ಆ್ಯಪ್ನಗರ

ನಾಳೆಯಿಂದ ಕಬ್ಬಳಿ ಬಸವೇಶ್ವರಸ್ವಾಮಿ ಜಾತ್ರೆ

ವಿಕ ಸುದ್ದಿಲೋಕ ಚನ್ನರಾಯಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಕಬ್ಬಳಿ ಬಸವೇಶ್ವರಸ್ವಾಮಿ 88ನೇ ವರ್ಷದ ದನಗಳ ಜಾತ್ರಾಮಹೋತ್ಸವ ನ...

Vijaya Karnataka 8 Nov 2019, 8:23 pm
ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಕಬ್ಬಳಿ ಬಸವೇಶ್ವರಸ್ವಾಮಿ 88ನೇ ವರ್ಷದ ದನಗಳ ಜಾತ್ರಾಮಹೋತ್ಸವ ನ. 9ರಿಂದ 16ರವರೆಗೆ ಜರುಗಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀಶಂಭುನಾಥಸ್ವಾಮೀಜಿ ತಿಳಿಸಿದರು.
Vijaya Karnataka Web kasballi basaveshwaraswamy fair from tomorrow
ನಾಳೆಯಿಂದ ಕಬ್ಬಳಿ ಬಸವೇಶ್ವರಸ್ವಾಮಿ ಜಾತ್ರೆ

ಆದಿಚುಂಚನಗಿರಿಮಹಾಸಂಸ್ಥಾನದ ಡಾ. ನಿರ್ಮಲಾನಂದ ನಾಥಸ್ವಾಮೀಜಿ ಧರ್ಮ ಧ್ವಜಸ್ಥಾಪನೆಯೊಂದಿಗೆ ಮೊದಲ ದಿನ ಗೋಧೂಳೀ ಮುಹೂರ್ತದಲ್ಲಿಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಿತ್ಯ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಿಗೂ ಅಂದಿನಿಂದಲೇ ಚಾಲನೆ ದೊರೆಯಲಿದೆ ಸುದ್ದಿಗಾರರಿಗೆ ಶ್ರೀಗಳು ತಿಳಿಸಿದರು.
ಭಗವಂತನ ನಾಮಸ್ಮರಣೆ ನಿರಂತರವಾಗಿ ನಡೆಯುತ್ತಿರ ಬೇಕೆಂಬ ಉದ್ದೇಶದಿಂದ ನಿತ್ಯ ಸಂಜೆ ವಿಶೇಷ ಭಜನಾ ಕಾರ‍್ಯಕ್ರಮ ಹಾಗೂ ಹರಿಕಥೆ ಆಯೋಜಿಸಲಾಗಿದೆ. ದೇವರಿಗೆ ಹರಕೆಗಳನ್ನು ಕಟ್ಟಿಕೊಂಡವರು ಪೂಜೆ ಸಲ್ಲಿಸಲು ಹೊರ ಜಿಲ್ಲೆಗಳಿಂದಲೂ ಆಗಮಿಸಲಿದ್ದಾರೆ. ಬಸವೇಶ್ವರಸ್ವಾಮಿ ದೇವಾಲಯ ನಿರ್ಮಾಣಗೊಂಡ ನಂತರದಿಂದಲೂ ಈ ಎಲ್ಲಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ.ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಷ್ಟೇ ಅಲ್ಲದೆ ರಾಜ್ಯದ ನಾನಾಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ. ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲದಿನಗಳಲ್ಲಿದೇವಾಲಯದ ಆವರಣದಲ್ಲಿಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದ ಅಭಿವೃದ್ಧಿ ದೂರದರ್ಶಿತ್ವದ ಪರಿಣಾಮವಾಗಿ ಕ್ಷೇತ್ರದಲ್ಲಿಶೈಕ್ಷಣಿಕ ಸಂಸ್ಥೆ ತಲೆಎತ್ತಿದೆ. ಇಲ್ಲಿಕಲಿತ ಅನೇಕ ವಿದ್ಯಾರ್ಥಿಗಳು ನಾಡಿನ ಸತ್ಪ್ರಜೆಗಳಾಗಿರುವುದು ಹೆಮ್ಮೆ ಎನಿಸುತ್ತದೆ. ಜತೆಗೆ ಕ್ಷೇತ್ರದಲ್ಲಿಶಿಥಿಲಗೊಂಡಿರುವ ದೇವಾ ಲಯಗಳನ್ನು ಜೀರ್ಣೋದ್ಧಾರ ಮಾಡುವ ಕಾರ‍್ಯಕ್ಕೂ ಕೈ ಹಾಕಿದ್ದು ಕಳೆದ ವರ್ಷ ಶಿಲಾನ್ಯಾಸಗೊಂಡ ಕಬ್ಬಳಿ ಬಸವೇಶ್ವರಸ್ವಾಮಿ ನೂತನ ದೇಗುಲದ ನಿರ್ಮಾಣ ಕಾರ‍್ಯವನ್ನು ಸಂಕ್ರಾಂತಿ ಹಬ್ಬದ ನಂತರ ಆರಂಭಿಸಲಾಗುವುದು ಎಂದರು.
ನ.11 ರಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿನವಿಡೀ ಕಬ್ಬಳಿ ಕ್ಷೇತ್ರದಲ್ಲಿದ್ದು, ಭಕ್ತಾದಿಗಳಿಗೆ ಆಶೀರ್ವಾದ ನೀಡಲಿದ್ದಾರೆ. ಗೋಪೂಜೆ ನೆರವೇರಿಧಿಸುಧಿವಧಿರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ