ಆ್ಯಪ್ನಗರ

ಚನ್ನರಾಯಪಟ್ಟಣ: 6 ತಿಂಗಳೊಳಗೆ ಜುಟ್ಟನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣ

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹಾಗೂ ಶ್ರವಣಬೆಳಗೊಳ ಹೋಬಳಿ ಸೇರಿದಂತೆ ಕೆ.ಆರ್‌.ಪೇಟೆ ತಾಲೂಕಿನ ಹಲವು ಭಾಗಗಳ 22 ಕೆರೆಗಳನ್ನು ತುಂಬಿಸುವ 57 ಕೋಟಿ ರೂ. ವೆಚ್ಚದ ಜುಟ್ಟನಹಳ್ಳಿ ಏತನೀರಾವರಿ ಯೋಜನೆ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

Vijaya Karnataka 1 Jan 2019, 5:00 am
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹಾಗೂ ಶ್ರವಣಬೆಳಗೊಳ ಹೋಬಳಿ ಸೇರಿದಂತೆ ಕೆ.ಆರ್‌.ಪೇಟೆ ತಾಲೂಕಿನ ಹಲವು ಭಾಗಗಳ 22 ಕೆರೆಗಳನ್ನು ತುಂಬಿಸುವ 57 ಕೋಟಿ ರೂ. ವೆಚ್ಚದ ಜುಟ್ಟನಹಳ್ಳಿ ಏತನೀರಾವರಿ ಯೋಜನೆ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.
Vijaya Karnataka Web juttanahalli lift irrigation mla inspection
ಚನ್ನರಾಯಪಟ್ಟಣ: 6 ತಿಂಗಳೊಳಗೆ ಜುಟ್ಟನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣ


ತಾಲೂಕಿನ ಕೆ.ಕಾಳೇನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಜಾಕ್‌ವೆಲ್‌ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಗುತ್ತಿಗೆದಾರರು ಹಾಗೂ ಇಲಾಖೆ ನಡುವೆ ಇದ್ದ ಗೊಂದಲ ಬಗೆಹರಿದಿದೆ. 800 ಎಚ್‌ಪಿ ಸಾಮರ್ಥ್ಯ‌ದ ನಾಲ್ಕು ಮೋಟಾರ್‌ಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇದರಲ್ಲಿ ಒಂದು ಮೋಟಾರ್‌ ಅನ್ನು ತುರ್ತುಪರಿಸ್ಥಿತಿಯಲ್ಲಿ ಮಾತ್ರ ಬಳಸಲಾಗುವುದು. ಜನಿವಾರ ಕೆರೆಯಿಂದ 46 ಕ್ಯೂಸೆಕ್ಸ್‌ ನೀರನ್ನು ಈ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದು ಬಸವನಹಳ್ಳಿ ತನಕ 9.5 ಕಿಮೀ ಪೈಪ್‌ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಚಲ್ಯ ಮಾರ್ಗವಾಗಿ 1.8 ಕಿಮೀ ಕಾಮಗಾರಿ ಉಳಿದಿದ್ದು ಬಸವನಹಳ್ಳಿಯಿಂದ ಹಿರೀಸಾವೆ, ಮತಿಘಟ್ಟ ಕೆರೆಗಳಿಗೆ ತೆರೆದ ನಾಲೆಯ ಮೂಲಕವೇ ನೀರು ಹರಿಸಲಾಗುವುದು ಎಂದರು.

ಈ ವ್ಯಾಪ್ತಿಯಲ್ಲಿ 2.3 ಕಿಮೀ ಅರಣ್ಯ ಇಲಾಖೆಗೆ ಸೇರಿದ ಜಾಗವಿದ್ದು ಆ ಜಾಗವನ್ನು ಪಡೆಯಲು ಪರಾರ‍ಯಯವಾಗಿ ಕೋರೇನಹಳ್ಳಿ ಬಳಿ 9 ಎಕರೆ ಜಾಗವನ್ನು ನೀಡಲು ಈಗಾಗಲೇ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆಸಲಾಗಿದೆ. ರೈಲ್ವೆ ಇಲಾಖೆಗೂ ನಿಗಮದಿಂದ 97 ಲಕ್ಷ ರೂ. ನೀಡಿದ್ದು ಯಾವುದೇ ಅಡ್ಡಿಯಿಲ್ಲದೆ ಕಾಮಗಾರಿ ನಡೆಯಲು ಅನುಕೂಲ ಮಾಡಿಕೊಳ್ಳಲಾಗಿದೆ. ಯೋಜನೆಗಾಗಿ 18 ಗ್ರಾಮಗಳ 260 ರೈತರು ಸುಮಾರು 40 ಎಕರೆ ಜಾಗ ನೀಡಿದ್ದಾರೆ. ಪ್ರತಿ ತೆಂಗಿನ ಮರಕ್ಕೆ 26 ಸಾವಿರ ರೂ. ಅಲ್ಲದೆ ಜಾಗಕ್ಕೆ ಬೇರೆ ಪರಿಹಾರ ನೀಡಲಾಗುವುದು. ಒಟ್ಟು 8 ಕೋಟಿ ರೂ. ಪರಿಹಾರ ಮೊತ್ತ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎಂದರು.

ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯವಾದ ವಿದ್ಯುತ್‌ ಒದಗಿಸಲು 2 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಲೈನ್‌ ಅಳವಡಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಜಾಕ್‌ವೆಲ್‌ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಭಾಗದ ರೈತರ ಸಹಕಾರದಿಂದ ಕಾಮಗಾರಿ ಬೇಗ ಮುಗಿಯಲು ಸಾಧ್ಯವಾಗಿದೆ. ನುಗ್ಗೇಹಳ್ಳಿ ಏತನೀರಾವರಿ ಯೋಜನೆಯ ಕಾಮಗಾರಿ 1600 ಮೀ ಬಾಕಿ ಇದ್ದು 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಲ್ಲೇಸೋಮನಹಳ್ಳಿ ಯೋಜನೆಗೆ ಫೆಬ್ರವರಿಯಲ್ಲಿ ಕಾರಾರ‍ಯದೇಶ ಕೊಡಿಸಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ