ಆ್ಯಪ್ನಗರ

ಪ್ರಪಾತಕ್ಕೆ ಉರುಳಿದ ಅನಿಲ ಟ್ಯಾಂಕರ್‌: ಚಾಲಕನ ಶವ ಪತ್ತೆ

ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ನಿನ್ನೆ ರಾತ್ರೆ ಗುಡ್ಡ ಕುಸಿತಕ್ಕೊಳಗಾದ ಸಮಯದಲ್ಲಿ ಸ್ಥಳದಲ್ಲಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ರಸ್ತೆಯಿಂದ ಕೆಳಕ್ಕೆ ಜಾರಿ ಮಣ್ಣಿನ ಕುಸಿತದ ನಡುವೆ ಬಿದ್ದಿತ್ತು. ಗ್ಯಾಸ್ ಸೋರಿಕೆಯಾಗುತ್ತಿದ್ದ ಟ್ಯಾಂಕರ್ ನ ಚಾಲಕ ರಾಯಚೂರಿನ ಬಸವರಾಜು ಇವರ ಮೃತದೇಹವನ್ನು ಈಗ ಟ್ಯಾಂಕರ್ ನಿಂದ ಹೊರತೆಗೆಯಲಾಗಿದೆ.

Vijaya Karnataka Web 15 Aug 2018, 3:55 pm
ಸಕಲೇಶಪುರ: ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ನಿನ್ನೆ ರಾತ್ರೆ ಗುಡ್ಡ ಕುಸಿತಕ್ಕೊಳಗಾದ ಸಮಯದಲ್ಲಿ ಸ್ಥಳದಲ್ಲಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ರಸ್ತೆಯಿಂದ ಕೆಳಕ್ಕೆ ಜಾರಿ ಮಣ್ಣಿನ ಕುಸಿತದ ನಡುವೆ ಬಿದ್ದಿತ್ತು. ಗ್ಯಾಸ್ ಸೋರಿಕೆಯಾಗುತ್ತಿದ್ದ ಟ್ಯಾಂಕರ್ ನ ಚಾಲಕ ರಾಯಚೂರಿನ ಬಸವರಾಜು ಇವರ ಮೃತದೇಹವನ್ನು ಈಗ ಟ್ಯಾಂಕರ್ ನಿಂದ ಹೊರತೆಗೆಯಲಾಗಿದೆ. ಟ್ಯಾಂಕರ್ ನಲ್ಲಿ ಇನ್ನೋರ್ವನೂ ಇದ್ದನೆನ್ನಲಾಗಿದ್ದು ರಕ್ಷಣಾ ಕಾರ್ಯ ಹಾಸನ ಜಿಲ್ಲಾ ಎಸ್ಪಿ ಯವರ ನೇತೃತ್ವದಲ್ಲಿ ನಡೆಯುತ್ತಿದೆ.
Vijaya Karnataka Web Tanker


ಟ್ಯಾಂಕರ್ ನಲ್ಲಿದ್ದ ಗ್ಯಾಸ್ ನಿನ್ನೆ ರಾತ್ರೆಯೇ ಪೂರ್ತಿ ಸೋರಿಕೆಯಾಗಿ ಖಾಲಿಯಾಗಿದೆ. ಟ್ಯಾಂಕರ್ ನಲ್ಲಿ ಚಾಲಕ ರಾಯಚೂರು ಮೂಲದ ಬಸವರಾಜು ಮತ್ತು ಕಂಡಕ್ಟರ್ ಚನ್ನರಾಯಪಟ್ಟಣದವ ಎನ್ನಲಾಗಿದ್ದು ಚಾಲಕನ ಶವವನ್ನು ಈಗ ತೆಗೆಯಲಾಗಿದೆ. ಇನ್ನೊಬ್ಬಾತನ ದೇಹ ಮತ್ತು ಟ್ಯಾಂಕರ್ ಕ್ಯಾಬಿನ್ ಮಣ್ಣಿನೊಳಗೆ ಹೂತು ಹೋಗಿದ್ದು, ಇದನ್ನು ಹೊರತೆಗೆಯುವ ಕಾರ್ಯ ನಡೆಸಲಾಗುತ್ತಿದೆ. ಹೆದ್ದಾರಿಯಿಂದ ಸುಮಾರು ಎಪ್ಪತ್ತೈದು ಅಡಿ ಆಳಕ್ಕೆ ಟ್ಯಾಂಕರ್ ಮಣ್ಣಿನ ಜೊತೆ ಸೆಳೆತಕ್ಕೊಳಗಾಗಿ ಕೆಸರಿನಲ್ಲಿ ಸಿಲುಕಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ