ಲೋಕಸಭೆ ಚುನಾವಣೆ: ಪ್ರಜ್ವಲ್ಗೆ ಆಶೀರ್ವದಿಸಿ
ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಮತ ಹಾಕಿ ಆಶೀರ್ವದಿಸಿ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.
Vijaya Karnataka 2 Mar 2019, 5:00 am
ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ಮತ ಹಾಕಿ ಆಶೀರ್ವದಿಸಿ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.
ನಗರದ ಲಯನ್ಸ್ ಕ್ಲಬ್ನಲ್ಲಿ ನಡೆದ ಜಿಲ್ಲಾ ಜೆಡಿಎಸ್ ಕ್ರೈಸ್ತ- ಅಲ್ಪಸಂಖ್ಯಾತರ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಿಂದ ಪ್ರಜ್ವಲ್ ಕಣಕ್ಕೆ ಇಳಿಯುವುದನ್ನು ಖಚಿತ ಎಂಬುದನ್ನು ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ದೇವೇಗೌಡರು ಈಗಾಗಲೇ ತಿಳಿಸಿದ್ದಾರೆ. ವಯಸ್ಸಿನಲ್ಲಿ ಪ್ರಜ್ವಲ್ ರೇವಣ್ಣ ಕಿರಿಯವನಿರಬಹುದು. ರಾಜಕೀಯ ಅನುಭವ ಹೊಂದಿದ್ದಾನೆ. ಪ್ರಜ್ವಲ್ ಅವರ ತಂದೆ ರೇವಣ್ಣ, ಚಿಕ್ಕಪ್ಪ ಮತ್ತು ತಾತ ಹೇಳೋದನ್ನು ತಿಳಿದುಕೊಂಡು ಕಾರ್ಯಕರ್ತರ ಮನವನ್ನು ಗೆದ್ದಿದ್ದಾನೆ ಎಂದರು.
ಪ್ರಜ್ವಲ್ ನಿನ್ನೆ- ಮೊನ್ನೆ ಬಂದು ಚುನಾವಣೆಯಲ್ಲಿ ನನಗೆ ಸೀಟು ಕೊಡಿ, ಗೆಲ್ಲುತ್ತೇನೆ ಎಂದು ಕೇಳುವವನಲ್ಲ. ಇಡೀ ಜನರೇ ಪ್ರಜ್ವಲ್ ರೇವಣ್ಣನನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ದೇವೇಗೌಡರು ಆಶೀರ್ವದಿಸಿ ಪ್ರಜ್ವಲ್ ರೇವಣ್ಣ ಹೆಸರನ್ನು ಸೂಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರ ಮನೆಗೆ ಬಂದು ಮತ ಕೇಳೋದು ಕಷ್ಟವಾಗುತ್ತೆ. ಈ ಸಂದರ್ಭದಲ್ಲಿ ನಿಮ್ಮನ್ನು ಕೇಳುತ್ತಿದ್ದೇನೆ. ಪ್ರಜ್ವಲ್ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿದ್ದಾನೆ. ಎಲ್ಲರೂ ಬೆಂಬಲಿಸಿ ಯೇಸು ಭಗವಂತನ ಆಶೀರ್ವಾದ ಪ್ರಜ್ವಲ್ ಮೇಲಿರಲಿ. ಪ್ರಜ್ವಲ್ ಗೆದ್ದೇ ಗೆಲ್ಲುತ್ತಾನೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ ಎಂದರು.
ಜೆಡಿಎಸ್ನ ಕ್ರೈಸ್ತ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವಿಲ್ಸನ್ ರೆಡ್ಡಿ, ಜಿಲ್ಲಾಧ್ಯಕ್ಷ ದಿನೇಶ್, ಜೆಡಿಎಸ್ ವಕ್ತಾರ ಹೊಂಗೆರೆ ರಘು ಹಾಜರಿದ್ದರು.
ನಗರದ ಲಯನ್ಸ್ ಕ್ಲಬ್ನಲ್ಲಿ ನಡೆದ ಜಿಲ್ಲಾ ಜೆಡಿಎಸ್ ಕ್ರೈಸ್ತ- ಅಲ್ಪಸಂಖ್ಯಾತರ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಿಂದ ಪ್ರಜ್ವಲ್ ಕಣಕ್ಕೆ ಇಳಿಯುವುದನ್ನು ಖಚಿತ ಎಂಬುದನ್ನು ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ದೇವೇಗೌಡರು ಈಗಾಗಲೇ ತಿಳಿಸಿದ್ದಾರೆ. ವಯಸ್ಸಿನಲ್ಲಿ ಪ್ರಜ್ವಲ್ ರೇವಣ್ಣ ಕಿರಿಯವನಿರಬಹುದು. ರಾಜಕೀಯ ಅನುಭವ ಹೊಂದಿದ್ದಾನೆ. ಪ್ರಜ್ವಲ್ ಅವರ ತಂದೆ ರೇವಣ್ಣ, ಚಿಕ್ಕಪ್ಪ ಮತ್ತು ತಾತ ಹೇಳೋದನ್ನು ತಿಳಿದುಕೊಂಡು ಕಾರ್ಯಕರ್ತರ ಮನವನ್ನು ಗೆದ್ದಿದ್ದಾನೆ ಎಂದರು.
ಪ್ರಜ್ವಲ್ ನಿನ್ನೆ- ಮೊನ್ನೆ ಬಂದು ಚುನಾವಣೆಯಲ್ಲಿ ನನಗೆ ಸೀಟು ಕೊಡಿ, ಗೆಲ್ಲುತ್ತೇನೆ ಎಂದು ಕೇಳುವವನಲ್ಲ. ಇಡೀ ಜನರೇ ಪ್ರಜ್ವಲ್ ರೇವಣ್ಣನನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ದೇವೇಗೌಡರು ಆಶೀರ್ವದಿಸಿ ಪ್ರಜ್ವಲ್ ರೇವಣ್ಣ ಹೆಸರನ್ನು ಸೂಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರ ಮನೆಗೆ ಬಂದು ಮತ ಕೇಳೋದು ಕಷ್ಟವಾಗುತ್ತೆ. ಈ ಸಂದರ್ಭದಲ್ಲಿ ನಿಮ್ಮನ್ನು ಕೇಳುತ್ತಿದ್ದೇನೆ. ಪ್ರಜ್ವಲ್ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿದ್ದಾನೆ. ಎಲ್ಲರೂ ಬೆಂಬಲಿಸಿ ಯೇಸು ಭಗವಂತನ ಆಶೀರ್ವಾದ ಪ್ರಜ್ವಲ್ ಮೇಲಿರಲಿ. ಪ್ರಜ್ವಲ್ ಗೆದ್ದೇ ಗೆಲ್ಲುತ್ತಾನೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ ಎಂದರು.
ಜೆಡಿಎಸ್ನ ಕ್ರೈಸ್ತ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವಿಲ್ಸನ್ ರೆಡ್ಡಿ, ಜಿಲ್ಲಾಧ್ಯಕ್ಷ ದಿನೇಶ್, ಜೆಡಿಎಸ್ ವಕ್ತಾರ ಹೊಂಗೆರೆ ರಘು ಹಾಜರಿದ್ದರು.