ಆ್ಯಪ್ನಗರ

ಮಳೆ ನೀರು ಪೋಲಾಗದಂತೆ ಕಾಳಜಿವಹಿಸಿ

ಕೇಂದ್ರ ಸರಕಾರವು ರೈತರ ಪಾಲಿಗೆ ನೀಡಬೇಕಿರುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ದೊರೆಯು ವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಇಲಾಖೆ ಸಹಾಯಕ ಕಾರ‌್ಯದರ್ಶಿ ಪ್ರಿಯಾಂಕ ತಿಳಿಸಿದರು.

Vijaya Karnataka 15 Jul 2019, 8:53 pm
ಚನ್ನರಾಯಪಟ್ಟಣ: ಕೇಂದ್ರ ಸರಕಾರವು ರೈತರ ಪಾಲಿಗೆ ನೀಡಬೇಕಿರುವ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ದೊರೆಯು ವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಇಲಾಖೆ ಸಹಾಯಕ ಕಾರ‌್ಯದರ್ಶಿ ಪ್ರಿಯಾಂಕ ತಿಳಿಸಿದರು.
Vijaya Karnataka Web HSN-HSN15CRP3


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಪಂಚಾಯಿತಿ ಅಭಿವದ್ಧಿ ಅಧಿಕಾರಿಗಳ ಸಭೆ ಯಲ್ಲಿ ಮಾತನಾಡಿ, ‘‘ಕೇಂದ್ರ ಸರಕಾರವು ಹಮ್ಮಿ ಕೊಂಡಿರುವ ಜಲಶಕ್ತಿ ಅಭಿಯಾನದ ಪ್ರಯೋಜನವನ್ನು ಪ್ರತಿಯೊಬ್ಬ ನಾಗರಿಕನೂ ಪಡೆಯಬೇಕು,’’ ಎಂದರು.

ಭೂಗರ್ಭ ಇಲಾಖೆಯ ಹಿರಿಯ ಅಧಿಕಾರಿ ಸುಧಾ ಮಾತನಾಡಿ, ‘‘ಅಂತರ್ಜಲ ಸಂರಕ್ಷಣೆಗೆ ಮಳೆನೀರು ಕೊಯ್ಲು ವಿಧಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ತಮ್ಮ ಮನೆ ವ್ಯಾಪ್ತಿಯಲ್ಲಿ ಬಿದ್ದ ಮಳೆನೀರು ಪೋಲಾಗದಂತೆ ಕಾಳಜಿವಹಿಸಬೇಕು. ಇದಕ್ಕೂ ಸರಕಾರವನ್ನೇ ಕಾಯದೆ ನೀರು ಉಳಿಸುವ ಕಾರ‌್ಯಕ್ಕೆ ಇಂದಿನಿಂದಲೇ ಮುಂದಾಗಬೇಕು. ಮಳೆಯಾದರೆ ಮಾತ್ರ ಮಾಡಿದ ಯೋಜನೆಗಳು ಲಪ್ರದವಾಗುತ್ತವೆ,’’ ಎಂದು ಹೇಳಿದರು.

‘‘ಮಳೆನೀರು ಉಳಿದೆಲ್ಲ ನೀರಿಗಿಂತಲೂ ಪರಿಶುದ್ಧ ವಾಗಿದ್ದು ಹಳ್ಳಕೊಳ್ಳಗಳನ್ನು ತುಂಬಿಸಲು ಸಾಧ್ಯವಾಗ ದಿದ್ದರೂ ನಮ್ಮ ಮನೆಯ ತೊಟ್ಟಿಗಳನ್ನಾದರೂ ತುಂಬಿಸಿಕೊಳ್ಳಬೇಕು. ಮರಗಿಡಗಳನ್ನು ಬೆಳೆಸುವ ಮೂಲಕ ಭೂಮಿಯ ಮೇಲೆ ಹೆಚ್ಚು ಹಸಿರು ಇರುವಂತೆ ಮಾಡಬೇಕು,’’ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಕೆ.ಪುಷ್ಪಲತಾ ಮಾತನಾಡಿ, ‘‘ತಮ್ಮ ಇಲಾಖೆಯಲ್ಲಿ ಮಾಡಿಕೊಂಡಿ ರುವ ಕಾರ‌್ಯಯೋಜನೆಗಳನ್ನು ವಿವರಿಸಿ ಸ್ವಚ್ಚಭಾರತ ಮಾದರಿಯಲ್ಲಿಯೇ ಈ ಅಭಿಯಾನವೂ ದೊಡ್ಡಮಟ್ಟ ದಲ್ಲಿ ಸದ್ದುಮಾಡಲಿದೆ. ಕುಡಿಯುವ ಯೋಗ್ಯವಾಗಿರುವ ನೀರು ಕೇವಲ ಶೇ.2.5 ಮಾತ್ರ ಇದ್ದು, ಇದರ ಸಂರಕ್ಷಣೆ ಇನ್ನಷ್ಟು ಮಾಡಬೇಕಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಇದರ ಬಗ್ಗೆ ಜಾಗತಿ ಮೂಡಿಸುವ ನಿಟ್ಟಿನಲ್ಲಿ ಕಾರ‌್ಯಕ್ರಮಗಳನ್ನು ರೂಪಿಸ ಲಾಗಿದೆ. ಜು. 17 ರಿಂದ ಈ ನಿಟ್ಟಿನಲ್ಲಿ ಕಾರ‌್ಯಕ್ರಮ ಗಳು ಆರಂಭವಾಗಲಿದ್ದು ಸೆ. 15ರ ತನಕ ನಡೆಯುತ್ತದೆ. 18 ರಂದು ಜಾಥಾ ಹಮ್ಮಿಕೊಳ್ಳಲಾಗಿದೆ,’’ ಎಂದರು.

ಸಾಮಾಜಿಕ ಅರಣ್ಯಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ,‘‘ಹೆಬ್ಬೇವು, ಸಿಲ್ವರ್, ತೇಗ ಹಾಗೂ ಹಣ್ಣಿನ ಗಿಡಗಳನ್ನು ಇಲಾಖೆಯು ನೀಡುತ್ತಿದ್ದು ಪ್ರತಿ ಗ್ರಾಮ ಪಂಚಾಯಿತಿಗೂ 1700 ಗಿಡಗಳನ್ನು ನೀಡಲಾಗು ವುದು. ಕಾಲುವೆ ಮಾದರಿಯಲ್ಲಿ ಇಂಗುಗುಂಡಿಗಳನ್ನು ತೆಗೆಯಲಾಗುತ್ತಿದೆ,’’ ಎಂದರು.

ಇದೇ ವೇಳೆ ಮಾತನಾಡಿದ ತಾಲೂಕುಪಂಚಾಯಿತಿ ಕಾರ‌್ಯನಿರ್ವಹಣಾಧಿಕಾರಿ ಚಂದ್ರಶೇಖರ್ ವಿವಿಧ ಇಲಾಖೆಗಳು ಕೈಗೊಳ್ಳಬಹುದಾದ ಕ್ರಮಗಳನ್ನು ಈ ಯೋಜನೆಯಡಿ ವಿವರಿಸಲಾಗಿದ್ದು ಎಲ್ಲರ ಸಹಕಾರ ಮುಖ್ಯ. ನರೇಗಾ ಯೋಜನೆಯಡಿ ಈಗಾಗಲೇ 42 ಕಾರ‌್ಯಕ್ರಮಗಳು ಪ್ರಗತಿಯಲ್ಲಿದ್ದು 60 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪಂಚಾಯಿತಿ ಹಂತಗಳಲ್ಲಿ ವಿಶೇಷ ಸಭೆಗಳನ್ನು ನಡೆಸಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ರಂಜಿತನಿಂಗೇಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ