ಆ್ಯಪ್ನಗರ

ಜಾವಗಲ್‌: ಭಿನ್ನಾಭಿಪ್ರಾಯ ಮರೆತು ಗೆಲುವಿಗೆ ಸಹಕರಿಸಿ

ಜಾವಗಲ್‌: ಕಾಂಗ್ರೇಸ್‌-ಜೆಡಿಎಸ್‌ ಮೈತ್ರಿ ಪಕ್ಷ ದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಕಾಂಗ್ರೆಸ್‌ ಪಕ್ಷ ದ ಕಾರ‍್ಯಕರ್ತರು ಒಮ್ಮತದಿಂದ ಕಾರ‍್ಯ ನಿರ್ವಹಿಸಬೇಕು ಎಂದು ಸಚಿವ ಎಚ್‌.ಡಿ.ರೇವಣ್ಣ ಮನವಿ ಮಾಡಿದರು.

Vijaya Karnataka 9 Apr 2019, 5:00 am
ಜಾವಗಲ್‌: ಕಾಂಗ್ರೇಸ್‌-ಜೆಡಿಎಸ್‌ ಮೈತ್ರಿ ಪಕ್ಷ ದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಕಾಂಗ್ರೆಸ್‌ ಪಕ್ಷ ದ ಕಾರ‍್ಯಕರ್ತರು ಒಮ್ಮತದಿಂದ ಕಾರ‍್ಯ ನಿರ್ವಹಿಸಬೇಕು ಎಂದು ಸಚಿವ ಎಚ್‌.ಡಿ.ರೇವಣ್ಣ ಮನವಿ ಮಾಡಿದರು.
Vijaya Karnataka Web javagal lokasabha election congress meeting
ಜಾವಗಲ್‌: ಭಿನ್ನಾಭಿಪ್ರಾಯ ಮರೆತು ಗೆಲುವಿಗೆ ಸಹಕರಿಸಿ


ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಾಂಗ್ರೆಸ್‌ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಪಕ್ಷ ದ ಕಾರ‍್ಯಕರ್ತರಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಮೈತ್ರಿ ಅಭ್ಯರ್ಥಿ ಪರ ಒಗ್ಗಟ್ಟಿನಿಂದ ಕೆಲಸ ಮಾಡಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಕೋಮುವಾದಿ ಬಿಜೆಪಿ ದೂರವಿಡಲು ರಾಷ್ಟ್ರ ಮಟ್ಟದಲ್ಲಿ ಹಲವು ಪಕ್ಷ ಗಳು ಒಗ್ಗೂಡಿ ಬಿಜೆಪಿ ವಿರುದ್ಧ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ ಎಂದರು.

5 ವರ್ಷದ ಅಧಿಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವ, ರೈತರ ಸಮಸ್ಯೆಗಳ ಪರಿಹರಿಸುವ ಯಾವುದೇ ಗುರುತರ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿಲ್ಲ. ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡುವ ನಿಟ್ಟಿನಲ್ಲಿ ಧೃಡ ನಿಲುವು ತಾಳಿದೆ. ಮೋದಿ ಸರಕಾರ ರಾಜ್ಯದ ಅಭಿವೃದ್ಧಿಗೆ ಹಾಗೂ ಬರ ಪರಿಹಾರಕ್ಕಾಗಿ ಹೆಚ್ಚಿನ ನೆರವು ನೀಡಿಲ್ಲ ಎಂದರು.

ಕಾರ‍್ಯಕರ್ತರಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬಗೆಹರಿಸುತ್ತೇವೆ. ಎರಡು ಪಕ್ಷ ಗಳ ಕಾರ‍್ಯಕರ್ತರನ್ನು ಸಮಾನವಾಗಿ ಕಾಣುತ್ತೇನೆ. ಜಾವಗಲ್‌ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಶಿವರಾಂ, ಜವರೇಗೌಡ ತಾವು ಸೇರಿದಂತೆ ಹೆಚ್ಚಿನ ಗಮನ ಹರಿಸುತ್ತೇವೆ. ಚುನಾವಣೆಯ ನಂತರ ಹೋಬಳಿಯ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಹೈಕಮಾಂಡ್‌ ನಿರ್ದೇಶನದಂತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಪಕ್ಷ ದ ಕಾರ‍್ಯಕರ್ತರು ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕು. ಹಳೇಬೀಡು ಜಾವಗಲ್‌ ಹೋಬಳಿಗಳಿಗೆ ತ್ವರಿತವಾಗಿ ಎತ್ತಿನಹೊಳೆ ಯೋಜನೆಯ ನೀರಾವರಿ ಸೌಲಭ್ಯ, ಈ ಯೋಜನೆಯಡಿ ಪರಿಹಾರ ಸಿಗದಿರುವ 350 ರೈತರಿಗೆ ಪರಿಹಾರ, ಅಭಿವೃದ್ಧಿ ಕಾಮಗಾರಿಗಳನ್ನು 50: 50ರ ಅನುಪಾತದಲ್ಲಿ ನೀಡುವುದು, ಹಿಂದಿನ ಸರಕಾರದಲ್ಲಿ ಬಿಡುಗಡೆಯಾಗಿದ್ದ 9 ಕೋಟಿ ರೂ.ಕಾಮಗಾರಿ ಮಾದನಹಳ್ಳಿ ಗ್ರಾಮದ 2 ಕೋಟಿ ರೂಗಳ ಕಾಮಗಾರಿ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹಸರಿಬೇಕು ಎಂದು ಮನವಿ ಮಾಡಿದರು.

ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಕೆ.ಜವರೇಗೌಡ ಮಾತನಾಡಿ, ಜಾವಗಲ್‌ ಹೋಬಳಿಯ ಕಾರ‍್ಯಕರ್ತರ ಸಭೆ ಉತ್ತಮವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಶಾಸಕ ಕೆ.ಎಸ್‌.ಲಿಂಗೇಶ್‌, ಎರಡು ಪಕ್ಷ ಗಳ ಮುಖಂಡರು ಹಾಗೂ ಕಾರ‍್ಯಕರ್ತರೊಂದಿಗೆ ಸಭೆ ನಡೆಸಿ ಭಿನ್ನಾಭಿಪ್ರಾಯ ಮರೆತು ಬೂತ್‌ ಕಮಿಟಿ ರಚಿಸಿ ಒಗ್ಗಟ್ಟಿನಿಂದ ಮತಯಾಚಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ಮಾಜಿ ಪ್ರಧಾನ್‌ ಕಲ್ಲಳ್ಳಿ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ ಮೂರ್ತಿ, ಮಹಾದೇವಪ್ಪ, ತಾಪಂ ಸದಸ್ಯರಾದ ವಿಜಯಕುಮಾರ್‌, ಪ್ರಭಾಕರ್‌, ಬಸವರಾಜು, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸೃಜನ್‌ ಶಿವರಾಂ, ಜಿಲ್ಲಾ ಸೇವಾದಳ ಮುಖ್ಯ ಸಂಘಟಕ ಜೆ.ಎಸ್‌.ಶ್ರೀಕಂಠಯ್ಯ, ಜಿಪಂ ಸದಸ್ಯೆ ಲೋಲಾಕ್ಷ ಮ್ಮ, ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಜಿಪಂ ಮಾಜಿ ಉಪಾಧ್ಯಕ್ಷ ರಾಜಶೇಖರ್‌, ಮಾಜಿ ಸದಸ್ಯ ಯಶೋಧರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ಪಿಹಳ್ಳಿ ವಿರೂಪಾಕ್ಷ , ಕೃಷ್ಣಶೆಟ್ಟಿ ಧರ್ಮಪ್ಪ, ಸೋಮೇಗೌಡ, ದೇವರಾಜು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ