ಆ್ಯಪ್ನಗರ

ರೈತರ ಸಾಲ ಮನ್ನಾ ಮಾಡದ ಮೋದಿ ಜಾವಗಲ್‌

ಜಾವಗಲ್‌: ಕೇಂದ್ರ ಸರಕಾರ ಕಾಪೋರ್‍ರೇಟ್‌ ವರ್ಗದ ಜನರ ಸಾಲ ಮನ್ನಾ ಮಾಡಿದೆ ಹೊರೆತು ಬಡ ರೈತರ ಸಾಲಮನ್ನಾ ಮಾಡಲಿಲ್ಲ ಪಶುಸಂಗೋಪನಾ ಸಚಿವ ವೆಂಕಟ್‌ರಾವ್‌ ನಾಡಗೌಡ ಟೀಕಿಸಿದರು.

Vijaya Karnataka 31 Mar 2019, 5:00 am
ಜಾವಗಲ್‌: ಕೇಂದ್ರ ಸರಕಾರ ಕಾಪೋರ್‍ರೇಟ್‌ ವರ್ಗದ ಜನರ ಸಾಲ ಮನ್ನಾ ಮಾಡಿದೆ ಹೊರೆತು ಬಡ ರೈತರ ಸಾಲಮನ್ನಾ ಮಾಡಲಿಲ್ಲ ಪಶುಸಂಗೋಪನಾ ಸಚಿವ ವೆಂಕಟ್‌ರಾವ್‌ ನಾಡಗೌಡ ಟೀಕಿಸಿದರು.
Vijaya Karnataka Web javagal minister venkatarao nadagowda visit darga
ರೈತರ ಸಾಲ ಮನ್ನಾ ಮಾಡದ ಮೋದಿ ಜಾವಗಲ್‌


ಜಾವಗಲ್‌ ಪಟ್ಟಣದ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೇ ಅಲ್ಲದೆ ಇಡಿ ದೇಶದಲ್ಲಿಯೇ ಮೋದಿ ಹವಾ ಇಲ್ಲ. ಮೋದಿ ಈ ದೇಶದ ಸಾಮಾನ್ಯವರ್ಗದ ಜನತೆಗೆ ಯಾವುದೇ ಸಹಕಾರ ಮಾಡಿಲ್ಲ. ಬರೀ ಭಾಷಣದಿಂದ ಬಡಜನರ ಹೊಟ್ಟೆ ತುಂಬುವುದಿಲ್ಲ. 5 ವರ್ಷದ ಅಧಿಕಾರ ಅವಧಿಯಲ್ಲಿ ವಿದೇಶ ಪ್ರವಾಸ ಮಾಡಿದ್ದೇ ಹೆಚ್ಚಾಗಿತ್ತು ಎಂದು ದೂರಿದರು.

ಕಾಪೋರ್‍ರೇಟ್‌ ವರ್ಗದ ಜನರ ಮೇಲಿನ ಪ್ರೀತಿಯನ್ನು ದೇಶದ ಬೆನ್ನೆಲುಬಾದ ರೈತರ ಮೇಲೆ ಮೋದಿ ತೋರಿಸಲಿಲ್ಲ. ಎಲ್ಲ ನಾಗರಿಕನ ಖಾತೆಗೂ 15ಲಕ್ಷ ರೂ.ಹಣ ಜಮಾ ಮಾಡುವುದಾಗಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ನೀಡಿದ್ದ ಭರವಸೆ ಇದುವರೆಗೂ ಈಡೇರಿಸಿಲ್ಲ. ಕೇವಲ 15 ಪೈಸೆಯನ್ನು 1 ಖಾತೆಗೂ ಜಮಾ ಮಾಡಿಲ್ಲ ಎಂದು ಟೀಕಿಸಿದರು.

ದರ್ಗಾ ಕಮಿಟಿಯ ವ್ಯವಸ್ಥಾಪಕ ದಾದಾಪೀರ್‌, ಶಾಸಕ ಕೆ.ಎಸ್‌.ಲಿಂಗೇಶ್‌, ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ನಾಗನಗೌಡರ್‌, ಜಾವಗಲ್‌ ಹೋಬಳಿ ಜೆಡಿಎಸ್‌ ಅಧ್ಯಕ್ಷ ಜೆ.ಕೆ.ಸಿದ್ದೇಗೌಡ, ಜೆ.ಜಿ.ತಿಮ್ಮೇಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ