ಆ್ಯಪ್ನಗರ

ಹಾಸನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ 'ದೋಸ್ತಿ'ಗಳ ಜಟಾಪಟಿ

ಶುಕ್ರವಾರ ಹಾಸನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮಧ್ಯೆ ಜಟಾಪಟಿ ಸಂಭವಿಸಿದೆ.

Vijaya Karnataka Web 28 Sep 2018, 5:06 pm
ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಜತೆಯಾಗಿ ಸಮ್ಮಿಶ್ರ ಸರಕಾರ ರಚಿಸಿದ್ದರೂ, ಹಾಸನದಲ್ಲಿ ಮಾತ್ರ ಉಭಯ ಪಕ್ಷಗಳ ನಾಯಕರ ಮಧ್ಯೆ ಹೊಂದಾಣಿಕೆ ಕಂಡುಬಂದಿಲ್ಲ.
Vijaya Karnataka Web Hassan Zp


ಶುಕ್ರವಾರ ಹಾಸನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಮಧ್ಯೆ ಜಟಾಪಟಿ ಸಂಭವಿಸಿದೆ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ‌ ಸಭೆಯಲ್ಲಿ ಮಾತಿನ‌ ಚಕಮಕಿ ಉಂಟಾಗಿದ್ದು, ಉಭಯ ಪಕ್ಷಗಳು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಸಚಿವ ರೇವಣ್ಣ ಪತ್ನಿ ಜೆಡಿಎಸ್‌ನ ಭವಾನಿ ರೇವಣ್ಣ ಹಾಗು ಮಾಜಿ ಸಚಿವ ಎ ಮಂಜು ಪುತ್ರ ಮಂಥರ್ ಗೌಡ ನಡುವೆ ವಾಕ್ಸಮರ ಉಂಟಾಗಿದ್ದು, ಸ್ಥಾಯಿ ಸಮಿತಿಗಳಿಗೆ ನಡೆದಿರುವ‌ ಅವಿರೋಧ ಆಯ್ಕೆ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭ ಸಮ್ಮಿಶ್ರ ಸರಕಾರದ ಬಗ್ಗೆ ಪ್ರಸ್ತಾಪವಾಗಿದ್ದು, ಸರಕಾರದ ವಿಚಾರ ಇಲ್ಲಿ ಬೇಡಾ ಅದಕ್ಕೆ ವಿದಾನಸೌಧ ಇದೆ, ದೊಡ್ಡವರಿದ್ದಾರೆ. ದೊಡ್ಡವರು ಸರಕಾರದ ಬಗ್ಗೆ ಮಾತನಾಡ್ತಾರೆ ಎಂದು ಎಂದು‌‌ ಭವಾನಿ‌‌ ರೇವಣ್ಣ ಆವಾಜ್ ಹಾಕಿದ್ದಾರೆ. ಭವಾನಿ ರೇವಣ್ಣ ಮಾತಿಗೆ ಕಾಂಗ್ರೆಸ್‌ನ ಕೆಲ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಜೆಡಿಎಸ್‌ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ಸೃಷ್ಟಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ