ಆ್ಯಪ್ನಗರ

ರಾಮೇಶ್ವರ ದೇವಾಲಯ ನವೀಕರಣಕ್ಕೆ 5.53ಕೋಟಿ ಅನುದಾನ

ಕೊಣನೂರು: ರಾಮನಾಥಪುರದ ರಾಮೇಶ್ವರಸ್ವಾಮಿ ದೇವಾಲಯದ ಸುತ್ತ ಸಮರ್ಪಕ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು 5.53 ಕೋಟಿ ರೂ.ಅನುದಾನ ಸರಕಾರದಿಂದ ಮಂಜೂರಾಗಿದ್ದು ರಾಮನಾಥಪುರದ ವಿವಿಧ ಭಾಗಗಳಲ್ಲಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

Vijaya Karnataka 4 Mar 2019, 5:00 am
ಕೊಣನೂರು: ರಾಮನಾಥಪುರದ ರಾಮೇಶ್ವರಸ್ವಾಮಿ ದೇವಾಲಯದ ಸುತ್ತ ಸಮರ್ಪಕ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು 5.53 ಕೋಟಿ ರೂ.ಅನುದಾನ ಸರಕಾರದಿಂದ ಮಂಜೂರಾಗಿದ್ದು ರಾಮನಾಥಪುರದ ವಿವಿಧ ಭಾಗಗಳಲ್ಲಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
Vijaya Karnataka Web konanuru rameswara temple renovation 5 53 crore rupies
ರಾಮೇಶ್ವರ ದೇವಾಲಯ ನವೀಕರಣಕ್ಕೆ 5.53ಕೋಟಿ ಅನುದಾನ


ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿರುವ ರಾಮೇಶ್ವರಸ್ವಾಮಿ ದೇವಸ್ಥಾನದ ರಥಬೀದಿ ರಸ್ತೆಗೆ 25 ಲಕ್ಷ ರೂ.ವೆಚ್ಚದಲ್ಲಿ ಕೈಗೊಂಡಿರುವ ಡಾಂಬರಿಕರಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಸೇರಿದಂತೆ ಎಲ್ಲ ರೀತಿಯಲ್ಲೂ ಮಾದರಿಯನ್ನಾಗಿ ರೂಪಿಸುವ ಕನಸನ್ನು ಕಂಡಿದ್ದೇನೆ. ಜಾತಿ, ಧರ್ಮ, ಮತ, ಪಕ್ಷ ಗಳ ಭೇದ ಮರೆತು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.

ಮಹಿಳಾ ಕಾಲೇಜು ಅವರಣದಲ್ಲಿ ಆರ್‌ಐಡಿಪಿ ಯೋಜನೆಯಡಿ 50 ಲಕ್ಷ ರೂ.ವೆಚ್ಚದಲ್ಲಿ 2 ಕೊಠಡಿಗಳು ಈಗಾಗಲೇ ಉದ್ಘಾಟನೆಯಾಗಿವೆ. ಪ್ರವಾಸಿಗರ ಅನುಕೂಲಕ್ಕಾಗಿ ಕಾವೇರಿ ನದಿ ದಂಡೆಯಲ್ಲಿರುವ ಪಟ್ಟಾಭಿರಾಮ ದೇವಸ್ಥಾನದ ರಸ್ತೆ, ಸುಬ್ರಹ್ಮಣ್ಯ ದೇವಸ್ಥಾನದ ಎದುರು ರಸ್ತೆ, ಮತ್ತು ಕಾವೇರಿ ನದಿಗೆ ಹೋಗುವ ರಸ್ತೆಯೂ 30-54ರ ಟಾಸ್ಕ್‌ ಫೋರ್ಸ್‌ ಯೋಜನೆಯಡಿ 5 ಲಕ್ಷ ರೂ.ವೆಚ್ಚದಲ್ಲಿ ಡಾಂಬರೀಕಣ ಕಾಮಗಾರಿ ಮುಗಿದಿದೆ. ಇಲ್ಲಿಯ ಸಾರಿಗೆ ಘಟಕದ ಅಭಿವೃದ್ಧಿಗೆ 2 ಕೋಟಿ ರ. ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ. ಗ್ರಾಪಂ ಅವರಣದಲ್ಲಿ ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 20 ಲಕ್ಷ ರೂ., ನದಿ ದಂಡೆಯ ರಾಮೇಶ್ವರಸ್ವಾಮಿ ದೇವಸ್ಥಾನ ಪಕ್ಕದ ಅವರಣದಲ್ಲಿ 25 ಲಕ್ಷ ರೂ. ಮತ್ತು ಸುಬ್ರಮಣ್ಯ ದೇವಸ್ಥಾನದ ಪಕ್ಕ ಆವರಣದಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಶೌಚಾಲಯ ಕಾಮಗಾರಿ ನಡೆಯುತ್ತಿದೆ. ರಾಮೇಶ್ವರಸ್ವಾಮಿ ದೇವಸ್ಥಾನದ ಜಿರ್ಣೋದ್ಧಾರಕ್ಕೆ 4 ಕೋಟಿ 80 ಲಕ್ಷ ರೂ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನೂತನ ನಿಲ್ದಾಣಕ್ಕೆ 1.50 ಲಕ್ಷ ರೂ.ವೆಚ್ಚದ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳೇಗೌಡ, ಸದಸ್ಯರಾದ ದಿವಾಕರ್‌, ಮಾಜಿ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ, ಪ್ರಭಾಕರ್‌, ಎಂ.ಎಚ್‌. ಕೃಷ್ಣಮೂರ್ತಿ, ಮಾಜಿ ಸದಸ್ಯ ಬಿ.ಜೆ. ರಾಮೇಗೌಡ, ಬಿ.ಡಿ.ಪುಟ್ಟರಾಜ್‌, ದ್ಯಾವಯ್ಯ, ನಂಜುಂಡಯ್ಯ, ಸಾವಿತ್ರಮ್ಮ, ಸುಲೋಚನಾ, ಶಕುಂತಲಾ, ನಾಗಮ್ಮ, ಪುಟ್ಟರಾಜ್‌, ನಾಗೇಗೌಡ, ಬೀರೇಗೌಡ, ದೇವರಾಜ್‌, ರಾಜೇಗೌಡ, ಮುಖಂಡರಾದ ಉಪ್ಪಾರಿಕೇಗೌಡ, ಮುನಾವರ್‌, ಜೆ.ನಾಗರಾಜ್‌, ಬಿ.ಸಿ.ವೀರೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ