ಆ್ಯಪ್ನಗರ

ಕೋಡಿಮಠದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ 5ರಿಂದ

ತಾಲೂಕಿನ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನ ಮಠದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಶ್ರಾವಣ ಸಂಜೆ ಕಾರ್ಯಕ್ರಮಗಳು ಜರುಗಲಿದೆ ಎಂದು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

Vijaya Karnataka 2 Aug 2019, 5:00 am
ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನ ಮಠದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಶ್ರಾವಣ ಸಂಜೆ ಕಾರ್ಯಕ್ರಮಗಳು ಜರುಗಲಿದೆ ಎಂದು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
Vijaya Karnataka Web kodimatha shravana sanje starts from 5
ಕೋಡಿಮಠದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ 5ರಿಂದ


ಆ.5, 12, 19 ಮೂರು ಶ್ರಾವಣ ಸೋಮವಾರಗಳಂದು ಸಂಜೆ 7 ರಿಂದ 9 ರವರೆಗೆ ಹಾಗೂ 26 ರಂದು ಬೆಳಗ್ಗೆ 10ರಿಂದ ಪೂಜಾ ಅನುಷ್ಠಾನ ಮುಕ್ತಾಯ ಕಾರ್ಯಕ್ರಮಗಳು ನಡೆಯಲ್ಲಿವೆ. 5ರಂದು ಸಂಜೆ 7 ಗÜಂಟೆಗೆ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹಾಲುಸ್ವಾಮಿ ಮಠ ಹುಣಸಘಟ್ಟ ತರೀಕೆರೆ ಪೂಜ್ಯ ಗುರುಗಳ ಅಧ್ಯಕ್ಷತೆಯಲ್ಲಿ ಡಾ.ಶ್ರೀ ಬಸವರಾಜ್‌ ನೆಲ್ಲಿಸರ ಅವರು ಧರ್ಮಪ್ರವಚನ ನೀಡಲ್ಲಿದ್ದು ಸೊಲ್ಲಾಪುರದ ಜಯಣ್ಣ ಮತ್ತು ಸಂಗಡಿಗರಿಂದ ಚೌಡಿಕೆ ಮೇಳ, ಆ.12 ರಂದು ಗೋಣಿಬೀಡು ಶೀಲ ಸಂಪಾದನ ಮಠದ ಪೂಜ್ಯರಾದ ಡಾ.ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನೀಲಾಂಬಿಕಾ ಬಸವರಾಜು ಅವರ ಪ್ರವಚನ ನಡೆಯಲಿದೆ.

ಆ.19 ರಂದು ಅರಸೀಕೆರೆ ತಾ ಕೋಳುಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕೋಲಾರದ ಶ್ರೀ ಜ್ಞಾನಮೂರ್ತಿ ಅವರ ಧರ್ಮಪ್ರವಚನ ನಡೆಯಲಿದ್ದು, ಶ್ರಾವಣ ಪೂಜಾ ಅನುಷ್ಠಾನ ಮುಕ್ತಾಯ ಸಮಾರಂಭ 26 ರಂದು ಬೆಳಗ್ಗೆ 10 ಕ್ಕೆ ಶ್ರೀ ಮಠದ ಆವರಣದಲ್ಲಿ ಶಿವಲಿಂಗಜ್ಜಯ್ಯನವರ ಬೆಳ್ಳಿ ಪಲ್ಲಕ್ಕಿ ಉತ್ಸವ 10.30ಕ್ಕೆ ನಡೆಯಲಿದೆ. ಧಾರ್ಮಿಕ ಸಮಾರಂಭದಲ್ಲಿ ಬೆಳಗಾಂ ಜಿಲ್ಲಾ ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀಜಗದ್ಗುರು ಪಂಚಮ ಶಿವಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲ್ಲಿದ್ದು ಗೋಣಿಬೀಡು ಶೀಲಾಸಂಪಾದನ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾವಿಯ ಜಿಲ್ಲಾ ನಿಡಸೋಸಿಯ ಶ್ರೀ ಸಿದ್ದಸಂಸ್ಥಾನ ಮಠದ ರ್ಶರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಸುಕ್ಷೇತ್ರ ಕೋಡಿಮಠದ ಪೂಜ್ಯ ಗುರುಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಪ್ಪಣೆ ಮೇರೆಗೆ ವಿವಿಧ ಧಾರ್ಮಿಕ ಸತ್ಸಂಗ ಕಾರ್ಯಕ್ರಮಗಳು ನಡೆಯಲ್ಲಿವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ