ಆ್ಯಪ್ನಗರ

ಹಾಸನ: ಎಟಿಎಂ ಪಿನ್ ನಂಬರ್ ಪಡೆದು 2.95 ಲಕ್ಷ ರೂ. ವಂಚನೆ

ಯಾರೋ ಅಪರಿಚಿತರು ಹಣವನ್ನು ಡ್ರಾ ಮಾಡಿಕೊಡುತ್ತೇನೆಂದು ಪಿನ್ ನಂಬರ್ ಪಡೆದು ಐದು ಸಾವಿರ ರೂ. ತೆಗೆದುಕೊಟ್ಟು, ಬೆರೆ ಎಟಿಎಂ ಕಾರ್ಡ್ ಕೊಟ್ಟು ಬಳಿಕ 2.95 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿರುತ್ತಾರೆಂದು ದೂರು ನೀಡಿದ್ದಾರೆ.

Vijaya Karnataka Web 3 Dec 2021, 6:29 pm
ಹಾಸನ: ಅಪರಿಚಿತ ವ್ಯಕ್ತಿ ನಗರದ ಎನ್‌ಆರ್ ವೃತ್ತದ ಬಳಿ ಇರುವ ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಐದು ಸಾವಿರ ಡ್ರಾಮಾಡಿಕೊಟ್ಟು 2.95 ಲಕ್ಷ ರೂ.ವಂಚಿಸಿರುವ ಪ್ರಕರಣ ವರದಿಯಾಗಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಹಾಸನ ತಾಲೂಕು ಕಟ್ಟಾಯ ಗ್ರಾಮದ ಸದಾಶಿವಪ್ಪ ಎನ್‌ಆರ್ ವೃತ್ತದ ಬ್ಯಾಂಕಿನ ಬಲ ಭಾಗದ ಎಟಿಎಂ ನಿಂದ ಗುರುವಾರ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದು, ಹಣ ಬಾರದಿದ್ದಾಗ ಯಾರೋ ಅಪರಿಚಿತರು ಹಣವನ್ನು ಡ್ರಾ ಮಾಡಿಕೊಡುತ್ತೇನೆಂದು ಪಿನ್ ನಂಬರ್ ಪಡೆದು ಐದು ಸಾವಿರ ರೂ. ತೆಗೆದುಕೊಟ್ಟು, ಬೆರೆ ಎಟಿಎಂ ಕಾರ್ಡ್ ಕೊಟ್ಟು ಬಳಿಕ 2.95 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿರುತ್ತಾರೆಂದು ದೂರು ನೀಡಿದ್ದಾರೆ. ಸದಾಶಿವಪ್ಪ ನೀಡಿದ ದೂರಿನ ಅನ್ವಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಚಿರತೆ

ಹಾಸನ: ಹಿಂಗಾಲುಗಳು ಸ್ವಾಧೀನ ಕಳೆದುಕೊಂಡ ಸ್ಥಿತಿಯಲ್ಲಿಪತ್ತೆಯಾಗಿದ್ದ ಚಿರತೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ.

ಬೇಲೂರು ವಲಯದ ಕಲ್ಲಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ.30ರಂದು ಎಂಟು ವರ್ಷ ಪ್ರಾಯದ ಗಂಡು ಚಿರತೆಯೊಂದು ಹಿಂಗಾಲುಗಳು ಸ್ವಾಧೀನ ಕಳೆದುಕೊಂಡ ಸ್ಥಿತಿಯಲ್ಲಿಪತ್ತೆಯಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದೆ.

ಪಶು ವೈದ್ಯಕೀಯ ಕಾಲೇಜಿನಲ್ಲಿಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಹಾಸನ: ಕಳವು, ದರೋಡೆ ಪ್ರಕರಣ, ವಾರಸುದಾರರ ಕೈಸೇರಿದ 2.80 ಕೋಟಿ ಮೌಲ್ಯದ ಚಿನ್ನಾಭರಣ
ಬಸ್‌ನಲ್ಲಿ ಮಹಿಳೆ ರಂಪಾಟ

ಚನ್ನರಾಯಪಟ್ಟಣ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಚಾಲಕನಿಗೆ ಬಸ್‌ ಚಾಲನೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿಅರ್ಧ ತಾಸಿಗೂ ಹೆಚ್ಚು ಸಮಯ ಪ್ರಯಾಣಿಕರು ಪೊಲೀಸ್‌ ಠಾಣೆ ಎದುರು ಪರದಾಡುವಂತಾಯಿತು.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ಗೆ ಸಕಲೇಶಪುರದಲ್ಲಿ ಹತ್ತಿದ ಮಹಿಳೆಯೊಬ್ಬರು, ಚಾಲಕರ ಪಕ್ಕದಲ್ಲಿಯೇ ಇದ್ದ ಆಸನದಲ್ಲಿ ಕುಳಿತರು. ಬಸ್‌ ಹಾಸನ ಬಿಡುತ್ತಿದ್ದಂತೆ ತನ್ನ ವರಸೆ ತೆಗೆದ ಮಹಿಳೆ ತನ್ನ ಬಳಿ ಇದ್ದ ಬ್ಯಾಗ್‌, ನೀರಿನ ಬಾಟಲಿಯನ್ನು ಚಾಲಕರ ಕಡೆಗೆ ಎಸೆಯುವುದು, ಮನಸ್ಸಿಗೆ ಬಂದಂತೆ ಮಾತನಾಡುವುದು, ಗಟ್ಟಿಯಾಗಿ ಕೂಗುವುದನ್ನು ಮಾಡುತ್ತಿದ್ದಂತೆ ಚಾಲಕರಿಗೆ ಗೊಂದಲ ಉಂಟಾಯಿತು. ಹಿಂಬದಿಯ ಆಸನದಲ್ಲಿ ಕುಳಿತು ಕೊಳ್ಳುವಂತೆ ಎಷ್ಟುಬಾರಿ ಮನವಿ ಮಾಡಿದರೂ ಆಕೆ ತನ್ನ ಆಸನಬಿಟ್ಟು ಹೋಗಲು ಒಪ್ಪದಿದ್ದಾಗ ಅನಿವಾರ‍್ಯವಾಗಿ ಬಸ್ಸನ್ನು ಪೊಲೀಸ್‌ಠಾಣೆಗೆ ತಂದು ನಿಲ್ಲಿಸಿದರು.

ಪೊಲೀಸರ ಮಾತಿಗೂ ಬಗ್ಗದ ಮಹಿಳೆ ತನ್ನದೇ ವರಸೆಯಲ್ಲಿ ನಡೆದುಕೊಂಡಾಗ ಸ್ವಲ್ಪಹೊತ್ತು ಪೊಲೀಸರೂ ಸುಮ್ಮನಾದರು. ಕೊನೆಗೆ ಬೇರೊಬ್ಬ ಮಹಿಳೆಯ ಮೂಲಕ ಆಕೆಯ ಮನವೊಲಿಸಿ ಹಿಂಬದಿಯ ಆಸನಕ್ಕೆ ಸ್ಥಳಾಂತರವಾಗುವಂತೆ ಮಾಡಲಾಯಿತು. ಒಂದೆರಡು ನಿಮಿಷದ ನಂತರ ಪುನಃ ಅದೇ ಸ್ಥಾನಕ್ಕೆ ಬರಲು ಮುಂದಾದ ಮಹಿಳೆಗೆ ನಿರಾಸೆಯಾಗಿತ್ತು. ಆಕೆ ಮೊದಲು ಕುಳಿತಿದ್ದ ಆಸನದಲ್ಲಿ ಬೇರೊಬ್ಬರು ಆಗಲೇ ಕುಳಿತಿದ್ದರಿಂದ ಆ ಮಹಿಳೆ ಬೇರೆದಾರಿಯಿಲ್ಲದೆ ಹಿಂದಿನ ಆಸನದಲ್ಲಿ ಕುಳಿತಳು. ನಂತರ ಬಸ್‌ ಮುಂದೆ ಚಲಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ