ಆ್ಯಪ್ನಗರ

ಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ವಿಕ ಸುದ್ದಿಲೋಕ ಹಾಸನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಮಧ್ಯವರ್ತಿಗಳಿಲ್ಲದೆ ಆರ್‌ಟಿಒ ಕಚೇರಿಯಲ್ಲಿಕೆಲಸಗಳಾಗುವುದಿಲ್ಲ ಎಂಬ ಕುರಿತು ವಿಜಯ ಕರ್ನಾಟಕ ರಿಯಾಲಿಟಿ ಚೆಕ್‌ ಮಾಡಿ ...

Vijaya Karnataka 7 Nov 2019, 5:00 am
ಹಾಸನ: ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಮಧ್ಯವರ್ತಿಗಳಿಲ್ಲದೆ ಆರ್‌ಟಿಒ ಕಚೇರಿಯಲ್ಲಿಕೆಲಸಗಳಾಗುವುದಿಲ್ಲ ಎಂಬ ಕುರಿತು ವಿಜಯ ಕರ್ನಾಟಕ ರಿಯಾಲಿಟಿ ಚೆಕ್‌ ಮಾಡಿ ಪ್ರಕಟಿಸಿದ್ದ ವರದಿ ಹಿನ್ನೆಲೆಯಲ್ಲಿರಾಜ್ಯ ಲೋಕಾಯುಕ್ತದ ಸೂಚನೆ ಅನ್ವಯ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಧ್ಯಾಹ್ನ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web lokayukta attack on hassan rto office
ಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಜಿಲ್ಲಾಕೇಂದ್ರದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿಎಲ್‌ಎಲ್‌ಆರ್‌, ಡಿಎಲ್‌, ದಾಖಲೆಗಳ ವರ್ಗ ಈ ಎಲ್ಲಪ್ರಕ್ರಿಯೆ ನಿಗದಿತ ಸಮಯದಲ್ಲಿಆಗಬೇಕು ಎಂಬ ನಿಯಮಾವಳಿ ಇದ್ದರೂ, ಸಾಫ್ಟ್‌ವೇರ್‌ ಸಮಸ್ಯೆ, ಸಿಬ್ಬಂದಿ ಕೊರತೆ ಸಬೂಬುಬುಗಳ ಉತ್ತರ ಬರುತ್ತದೆ. ವೈದ್ಯರ ಹೆಸರಿನ ನಕಲಿ ದೃಢೀಕರಣ ಪತ್ರ ಶರವೇಗದಲ್ಲಿಸಿದ್ಧಗೊಳ್ಳುತ್ತದೆ ಎಂಬ ದೂರಿನ ಬಗ್ಗೆಯೂ ಲೋಕಾಯುಕ್ತ ಅಧಿಕಾರಿ ಭಾನು ಮತ್ತು ಸಿಬ್ಬಂದಿ ಪರಿಶೀಲಿಸಿದರು.
ಮೂರು ದಾಖಲೆ ಪತ್ತೆ: ಸರಕಾರಿ ಆಸ್ಪತ್ರೆ ವೈದ್ಯರ ಹೆಸರಿನಲ್ಲಿನಕಲಿ ದೃಢೀಕರಣಪತ್ರ ನೀಡಿಕೆ ಸಂಬಂಧ ಮೂರು ದಾಖಲೆ ಸಿಕ್ಕಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಭಾನು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ