದದ್ದು ಕಂಡುಬಂತು. ಒಂದು ಕಲ್ಯಾಣ ಮಂಟಪದಲ್ಲಿಪೋಷಕರ ಸಮ್ಮುಖದಲ್ಲಿವರನ ಕೊಠಡಿಯಲ್ಲಿಮಾಂಗಲ್ಯ ಧಾರಣೆ ಮಾಡಲಾಯಿತು. ಭಾನುವಾರ ರಜೆ ದಿನ, ಶುಭದಿನ ಇತ್ಯಾದಿ ಕಾರಣದಿಂದ ಮದುವೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮ ನಿಗದಿಯಾಗಿತ್ತಾದರೂ, ಬಂಧುಗಳು, ಸ್ನೇಹಿತರು ಇಲ್ಲದೆ ಒಂದೆಡೆ ಬೇಸರ ಮೂಡಿಸಿದ್ದರೆ, ಎಲ್ಲಕ್ಕಿಂತ ಸಮಾಜದ ಆರೋಗ್ಯ ಮುಖ್ಯ ಅದಕ್ಕೆ ನಾವು ಕೈಜೋಡಿಸುವುದು ಸಾಮಾಜಿಕ ಜವಾಬ್ದಾರಿಯೂ ಹೌದು ಎಂಬ ಅಭಿಪ್ರಾಯ ಆಯೋಜಕರಿಂದ ಕೇಳಿಬಂತು.
ಸಂಚಾರ ಸ್ಥಗಿತ: ಜಿಲ್ಲಾಕೇಂದ್ರದಿಂದ ನಿತ್ಯ 569 ಬಸ್ಗಳು ರಾಜ್ಯದ ನಾನಾ ಭಾಗಕ್ಕೆ ಸಂಚರಿಸುತ್ತಿದ್ದು, ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿಶೇ.100 ರಷ್ಟು ಬಸ್ ಸಂಚಾರ ಸ್ಥಗಿತ ಗೊಂಡಿತ್ತು. ಬಸ್ನಿಲ್ದಾಣದಲ್ಲಿನೀರವ ಆವರಿಸಿತ್ತು.ರೈಲು ನಿಲ್ದಾಣದಲ್ಲಿಯೂ ಅದೇ ದೃಶ್ಯಗಳು ಕಂಡುಬಂತು.ನಿಲ್ದಾಣದಲ್ಲಿದ್ದ ರೈಲು ನಿಶಬ್ಧವಾಗಿತ್ತು ಇಂತಹ ವಾತಾವರಣವನ್ನು ನಾವು ಹಿಂದೆಂದೂ ಕಂಡಿರಲಿಲ್ಲಎಂದು ರೈಲ್ವೆ ಪೊಲೀಸರೊಬ್ಬರು ತಿಳಿಸಿದರು. ಹಣ್ಣು, ತರಕಾರಿ ಮಾರುಕಟ್ಟೆ ಸಂಪೂರ್ಣ ಮುಚ್ಚಲಾಗಿತ್ತು.
ರಸ್ತೆಬದಿ ಪೆಟ್ಟಿಗೆ ಅಂಗಡಿಯಿಂದ ಹಿಡಿದು ಮಾಲ್ಗಳವರೆಗೂ ಸಂಪೂರ್ಣ ಮುಚ್ಚಲಾಗಿತ್ತು.ಬದುಕಿನ ಬಂಡಿ ನಡೆಸಲು, ತುತ್ತಿನ ಚೀಲ ತುಂಬಿಕೊಳ್ಳಲು ದೈನಂದಿನ ದುಡಿಮೆಯೇ ನೆಚ್ಚಿಕೊಂಡಿದ್ದ ಸಣ್ಣ,ಪುಟ್ಟ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಕೂಡ ಮಾರುಕಟ್ಟೆ ಮತ್ತಿತರ ಪ್ರದೇಶದಲ್ಲಿಕಂಡುಬರಲಿಲ್ಲ. ಬಿಸಿಲಿನ ತಾಪಕ್ಕೆ ಕುಡಿಯಲು ಒಂದು ಲೋಟ ನೀರುಬೇಕು ಎಂದರೂ, ಸಿಗದಂತಾಗಿತ್ತು. ಯುಗಾದಿ ಹಬ್ಬದ ಮುನ್ನ ಭಾನುವಾರ ವ್ಯಾಪಾರ, ವಹಿವಾಟು ಭರ್ಜರಿ ಯಾಗಿರುತ್ತದೆ ಎಂಬ ನಿರೀಕ್ಷೆ ಮರೆಯಾಗಿ ಎಲ್ಲವೂ ಬಂದ್ಮಯ ವಾಗಿತ್ತು.
ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು ಕರೆ ನೀಡಿ ದ್ದರೂ ಜನತಾ ಕಫ್ರ್ಯೂನಷ್ಟು ಯಶಸ್ಸು ಕಾಣುತ್ತಿರಲ್ಲಿ. ಕೊರೊನಾ ಇನ್ನಿಲ್ಲದ ಆತಂಕ, ಭಯ ಸೃಷ್ಟಿಸಿದ್ದು, ಜಿಲ್ಲೆಗೆ ಈ ಸೋಂಕು ಕಾಲಿಡುವುದೇ ಬೇಡ ಎಂಬ ಮುನ್ನೆಚ್ಚರಿಕೆಯಿಂದ ಪ್ರತಿಯೊಬ್ಬರು ಕೈಜೋಡಿಸಿದ್ದಾರೆ.