ಆ್ಯಪ್ನಗರ

Karnataka Elections 2023: ಹಾಸನದಲ್ಲಿ ಗೆಲ್ಲೋದು ನಾವೇ; ನನ್ನ ಊರು ಬಿಡಿಸ್ತೀನಿ ಎಂದವರು ಎಲ್ಲಿರ್ತಾರೆ ನೋಡ್ತೀನಿ: ಪ್ರೀತಂ ಗೌಡ

Preetham Gowda in Hassan: ಕರ್ನಾಟಕ ಚಚುನಾವಣೆಯ ಮತದಾನ ಅಂತ್ಯವಾಗಿದ್ದು, ಈಗ ಫಲಿತಾಂಶದತ್ತ ಎಲ್ಲರ ಚಿತ್ತ ಹರಿದಿದೆ. ಕಳೆದ ಎರಡು ಮೂರು ತಿಂಗಳಿನಿಂದ ಭಾರೀ ಚರ್ಚೆಯಲ್ಲಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಹೇಳಿದ್ದಾರೆ. ಅದಲ್ಲದೇ ಊರು ಬಿಡಿಸ್ತೀನಿ ಎಂದವರು ಎಲ್ಲಿರುತ್ತಾರೆ ನೋಡ್ತೀನಿ ಎಂದು ಹೇಳಿದ್ದಾರೆ. ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 11 May 2023, 6:48 pm

ಹೈಲೈಟ್ಸ್‌:


  • ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರೀತಂ ಗೌಡ
  • ಬಿಜೆಪಿ ಗೆಲುವು ನಿಶ್ಚಿತ; ಊರು ಬಿಡಿಸೋರು ಎಲ್ಲಿರುತ್ತಾರೆ ನೋಡ್ತೀನಿ ಎಂದು ಟಾಂಗ್‌
  • ಏನೇನು ಮಾಡಿದ್ರೂ ನನ್ನ ಹತ್ತಿರ ಬರೋಕು ಆಗಲಿಲ್ಲ ಎಂದ ಹಾಸನ ಶಾಸಕ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web MLA Preetham gowda
ಹಾಸನ: ಯಾರೋ ಊರು ಬಿಡಿಸ್ತೀನಿ ಅಂದಿದ್ದರು. ಅವರು ಯೋಚನೆ ಮಾಡಿ ಮಾತಾಡುವಂತೆ ಚುನಾವಣೆ ಫಲಿತಾಂಶ ಬರುತ್ತದೆ. ಆ ಬಳಿಕ ಯಾರ‍್ಯಾರು ಎಲ್ಲೆಲ್ಲಿ ಇರ್ತಾರೆ ನೋಡಿ ಎಂದು ಬಿಜೆಪಿ ಅಭ್ಯರ್ಥಿ ಶಾಸಕ ಪ್ರೀತಂ ಜೆ ಗೌಡ ಹೇಳಿದ್ದಾರೆ.
ಮತದಾನದ ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, 2018ರ ಚುನಾವಣೆಯಲ್ಲಿ ಓರ್ವ ಯುವಕ ಎಂದು ಮತ ಕೊಟ್ಟಿದ್ದರು. ಈ ಬಾರಿ ಕೆಲಸಗಾರ ಎಂದು ಮತ ಕೊಟ್ಟಿದ್ದಾರೆ. ಯಾರು ಜನರಿಗೆ ತೊಂದರೆ ಮಾಡಿದ್ದಾರೆ, ಪಾಳೆಗಾರಿಕೆ ಮಾಡ್ತಾ ಇದ್ದಾರೆ, ಅವರ ವಿರುದ್ಧ ಓರ್ವ ರಾಜಕಾರಣ ಮಾಡಬೇಕು ಎಂದು ಜನ ಮತ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.


ಜಾತಿ, ಮತ ಮೀರಿ ಅಭಿವೃದ್ಧಿ ಪರ ಜನರು ಮತ ಚಲಾಯಿಸಿದ್ದಾರೆ. ಬಹುತೇಕ ವರ್ಗದ ಜನ ನನಗೆ ಬೆಂಬಲ ನೀಡಿದ್ದು, ನಾನೇ ಗೆಲ್ಲುವೆ ಎಂದು ಹೇಳಿದ ಶಾಸಕ ಪ್ರೀತಂ ಗೌಡ, ಮತದಾನದ ಶೇಕಡವಾರು ಲೆಕ್ಕ ಬರೆದಂತೆಲ್ಲಾ ಜಾಸ್ತಿ ಆಗ್ತಾ ಇದೆ, ಹಾಗಾಗಿ ಪೂರ್ಣ ಲೆಕ್ಕ ಹಾಕಿಲ್ಲ. ಹಾಸನಾಂಬೆ ಆಶೀರ್ವಾದದಿಂದ ಯಾರೂ ಊಹೆ ಮಾಡಿರದ ರೀತಿ ಹಾಸನದ ಫಲಿತಾಂಶ ಬರಲಿದೆ ಎಂದರು.

Karnataka Elections 2023: ಅಭ್ಯರ್ಥಿ ನೆಪದಲ್ಲಿ'ಕುಟುಂಬ' ಪ್ರತಿಷ್ಠೆ ಪಣಕ್ಕೆ, ದೊಡ್ಡಗೌಡರ ಕುಟುಂಬ ವರ್ಸಸ್‌ ಪ್ರೀತಂ ಗೌಡ

ನನ್ನ ಹತ್ತಿರ ಕೂಡ ಬರೋಕೆ ಆಗಲಿಲ್ಲ!

ನಾವು ಚುನಾವಣೆ ಮಾಡಿರೋದು ಮಾಜಿ ಪ್ರಧಾನಿ, ಮಾಜಿ ಸಿಎಂ, ಮಾಜಿ ಸಚಿವರು, ಎಂಪಿ, ಎಂಎಲ್‌ಸಿ, ನಾಲ್ಕು ಬಾರಿ ಶಾಸಕರಾದವರ ಮಗನ ವಿರುದ್ಧ. ಇಡೀ ಜೆಡಿಎಸ್ ನಾಯಕರೆಲ್ಲಾ ಹಾಸನದಲ್ಲಿ ಚುನಾವಣೆ ಮಾಡಿದ್ದಾರೆ. ಅವರ ಲೆಕ್ಕಾಚಾರ ಎಲ್ಲಾ ಉಲ್ಟಾ ಆಗಿವೆ. ಇಷ್ಟೆಲ್ಲಾ ಒಂದಾಗಿ, ಅನುಕಂಪದ ಅಲೆ ತೋರಿಸಿ, ಇಡೀ ಕುಟುಂಬ ಬಂದು ಚುನಾವಣೆ ಮಾಡಿದ ಮೇಲೂ ಅವರು ಹತ್ತಿರ ಕೂಡ ಬರೋಕೆ ಆಗಲಿಲ್ಲ ಎಂದರು.

Karnataka Elections 2023: ರಾಜ್ಯದಲ್ಲಿ ಈ ಬಾರಿ ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ: ಕುಮಾರಸ್ವಾಮಿ
ಹಾಸನದ ಜನರು, ಅವರು ಮಾಡಿದ ಕೆಲಸ ಆಡಿದ ಮಾತಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು. ಅದಲ್ಲದೇ ಹಾಸನಾಂಬೆ ಆಶೀರ್ವಾದ, ಕಾರ್ಯಕರ್ತರ ಸಹಕಾರ ನೀಡಿ ಗಟ್ಟಿಯಾಗಿ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಿದ್ದು, ಗೆಲುವು ನಮ್ಮದೆ ಎಂದು ಪ್ರೀತಂ ಗೌಡ ಹೇಳಿದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ