ಆ್ಯಪ್ನಗರ

ಲೋಕಸಭೆ ಚುನಾವಣೆ: ಹೊಂದಾಣಿಕೆಗೂ ಸೈ, ಫ್ರೆಂಡ್ಲಿ ಫೈಟ್‌ಗೂ ಜೈ: ರೇವಣ್ಣ

ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಗೂ ಸೈ, ಫ್ರೆಂಡ್ಲಿ ಫೈಟ್‌ಗೂ ಜೈ, ಇದ್ಯಾವುದೂ ಆಗದಿದ್ರೆ ತ್ರಿಕೋನ ಸ್ಪರ್ಧೆಗೆ ಸಿದ್ಧವಿದ್ದೇವೆ ಎಂದು ಪಿಡಬ್ಲ್ಯುಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Vijaya Karnataka 21 Feb 2019, 5:00 am
ಹಾಸನ: ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಗೂ ಸೈ, ಫ್ರೆಂಡ್ಲಿ ಫೈಟ್‌ಗೂ ಜೈ, ಇದ್ಯಾವುದೂ ಆಗದಿದ್ರೆ ತ್ರಿಕೋನ ಸ್ಪರ್ಧೆಗೆ ಸಿದ್ಧವಿದ್ದೇವೆ ಎಂದು ಪಿಡಬ್ಲ್ಯುಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web lok sabha election ready to friendly fight revanna
ಲೋಕಸಭೆ ಚುನಾವಣೆ: ಹೊಂದಾಣಿಕೆಗೂ ಸೈ, ಫ್ರೆಂಡ್ಲಿ ಫೈಟ್‌ಗೂ ಜೈ: ರೇವಣ್ಣ


ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ''ನಾವು ಕನಿಷ್ಠ 12 ಸೀಟು ಕೊಡಿ ಎನ್ನುತ್ತಿದ್ದೇವೆ. ಕಾಂಗ್ರೆಸ್‌ನಿಂದ ಅಭ್ಯರ್ಥಿ ಹಾಕ್ತೀವಿ ಎಂದ್ರೆ ನಾವೇನು ಮಾಡೋಕೆ ಆಗಲ್ಲ,'' ಎಂದರು.

''ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಹಾಸನ ಕ್ಷೇತ್ರದ ಅಭ್ಯರ್ಥಿ ಆಗಬೇಕು ಎಂಬುದು ನಮ್ಮೆಲ್ಲರ ಅಭಿಲಾಷೆ. ಗೌಡರ ರಾಜಕೀಯ ಜೀವನದಲ್ಲಿ ಕೊನೆ ಚುನಾವಣೆಯಾದ ಕಾರಣ ಅವರೇ ಸ್ಪರ್ಧಿಸಬೇಕು. ಆದರೆ ಅಂತಿಮ ನಿರ್ಧಾರ ಅವರಿಗೆ ಬಿಟ್ಟದ್ದು,'' ಎಂದು ಪ್ರತಿಕ್ರಿಯಿಸಿದರು.

''ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಬಗ್ಗೆ ಪಕ್ಷದ ಹೈಕಮಾಂಡ್‌ ತೀರ್ಮಾನಿಸಬೇಕು. ಸೂರಜ್‌ ರೇವಣ್ಣ ಸ್ಪರ್ಧೆಯ ಬಗ್ಗೆ ಚಿಂತನೆ ನಡೆದಿಲ್ಲ,'' ಎಂದು ಹೇಳಿದರು.

''ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ನಮ್ಮ ಇಚ್ಛೆ. ಕಾಂಗ್ರೆಸ್‌, ಜೆಡಿಎಸ್‌ ಸೇರಿದರೆ 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ಜೆಡಿಎಸ್‌ ವರಿಷ್ಠ ದೇವೇಗೌಡರು, ಕುಮಾರಸ್ವಾಮಿ, ರಾಹುಲ್‌ಗಾಂಧಿ ಮತ್ತಿತರರು ಕುಳಿತು ಸೀಟು ಹೊಂದಾಣಿಕೆ ಕುರಿತು ಏನು ತೀರ್ಮಾನ ಕೈಗೊಳ್ಳುತ್ತಾರೋ ನೋಡೋಣ,'' ಎಂದು ತಿಳಿಸಿದರು.

ಡಿಕೆಸಿ ಹೇಳಿಕೆ ಗೊತ್ತಿಲ್ಲ: ದೇವರ ಆಶೀರ್ವಾದ ಇದ್ದರೆ ನಾನು ಸಿಎಂ ಆಗುತ್ತೇನೆ ಎಂಬ ಸಚಿವ ಡಿ.ಕೆ.ಶಿವಕುಮಾರ್‌ ರಾಮನಗರದಲ್ಲಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ''ಅದೆಲ್ಲ ನನಗೆ ಗೊತ್ತಿಲ್ಲ, ನನ್ನದೇನಿದ್ದರು ಅಭಿವೃದ್ಧಿ ವಿಷಯ ಅಷ್ಟೇ,'' ಎಂದು ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ