ಆ್ಯಪ್ನಗರ

ಸಾರಿಗೆ ಮುಷ್ಕರ: ಖಾಸಗಿ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ ಹಾಸನ ಆರ್ ಟಿ ಓ ಅಧಿಕಾರಿ!

ಸಾರಿಗೆ ಬಸ್ ಮುಷ್ಕರದಿಂದಾಗಿ ದುಬಾರಿ ಹಣ ಪಡೆಯುತ್ತಿದ್ದ ಖಾಸಗಿ ವಾಹನ ಮಾಲೀಕರಿಗೆ ಆರ್ ಟಿ ಓ ಅಧಿಕಾರಿ ವಾರ್ನಿಂಗ್ ನೀಡಿದ್ದಾರೆ. ​​ ಹಾಸನದಿಂದ ಬೆಂಗಳೂರಿಗೆ ಖಾಸಗಿ ವಾಹನದಲ್ಲಿ 500 ದರ ನಿಗದಿಯಾಗಿದೆ. ಇನ್ನು ಮೈಸೂರಿಗೆ 300 ನಿಗದಿ ಮಾಡಿದ್ದು, ಪ್ರಯಾಣಿಕರು ಖಾಸಗಿ ವಾಹನಗಳ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Vijaya Karnataka Web 8 Apr 2021, 3:58 pm
ಹಾಸನ: ದುಬಾರಿ ಹಣ ಪಡೆಯುತ್ತಿದ್ದ ಖಾಸಗಿ ವಾಹನಗಳ ಮಾಲೀಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾರ್ನಿಂಗ್ ಕೊಟ್ಟು ದುಬಾರಿ ಹಣ ಪಡೆದರೆ ವಾಹನದ ಪರವಾನಿಗೆ ಬಂದ್ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿರುವ ಘಟನೆ ಹಾಸನ ನಗರದ ನರಸಿಂಹರಾಜ ವೃತ್ತದಲ್ಲಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಎರಡನೇ ದಿನವೂ ಹಾಸನದಲ್ಲಿ ಪ್ರತಿಭಟನೆ ಮುಂದುವರೆದಿದ್ದು ಸಾರಿಗೆ ಅಧಿಕಾರಿಗಳ ಮಾತಿಗೆ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ. ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ಮುಂದುವರೆದ ಕಾರಣ ಹಾಸನ ಸಾರಿಗೆ ಬಸ್ಸು ಇಲ್ಲದೆ ಸ್ತಬ್ಧವಾಗಿದೆ.

ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ದರ ನೀಡಿ ನಗರಕ್ಕೆ ಹಾಗೂ ನಗರದಿಂದ ಹೊರ ಪ್ರದೇಶಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಗ್ರಾಮೀಣ ಭಾಗದಿಂದ ಬರುವ ಕಾಲೇಜು ವಿದ್ಯಾರ್ಥಿಗಳು ವರ್ಷಪೂರ್ತಿ ಸಾರಿಗೆ ಪಾಸ್ ಪಡೆದರು ಕೂಡ ಇಂದಿನ ಪರಿಸ್ಥಿತಿಗೆ ಆಟೋ ಅಥವಾ ಖಾಸಗಿ ಟೆಂಪೊ ಮೂಲಕ ಆಗಮಿಸುತ್ತಿದ್ದು ಹಣಕೊಟ್ಟು ಕಾಲೇಜಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನದಿಂದ ಬೆಂಗಳೂರಿಗೆ ಖಾಸಗಿ ವಾಹನದಲ್ಲಿ 500 ದರ ನಿಗದಿಯಾಗಿದೆ. ಇನ್ನು ಮೈಸೂರಿಗೆ 300 ನಿಗದಿ ಮಾಡಿದ್ದು, ಪ್ರಯಾಣಿಕರು ಖಾಸಗಿ ವಾಹನಗಳ ಮಾಲೀಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಪರಿಸ್ಥಿತಿ ಒತ್ತಡದಿಂದ ದುಬಾರಿ ಹಣ ನೀಡಿ ತಮ್ಮ ತಮ್ಮ ಕೆಲಸಗಳಿಗೆ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಪ್ರಯಾಣಿಕರು ಅಸಹಾಯಕರಾಗಿದ್ದಾರೆ.

ಹೀಗಾಗಿ ಹಾಸನದ ಬಸ್ ನಿಲ್ದಾಣ ಹಾಗೂ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಆರ್ ಟಿ ಓ ಅಧಿಕಾರಿಗಳು ಭೇಟಿ ನೀಡಿ ಖಾಸಗಿ ವಾಹನಗಳಿಗೆ ಇಂದು ವಾರ್ನಿಂಗ್ ಮಾಡಿದ್ದಾರೆ. ಹಾಸನ ಜಿಲ್ಲೆಯ ರಸ್ತೆ ರಾಷ್ಟ್ರೀಕರಣವಾಗಿರುವುದರಿಂದ ನಿಮ್ಮಲ್ಲಿ ಕಾಂಪಿಟೇಷನ್ ಬೇಡ. ಅನುಸರಿಸಿಕೊಂಡು ಹೋಗಿ ಇಲ್ಲದಿದ್ದರೆ ನಾಳೆಯಿಂದ ನೀವು ಕೂಡ ಓಡಾಡದಂತೆ ನಿರ್ಬಂಧ ಹೇರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ