ಆ್ಯಪ್ನಗರ

ಜಮೀನು ವಿವಾದ: ದಂಪತಿಗೆ ಥಳಿತ

ಜಮೀನು ವಿವಾದದ ಹಿನ್ನೆಲೆಯಲ್ಲಿಗುಂಪೊಂದು ಮನೆಗೆ ನುಗ್ಗಿ ಗಂಡ, ಹೆಂಡತಿಯನ್ನು ಥಳಿಸಿ ಬೆದರಿಕೆ ಹಾಕಿದ ಪ್ರಕರಣ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿಶನಿವಾರ ರಾತ್ರಿ ನಡೆದಿದ್ದು, ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Vijaya Karnataka 2 Sep 2019, 5:00 am
ಹಾಸನ: ಜಮೀನು ವಿವಾದದ ಹಿನ್ನೆಲೆಯಲ್ಲಿಗುಂಪೊಂದು ಮನೆಗೆ ನುಗ್ಗಿ ಗಂಡ, ಹೆಂಡತಿಯನ್ನು ಥಳಿಸಿ ಬೆದರಿಕೆ ಹಾಕಿದ ಪ್ರಕರಣ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿಶನಿವಾರ ರಾತ್ರಿ ನಡೆದಿದ್ದು, ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web land dispute couple beaten
ಜಮೀನು ವಿವಾದ: ದಂಪತಿಗೆ ಥಳಿತ


ರಂಗಸ್ವಾಮಿ ಗಾಯಾಳು. ತಮಗೆ ಸೇರಿದ ಒಂದೂಕಾಲು ಎಕರೆ ಗದ್ದೆ ತಮಗೆ ಸೇರಬೇಕೆಂದು ಮಹೇಶ, ದೀಪಕ್‌, ಕರುಣೇಶ್‌, ಅಮರ್‌, ದೊರೆ, ಏಲಕ್ಕಿ ಎಂಬವರು ಮನೆಗೆ ನುಗ್ಗಿ ಥಳಿಸಿ,ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಂಗಸ್ವಾಮಿ ಮತ್ತು ಅವರ ಪತ್ನಿ ರಂಗಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿಆರೋಪಿಸಿದ್ದಾರೆ.

ಕಳೆದ ಒಂದೂವರೆ ವರ್ಷದಿಂದಲೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ಜಮೀನಿನ ಎಲ್ಲದಾಖಲೆಗಳು ನಮ್ಮ ಬಳಿ ಇದ್ದು, ಕಳೆದ 20 ವರ್ಷದಿಂದಲೂ ಕೃಷಿ ಚಟುವಟಿಕೆ ಮಾಡಿಕೊಂಡು ಬಂದಿದ್ದೇವೆ. ವಯೋವೃದ್ಧರಾದ ನಮ್ಮನ್ನು ಬೆದರಿಸಿ ಗದ್ದೆಯನ್ನು ಲಪಟಾಯಿಸಲು ಕುತಂತ್ರ ನಡೆಸಿದ್ದಾರೆ, ಅಧಿಕಾರಿಗಳು ರಂಗಸ್ವಾಮಿ ಅವರಿಗೆ ಜಮೀನು ಸೇರಬೇಕು ಎಂದರೂ ಒಪ್ಪದೆ ದೌರ್ಜನ್ಯ ಎಸಗಿದ್ದಾರೆ. ತಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು ಎಂದು ದೂರು ನೀಡಿದ್ದಾರೆ.

ಈ ಸಂಬಂಧ ಗೊರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ