ಆ್ಯಪ್ನಗರ

ಬಾರದ ಮಳೆ : ರೈತರು ಹೈರಾಣ

ಮಳೆ ನಂಬಿ ರೈತರು ಬೆಳೆ ಉಳಿಸಿಕೊಳ್ಳಲು ಹೈರಾಣಾಗುತ್ತಿರುವ ಪರಿಸ್ಥಿತಿ ತಾಲೂಕಿನಲ್ಲಿ ಉಂಟಾಗಿದೆ.

Vijaya Karnataka 26 Apr 2019, 5:00 am
ಹೊಳೆನರಸೀಪುರ: ಮಳೆ ನಂಬಿ ರೈತರು ಬೆಳೆ ಉಳಿಸಿಕೊಳ್ಳಲು ಹೈರಾಣಾಗುತ್ತಿರುವ ಪರಿಸ್ಥಿತಿ ತಾಲೂಕಿನಲ್ಲಿ ಉಂಟಾಗಿದೆ.
Vijaya Karnataka Web lack of rain farmers fear loss
ಬಾರದ ಮಳೆ : ರೈತರು ಹೈರಾಣ


ಮುಂಗಾರು ಹಂಗಾಮಿನಲ್ಲಿ ವರುಣ ಕೃಪೆ ತೋರಿಲ್ಲ. ತಾಲೂಕಿನಲ್ಲಿ ಕಳೆದ 15 ದಿನಗಳ ಹಿಂದಷ್ಟೆ ಒಮ್ಮೆ ಅರ್ಧ ತಾಸು ಮಳೆಯಾಗಿತ್ತು. ನಂತರ ಮಳೆ ಕೃಪೆ ತೋರಿಲ್ಲ. ಸೆಕೆ, ಅಸಹನೀಯ ತಾಪ ತಾಳಲಾಗದ ಪರಿಸ್ಥಿತಿಯಲ್ಲಿ ದಿನ ದೂಡುವಂತಾಗಿದೆ. ಬೆಳೆ ಬೆಳೆಯುವುದಿರಲಿ ತೋಟಗಳಲ್ಲಿನ ತೆಂಗು, ಅಡಿಕೆ ಮರಗಳನ್ನಾದರೂ ಉಳಿಸಿಕೊಳ್ಳಲು ಮಳೆಗೆ ಕಾತುರರಾಗಿ ಕಾದಿದ್ದಾಗಿದೆ.

ಇಲಾಖೆ ನಿಯಮ ಪ್ರಕಾರ ವಾಡಿಕೆ ಮಳೆ ಈಗಾಗಲೇ ಪ್ರಾರಂಭವಾಗಬೇಕಿತ್ತು. ಪೂರ್ವ ಸಿದ್ಧತೆಗಾಗಿ ರೈತರು ಉಳುಮೆ ಮಾಡಲಾದರೂ ಒಂದಿಷ್ಟು ಹದ ಮಳೆಯಾಗುವ ನಿರೀಕ್ಷೆ ಇತ್ತು. ಕೃಷಿ ಇಲಾಖೆ ಬೆಳೆಗಾರರಿಗೆ ವಿತರಿಸಲು ದ್ವಿದಳ ಧಾನ್ಯ ದಾಸ್ತಾನು ಇರಿಸಿಕೊಂಡು ಕಾದಿದ್ದಾರೆ. ನೀರಾವರಿ ಅನುಕೂಲತೆಗಾಗಿ ಪರ್ಯಾಯ ಮಾರ್ಗ ಅನುಸರಿಸಲೇ ಬೇಕಾದ ಅನಿವಾರ‍್ಯತೆ ಗಿಳಿದಿದ್ದಾರೆ. ಕೊಳವೆ ಬಾವಿಗಳನ್ನು ಮತ್ತೆ ಮೇಲೆಂದ ಮೇಲೆ ಕೊರೆಸಿರುವ ರೈತರು ಅಷ್ಟಿಷ್ಟು ನೀರು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ನಂತರದಲ್ಲಿ ಅದರ ಆಯುಷ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಏಪ್ರಿಲ್‌, ಮೇ ತಿಂಗಳಲ್ಲಿ ಶೀತಬಾಧೆಯಾಗದ ಕಾರಣ ಅಷ್ಟಿಷ್ಟು ಮಳೆ, ಜತೆಗೆ ಬಿಸಿಲು ವಾತಾವರಣ ಅನುಕೂಲವಾರುತ್ತಿತ್ತು. ಆಲೂಗೆಡ್ಡೆ, ಶುಂಠಿ ಬೆಳೆಗೆ ಪೂರಕವಾಗಿ ಕೃಷಿ ಕಾರ್ಯ ಚುರುಕಾಗಬೇಕಿತ್ತು. ಸುತ್ತಮುತ್ತಲು ಅಷ್ಟಿಷ್ಟು ಮಳೆಯಾದರೂ ತಾಲೂಕಿಗೆ ಮಾತ್ರ ಮುಖ ತೋರಿ ಮರೆಯಾಗುವ ವರುಣನ ಮುನಿಸು ತೀರಿಲ್ಲ.

ಈ ಹಿಂದೆ ಯಥೇಚ್ಚವಾಗಿ ಕೊಡಗಿನಲ್ಲಿ ಅತಿವೃಷ್ಟಿಯಾಗಿದ್ದರಿಂದ ಹೇಮಾವತಿ ನದಿಗೆ ನೀರು ಹರಿದಿತ್ತು. ಇಲ್ಲಿ ಅಷ್ಟೇನೂ ಮಳೆಯಾಗದಿದ್ದರೂ ಮುಂಗಾರು ಬೆಳೆಗೆ ನಾಲೆಗಳು ತುಂಬಿ ಹರಿದಿದ್ದರಿಂದ ಹಲವು ವರ್ಷ ಬರಗಾಲ ನೀಗಿಸಿದ್ದ ರೈತರು ಉತ್ಸಾಹದಲ್ಲಿ ಭತ್ತ, ಕಬ್ಬು ಮತ್ತಿತರ ಬೆಳೆ ಬೆಳೆದರು. ಆದರೆ ತಾಲೂಕಿನಲ್ಲಿ ಪ್ರಮುಖ ಬೆಳೆಯಾದ ಭತ್ತ ದರ ಕುಸಿತ ಕಂಡಿತು. ನೇರವಾಗಿ ಬೆಳೆಗಾರರ ಮೇಲೆ ಪ್ರಭಾವ ಬೀರಿತ್ತು. ಚುನಾವಣಾ ತಾಪ ಕಳೆದರೂ, ಮಳೆ ಬಿದ್ದು, ಇಳೆ ತಂಪಾಗಿಲ್ಲದೆ ತಾಲೂಕಿನ ಜನರು ಪರಿತಾಪ ಪಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ