ಆ್ಯಪ್ನಗರ

ಜೆಡಿಎಸ್‌ ಪಪ್ಪು ಪ್ರಜ್ವಲ್‌: ಶಾಸಕ ಪ್ರೀತಂ ವಾಗ್ದಾಳಿ

ಕಾಂಗ್ರೆಸ್‌ ರಾಷ್ತ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹೇಗೆ ರಾಷ್ಟ್ರಮಟ್ಟದಲ್ಲಿ ಪಪ್ಪು ಆಗಿದ್ದಾರೋ, ರಾಜ್ಯ ಜೆಡಿಎಸ್‌ನಲ್ಲಿ ಪ್ರಜ್ವಲ್‌ ಸಹ 'ಪಪ್ಪು' ಎಂದು ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ವಾಗ್ದಾಳಿ ನಡೆಸಿದರು.

Vijaya Karnataka 1 Feb 2019, 5:00 am
ಹಾಸನ: ಕಾಂಗ್ರೆಸ್‌ ರಾಷ್ತ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹೇಗೆ ರಾಷ್ಟ್ರಮಟ್ಟದಲ್ಲಿ ಪಪ್ಪು ಆಗಿದ್ದಾರೋ, ರಾಜ್ಯ ಜೆಡಿಎಸ್‌ನಲ್ಲಿ ಪ್ರಜ್ವಲ್‌ ಸಹ 'ಪಪ್ಪು' ಎಂದು ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ವಾಗ್ದಾಳಿ ನಡೆಸಿದರು.
Vijaya Karnataka Web jdss pappu is prajwal preetham
ಜೆಡಿಎಸ್‌ ಪಪ್ಪು ಪ್ರಜ್ವಲ್‌: ಶಾಸಕ ಪ್ರೀತಂ ವಾಗ್ದಾಳಿ


ಸುದ್ದಿಗಾರರ ಜತೆ ಮಾತನಾಡಿದ ಅವರು, ''ಇನ್ನು ಮುಂದೆ ಪ್ರಜ್ವಲ್‌ ರೇವಣ್ಣ 'ಪಿ' ಫಾರ್‌ ಪಪ್ಪು ಆಗಿದ್ದಾರೆ. ಇವರು ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು,'' ಎಂದು ತಮ್ಮ ವಿರುದ್ಧದ ಆರೋಪದ ಬಗ್ಗೆ ತಿರುಗೇಟು ನೀಡಿದರು.

''ಇವರಿಗೆ ಎಷ್ಟು ಫೇಸ್‌ಬುಕ್‌ ಅಭಿಮಾನಿಗಳಿದ್ದಾರೋ ಅದರ ಹತ್ತು ಪಟ್ಟು ನಮಗೂ ಇದ್ದಾರೆ. ಆದರೆ ನಾವು ಅವರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ,'' ಎಂದರು.

ಸರಕಾರಿ ಕಾರು ದುರ್ಬಳಕೆ ಆರೋಪಕ್ಕೆ ತಿರುಗೇಟು ನೀಡಿ, ''ಪ್ರಜ್ವಲ್‌ ರೇವಣ್ಣ ಅವರ ಅಭಿಮಾನಿಗಳು ಫೇಸ್‌ಬುಕ್‌ನಲ್ಲಿ ಸುಳ್ಳು ಸಮರ್ಥನೆ ನೀಡುತ್ತಿದ್ದಾರೆ. ನಂದಿ ಸವೀರ್‍ಸ್‌ ಸೆಂಟರ್‌ನಲ್ಲಿ ಕಾರು ಬಿಟ್ಟಿರುವುದಾಗಿ ರಶೀದಿ ಹಾಕಿದ್ದಾರೆ. ದಾರಿ ಮಧ್ಯದಲ್ಲಿ ಕಾರು ಕೆಟ್ಟಿದೆ ಎಂದಾದರೇ ಅರ್ಧ ಗಂಟೆಯಲ್ಲಿ ಹೇಗೆ ಬೆಂಗಳೂರಿನ ಸವೀರ್‍ಸ್‌ ಸೆಂಟರ್‌ಗೆ ಬಿಡಲು ಸಾಧ್ಯ? ಮಕ್ಕಳು ಪೆನ್ಸಿಲ್‌ ಕಳೆದುಕೊಂಡಾಗ ಕಥೆ ಕಟ್ಟುವಂತೆ ಕಥೆ ಹೇಳುತ್ತಿದ್ದಾರೆ. ಜಿಲ್ಲೆ ಜನತೆ ಬುದ್ಧಿವಂತರಿದ್ದಾರೆ. ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ,'' ಎಂದರು.

''ಪ್ರಜ್ವಲ್‌ ರೇವಣ್ಣಾಗೆ ಅಭದ್ರತೆ ಶುರುವಾಗಿದೆ. ರಾಹುಲ್‌ಗಾಂಧಿ ಹೇಗೆ ರಫೇಲ್‌ ಬಗ್ಗೆ ಮಾತನಾಡುತ್ತಾರೋ, ಹಾಗೆ ಇವರು ಪ್ರತಿ ಕಾರ್ಯಕ್ರಮದಲ್ಲೂ ನನ್ನ ಜಪ ಮಾಡಲು ಶುರು ಮಾಡಿದ್ದಾರೆ,'' ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ