ಆ್ಯಪ್ನಗರ

ಪರಿಸರ ಸಂರಕ್ಷಿಸದಿದ್ದರೆ ಸಕಲ ಜೀವರಾಶಿಗಳಿಗೆ ಅಪಾಯ

ಪರಿಸರ ಸಂರಕ್ಷ ಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಎಲ್ಲರೂ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರೂ ಆದ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ನಿರ್ಮಲಾ ಕೆ. ಹೇಳಿದರು.

Vijaya Karnataka 24 Apr 2019, 5:00 am
ಅರಸೀಕೆರೆ: ಪರಿಸರ ಸಂರಕ್ಷ ಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಎಲ್ಲರೂ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರೂ ಆದ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ನಿರ್ಮಲಾ ಕೆ. ಹೇಳಿದರು.
Vijaya Karnataka Web HSN-HSN23ASK2


ತಾಲೂಕಿನ ಬಾಣಾವರ ಗ್ರಾಮದ ಪಂಚಾಯಿತಿ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ ಪೊಲೀಸ್‌ ಇಲಾಖೆ, ಭಾರತ್‌ ಸ್ಕೌಡ್ಸ್‌ ಅಂಡ್‌ ಗೈಡ್ಸ್‌, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಹಯೋಗದೊಂದಿಗೆ ನಡæದ ವಿಶ್ವ ಭೂ ಸಂರಕ್ಷ ಣಾ ದಿನಾಚರಣೆ ಅಂಗವಾಗಿ ನಡæದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತ ಆತಂಕ ಸೃಷ್ಟಿ ಮಾಡುತ್ತಿದೆ. ಇದಕ್ಕೆ ಪರಿಸರದ ಮೇಲಿನ ಆಕ್ರಮಣವೇ ಕಾರಣವಾಗಿದೆ. ಪರಿಸರ ಉಳಿಸಿ ಬೆಳೆಸುವಲ್ಲಿ ಎಲ್ಲರಲ್ಲೂ ಆಸಕ್ತಿಗಿಂತ ನಿರ್ಲಕ್ಷ ವೇ ಹೆಚ್ಚಿದ್ದು ಈ ಬೆಳವಣಿಗೆಯೂ ಹೀಗೇ ಮುಂದುವರೆದರೇ ಮುಂದೊಂದು ದಿನ ಭೂಮಿಯ ಮೇಲೆ ಜೀವರಾಶಿಗಳ ಉಳಿವು ಇಲ್ಲದೇ ಹೋಗಲಿದೆ ಎಂದರು.

ತಹಸೀಲ್ದಾರ್‌ ಸಂತೋಷ್‌ಕುಮಾರ್‌ ಮಾತನಾಡಿ, ನಮ್ಮ ತಾಲೂಕಿನಲ್ಲಿ ಅಂತರ್ಜಲಮಟ್ಟ ಕುಸಿದಿದ್ದು ಕುಡಿಯುವ ನೀರಿಗಾಗಿ ಪರಿತಪಿಸುವಂತ್ತಾಗಿದೆ. ಪರಿಸರ ಉಳಿಸಿದರೇ ಎಲ್ಲವೂ ಸಿಗಲಿದ್ದು ಈ ನಿಟ್ಟಿನಲ್ಲಿ ಮರಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಮಳೆ ನೀರನ್ನು ಸಮರ್ಪಕವಾಗಿ ಬಳಸುವಲ್ಲಿ ಎಲ್ಲರೂ ಗಮನಹರಿಸುವ ಜೊತೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುವಂತೆ ಹೇಳಿದರು.

ಇಓ ಕೃಷ್ಣಮೂರ್ತಿ ಮಾತನಾಡಿ, ಪರಿಸರ ನಮ್ಮ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ ಆದರೇ ನಾವು ಪರಿಸರಕ್ಕೆ ಏನನ್ನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನಿಜವಾದ ಅರಿವಾಗಲಿದೆ. ಪರಿಸರದ ಮೇಲಿನ ದಾಳಿಯಿಂದ ಮನುಷ್ಯ ಅನಾರೋಗ್ಯವನ್ನು ಹೊಂದುತ್ತಿದ್ದಾನೆ ಎಂದರು.

ಅರಸನ ಬಾವಿ ಸ್ವಚ್ಛತೆ: ಬಾಣಾವರದ ಅರಸನ ಬಾವಿ ಮತ್ತು ತುಳಸಿ ಬಾವಿ ಸೇರಿದಂತೆ ಕೆಲವು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ವಕೀಲರು, ತಹಸೀಲ್ದಾರರು ಸೇರಿದಂತೆ ಸಾರ್ವಜನಿಕರು ಕೈಜೋಡಿಸಿ ಶ್ರಮದಾನ ಮಾಡಿದರು.

ಕಾರ್ಯಕ್ರಮದಲ್ಲಿ 1ನೇ ಅಪರ ಸಿವಿಲ್‌ ನ್ಯಾಯಾಧೀಶೆ ದೀಪಾ, ಅಮಿತ್‌ ಗಟ್ಟಿ, ವಕೀಲರ ಸಂಘದ ಅಧ್ಯಕ್ಷೆ ಕೆ.ಎಸ್‌. ಲೋಕೇಶ್‌, ಕಾರ್ಯದರ್ಶಿ ಎಚ್‌.ಎಸ್‌. ಗೀತಾ. ಯೋಗೀಶಚಾರ್‌, ವಕೀಲ ಕಲ್ಯಾಣ್‌ಕುಮಾರ್‌, ರೂಪ, ತಾ.ಪಂ. ಸದಸ್ಯೆ ಲಕ್ಷ್ಮೀ ಶ್ರೀಧರ್‌, ನಗರಸಭೆ ಪೌರಾಯುಕ್ತ ಚಲಪತಿ, ಟಿ.ಎಚ್‌.ಓ ನಾಗಪ್ಪ, ಕಾಂಚನ, ಭಾರತ್‌ ಸ್ಕೌಡ್ಸ್‌ ಅಂಡ್‌ ಗೈಡ್ಸ್‌ ಏಕಲವ್ಯ ಓಪನ್‌ ಗ್ರೂಫ್ಸ್‌, ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ