ಹಾಸನ: ವೃದ್ಧನ ಹತ್ಯೆಯಲ್ಲಿ ಅಂತ್ಯವಾದ ಜಮೀನು ವಿವಾದ, ಆರೋಪಿಗಳು ಪರಾರಿ
ಹಾಸನದಲ್ಲಿ ಜಮೀನು ವಿವಾದ ವೃದ್ಧನ ಹತ್ಯೆಯಲ್ಲಿ ಅಂತ್ಯವಾಗಿದೆ. ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳಿ ಗ್ರಾಮದಲ್ಲಿ ಹಲ್ಲೆಗೆ ಒಳಗಾಗಿದ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
Vijaya Karnataka Web 25 Sep 2020, 6:36 pm
ಹಾಸನ: ಜಮೀನು ವಿವಾದ ಹಿನ್ನೆಲೆ ತಾಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳಿ ಗ್ರಾಮದಲ್ಲಿ ಹಲ್ಲೆಗೆ ಒಳಗಾಗಿದ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ರುದ್ರೇಗೌಡ (75) ಮೃತ ವೃದ್ಧ. ನಿವೃತ್ತ ನೌಕರರಾಗಿದ್ದ ಮೃತ ವೃದ್ಧ ಗ್ರಾಮದ ಸರ್ವೇ ನಂ 14/2ರಲ್ಲಿ ತಮ್ಮ ಭಾಗದ ಜಮೀನನ್ನು ಹೊಂದಿದ್ದು, ಅದೇ ಗ್ರಾಮದ ವಾಸಿಗಳಾದ ರಮೇಶ್, ಕಮಲಮ್ಮ, ರಾಮೇಗೌಡ, ಶೇಖರ, ಅನುಸೂಯ, ರತ್ನಮ್ಮ ಎಂಬುವವರು ಜಮೀನಿನಲ್ಲಿ ನಮಗೂ ಪಾಲು ಬರಬೇಕೆಂದು ನ್ಯಾಯಾಲದಲ್ಲಿ ದಾವೆ ಹೂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ರುದ್ರೇಗೌಡರು ಸೆ.24ರಂದು ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿಕೊಂಡು ಬಂದಿದ್ದರು. ಸಂಜೆ ತಮ್ಮ ಮನೆಯಲ್ಲಿ ರುದ್ರೇಗೌಡರು ಇದ್ದಾಗ ರಮೇಶ್, ಕಮಲಮ್ಮ, ರಾಮೇಗೌಡ, ಶೇಖರ, ಅನುಸೂಯ ಹಾಗೂ ರತ್ನಮ್ಮ ಬಂದು ನ್ಯಾಯಾಲಯದಲ್ಲಿ ನಮ್ಮ ವಿರುದ್ಧವೆ ಹೇಳಿಕೆ ನೀಡುತ್ತಿಯಾ ಎಂದು ಜಗಳವಾಡಿ ಹಲ್ಲೆ ನಡೆಸಿದ್ದಾರೆ.
ನನಗೆ ಕೊರೊನಾ ಇದೆ ಎಂದು ಹೇಳಿ ಬಸ್ಗೆ ಅಡ್ಡಲಾಗಿ ಮಲಗಿದ ಮಹಿಳೆ!ಮತ್ತೇನಾಯ್ತು?
ಹಲ್ಲೆಗೊಳಗಾದ ರುದ್ರೇಗೌಡರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮೃತರ ತಮ್ಮ ರಾಮಲಿಂಗೇಗೌಡ ಆರೋಪಿಗಳ ವಿರುದ್ಧ ದೂರು ನೀಡಿದ್ದು, ಶಾಂತಿ ಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನದ 200 ಮಿಲಿ ಚಿನ್ನದ ವಿಶ್ವಕಪ್ಗೆ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ..! ವಿಭಿನ್ನ ಪ್ರತಿಭೆಗೆ ಜಗ ಮೆಚ್ಚುಗೆ
ರುದ್ರೇಗೌಡ (75) ಮೃತ ವೃದ್ಧ. ನಿವೃತ್ತ ನೌಕರರಾಗಿದ್ದ ಮೃತ ವೃದ್ಧ ಗ್ರಾಮದ ಸರ್ವೇ ನಂ 14/2ರಲ್ಲಿ ತಮ್ಮ ಭಾಗದ ಜಮೀನನ್ನು ಹೊಂದಿದ್ದು, ಅದೇ ಗ್ರಾಮದ ವಾಸಿಗಳಾದ ರಮೇಶ್, ಕಮಲಮ್ಮ, ರಾಮೇಗೌಡ, ಶೇಖರ, ಅನುಸೂಯ, ರತ್ನಮ್ಮ ಎಂಬುವವರು ಜಮೀನಿನಲ್ಲಿ ನಮಗೂ ಪಾಲು ಬರಬೇಕೆಂದು ನ್ಯಾಯಾಲದಲ್ಲಿ ದಾವೆ ಹೂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ರುದ್ರೇಗೌಡರು ಸೆ.24ರಂದು ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿಕೊಂಡು ಬಂದಿದ್ದರು. ಸಂಜೆ ತಮ್ಮ ಮನೆಯಲ್ಲಿ ರುದ್ರೇಗೌಡರು ಇದ್ದಾಗ ರಮೇಶ್, ಕಮಲಮ್ಮ, ರಾಮೇಗೌಡ, ಶೇಖರ, ಅನುಸೂಯ ಹಾಗೂ ರತ್ನಮ್ಮ ಬಂದು ನ್ಯಾಯಾಲಯದಲ್ಲಿ ನಮ್ಮ ವಿರುದ್ಧವೆ ಹೇಳಿಕೆ ನೀಡುತ್ತಿಯಾ ಎಂದು ಜಗಳವಾಡಿ ಹಲ್ಲೆ ನಡೆಸಿದ್ದಾರೆ.
ನನಗೆ ಕೊರೊನಾ ಇದೆ ಎಂದು ಹೇಳಿ ಬಸ್ಗೆ ಅಡ್ಡಲಾಗಿ ಮಲಗಿದ ಮಹಿಳೆ!ಮತ್ತೇನಾಯ್ತು?
ಹಲ್ಲೆಗೊಳಗಾದ ರುದ್ರೇಗೌಡರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮೃತರ ತಮ್ಮ ರಾಮಲಿಂಗೇಗೌಡ ಆರೋಪಿಗಳ ವಿರುದ್ಧ ದೂರು ನೀಡಿದ್ದು, ಶಾಂತಿ ಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನದ 200 ಮಿಲಿ ಚಿನ್ನದ ವಿಶ್ವಕಪ್ಗೆ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ..! ವಿಭಿನ್ನ ಪ್ರತಿಭೆಗೆ ಜಗ ಮೆಚ್ಚುಗೆ