ಆ್ಯಪ್ನಗರ

ಸಾಲಭಾದೆ: ಬೆಂಕಿ ಹಾಕಿಕೊಂಡು ರೈತ ಆತ್ಮಹತ್ಯೆ

ಕೊಣನೂರು (ಹಾಸನ): ಸಾಲಬಾಧೆ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿಯೇ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಕಲಗೂಡು ತಾಲೂಕು ಕೊಣನೂರು ಹೋಬಳಿ ಕಡುವಿನಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಜೆ ನಡೆದಿದೆ.

Vijaya Karnataka 8 Mar 2019, 5:00 am
ಕೊಣನೂರು (ಹಾಸನ): ಸಾಲಬಾಧೆ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿಯೇ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಕಲಗೂಡು ತಾಲೂಕು ಕೊಣನೂರು ಹೋಬಳಿ ಕಡುವಿನಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಜೆ ನಡೆದಿದೆ.
Vijaya Karnataka Web konanuru laon problem farmer suicide
ಸಾಲಭಾದೆ: ಬೆಂಕಿ ಹಾಕಿಕೊಂಡು ರೈತ ಆತ್ಮಹತ್ಯೆ


ಕಡುವಿನಹೊಸಹಳ್ಳಿ ಗ್ರಾಮದ ಕೆ.ಕೆ. ಹನುಮೇಗೌಡ (58) ಆತ್ಮಹತ್ಯೆ ಮಾಡಿಕೊಂಡವರು. ಇವರು ಒಟ್ಟು ಕುಟುಂಬದಲ್ಲಿ ವಾಸವಿದ್ದು, ಇವರ ಹೆಸರಿನಲ್ಲಿ ಗ್ರಾಮದ ಸುತ್ತಮುತ್ತ ಒಟ್ಟು ಸುಮಾರು 17 ಎಕರೆ ಜಮೀನು ಇದೆ. ಹನುಮೇಗೌಡ ಕೊಣನೂರು ಎಸ್‌ಬಿಐ ಬ್ಯಾಂಕಿನಲ್ಲಿ ಸುಮಾರು ಐದು ವರ್ಷಗಳ ಹಿಂದೆ 10 ಲಕ್ಷ ರೂ.ಸಾಲ ಪಡೆದಿದ್ದು ಸರಿಯಾದ ಸಮಯಕ್ಕೆ ಬೆಳೆ ಬಾರದೆ ಇದ್ದುದರಿಂದ ಬ್ಯಾಂಕ್‌ ಸಾಲ ಮರುಪಾವತಿ ಮಾಡಲಾಗದೇ ಬಡ್ಡಿ ಬೆಳೆದು ಸುಮಾರು 17 ಲಕ್ಷ ರೂ. ಸಾಲ ಆಗಿತ್ತು. ಜಮೀನಿನಲ್ಲಿ ಜೋಳ, ಶುಂಠಿ, ಆಲೂಗೆಡ್ಡೆ ಬೆಳೆದಿದ್ದು ಶುಂಠಿ, ಹೊಗೆಸೊಪ್ಪು ಬೆಳೆ ಸರಿಯಾಗಿ ಫಸಲು ಬಂದಿರಲಿಲ್ಲ. ಹೊಸದಾಗಿ ಕೊಳವೆ ಬಾವಿ ಕೊರೆಸಿದ್ದು ವಿದ್ಯುತ್‌ ಸಂಪರ್ಕವೂ ಆಗಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಜಮೀನಿನಲ್ಲಿ ಹಾಕಿದ ಬೆಳೆ ಸರಿಯಾಗಿ ಬಾರದೆ ಬ್ಯಾಂಕ್‌ನಲ್ಲಿ ಪಡೆದ ಸಾಲದ ಬಗ್ಗೆ ಚಿಂತಿಸುತ್ತಿದ್ದರು. ಮಾ.6ರಂದು ಸಂಜೆ 5.30ರ ಸುಮಾರಿನಲ್ಲಿ ಸೀಗೋಡು ಗ್ರಾಮದ ಜಮೀನಿನಲ್ಲಿ ಒಣಗಿದ ಹುಲ್ಲಿಗೆ ಬೆಂಕಿಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆಯಾದರೂ ತಂದೆ ಮನೆಗೆ ಬಾರದ ಕಾರಣ ಪುತ್ರ ರವಿಕುಮಾರ್‌ ಹೋಗಿ ನೋಡಿದಾಗ ದೇಹ ಸುಟ್ಟು ಹೋಗಿತ್ತು.

ಕೊಣನೂರು ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೊಣನೂರು ಪೊಲೀಸ್‌ ಠಾಣೆಯಲ್ಲಿ ಪುತ್ರ ರವಿಕುಮಾರ್‌ ದೂರು ದಾಖಲಿಸಿದ್ದಾರೆ. ಮೃತರಿಗೆ ಪತ್ನಿ, ನಾಲ್ಕು ಜನ ಮಕ್ಕಳು, ನಾಲ್ಕು ಜನ ಅಣ್ಣತಮ್ಮಂದಿರು ಇದ್ದಾರೆ. ಶಾಸಕ ಎ.ಟಿ.ರಾಮಸ್ವಾಮಿ ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ