ಆ್ಯಪ್ನಗರ

ಕರ್ತವ್ಯ ಲೋಪವಾದರೆ ಕಠಿಣ ಕ್ರಮ:ಸಿಇಒ

ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ಕೆಲವು ಪಿಡಿಒಗಳು ಕರ್ತವ್ಯ ಲೋಪವೆಸಗುತ್ತಿದ್ದುಘಿ, ಸರಿಪಡಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ಎನ್ ವಿಜಯ್ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

Vijaya Karnataka 17 Jun 2019, 9:31 pm
ಹಾಸನ: ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ಕೆಲವು ಪಿಡಿಒಗಳು ಕರ್ತವ್ಯ ಲೋಪವೆಸಗುತ್ತಿದ್ದುಘಿ, ಸರಿಪಡಿಸಿಕೊಳ್ಳದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ಎನ್ ವಿಜಯ್ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web HSN-HSN17M7


ಜಿಪಂ ಹೇಮಾವತಿ ಸಭಾಂಗಣದಲ್ಲಿ ಸೋಮವಾರ ಸ್ವಚ್ಚ ಮೇವ ಜಯತೆ ಕಾರ‌್ಯಕ್ರಮದ ಅಂಗವಾಗಿ ಘನ -ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

‘‘ಗ್ರಾಪಂಗಳಲ್ಲಿನ ಯೋಜನೆಗಳ ಅನುಷ್ಠಾನದಲ್ಲಿ ಅತ್ಯಂತ ಜಾಗರೂಕತೆ ವಹಿಸ ಬೇಕು. ಕರ್ತವ್ಯ ಲೋಪ ಬಂದರೆ ಸಂಬಂಧಪಟ್ಟ ಪಿಡಿಒ, ಅಧಿಕಾರಿಗಳನ್ನು ಜವಾಬ್ದಾರ ರನ್ನಾಗಿ ಮಾಡಲಾಗುವುದು. ಗ್ರಾಮೀಣ ಭಾಗದ ಜನರಿಗೆ ಅದರಲ್ಲಿಯೂ ಜಿಪಂ ಮತ್ತು ಗ್ರಾಪಂ ಮಟ್ಟದಲ್ಲಿ ಸಾರ್ವ ಜನಿಕ ಬೇಡಿಕೆಗಳನ್ನು ಮತ್ತು ಸವಲತ್ತುಗಳನ್ನು ನೀಡುವಲ್ಲಿ ವಿಳಂಬ ಸಲ್ಲದು, ಸಾರ್ವಜನಿಕ ಕುಂದು ಕೊರತೆಗಳನ್ನು ಶೀಘ್ರವಾಗಿ ನಿವಾರಿಸಬೇಕು. ಸವಲತ್ತುಗಳಿಗಾಗಿ ಸಾರ್ವಜನಿಕರನ್ನು ಅಲೆಸದಂತೆ ನಿಗಾವಹಿಸಬೇಕು,’’ ಎಂದು ಸೂಚನೆ ನೀಡಿದರು.

‘‘ಜಿಲ್ಲೆಯಲ್ಲಿ ಎಲ್ಲಾ ಅಭಿವದ್ಧಿ ಕಾರ್ಯಗಳು ಬಗ್ಗೆ ಅರಿವು ಮೂಡಿಸಲು ಜಾಗತಿ ಜಾಥಾದಂತಹ ಅರಿವು ಕಾರ‌್ಯ ಕ್ರಮಗಳು ನಡೆಯಬೇಕು. ಎಷ್ಟೇ ಒತ್ತಡವಿದ್ದರೂ ಜಿಲ್ಲೆಗೆ ಒಂದು ಉತ್ತಮ ಹೆಸರು ತರುವಲ್ಲಿ ಪ್ರಯತ್ನಿ ಸೋಣ,’’ ಎಂದು ಸಲಹೆ ನೀಡಿದರು.

‘‘ಗ್ರಾಪಂಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ಇರಿಸಿಕೊಳ್ಳುವಂತೆ ಹಾಗೂ ವ್ಯತ್ಯಾಸಗಳಿ ದ್ದರೆ ಶೀಘ್ರವಾಗಿ ಸರಿಪಡಿಸಿಕೊಳ್ಳಬೇಕು. ಪ್ರತಿ ತಾಲೂಕಿನಲ್ಲಿ ಹೀರುವ ಯಂತ್ರಗಳು ಸಮರ್ಪಕ ಸ್ಥಿತಿಯಲ್ಲಿರಬೇಕು ಹಾಗೂ ಎಲ್ಲಾ ಸಾರ್ವಜನಿಕರಿಗೂ ಇದರ ಸೇವೆ ಲಭ್ಯವಾಗಬೇಕು,’’ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಪಿಡಿಒ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ