ಆ್ಯಪ್ನಗರ

ಅಕ್ಕನ ಮಗಳನ್ನೇ ಕೊಲೆ ಮಾಡಿದ ಮಾವ

ವಿವಾಹಿತನಾಗಿದ್ದ ಆರೋಪಿ ಅಕ್ಕನ ಮಗಳ ಜತೆ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದ.

Vijaya Karnataka 2 Aug 2019, 9:21 am
ಚನ್ನರಾಯಪಟ್ಟಣ : ಅಕ್ಕನ ಮಗಳ ಜತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಅಕ್ರಮ ಮುಚ್ಚಿಹಾಕಲು ಆಕೆಯನ್ನೇ ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
Vijaya Karnataka Web Arrest 23


ಬೆಂಗಳೂರಿನ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿತ್ರಾ (23) ಕೊಲೆಯಾದವರು. ಬೆಂಗಳೂರಿನ ಶ್ರೀನಿವಾಸ(36) ಬಂಧಿತ ಆರೋಪಿ. ಈತ ಕೃತ್ಯಕ್ಕೆ ಬಳಸಿರುವ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

''ಜು.23 ರಂದು ತಾಲೂಕಿನ ಮಟ್ಟನವಿಲೆ ಗ್ರಾಮದ ಕೋಡಿಲಿಂಗೇಶ್ವರ ದೇವಾಲಯದ ಬಳಿ ಯುವತಿಯೊಬ್ಬರ ಶವ ಪತ್ತೆಯಾಗಿದ್ದು, ಅದನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಮಗಳು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಚಿತ್ರಾ ಅವರ ಪೋಷಕರು ಈ ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ ಶವ ತಮ್ಮ ಮಗಳದ್ದೇ ಎಂದು ಗುರುತಿಸಿದ್ದರು. ಈಕೆಯ ಸೋದರಮಾವ, ಆರೋಪಿ ಶ್ರೀನಿವಾಸ ಬೆಂಗಳೂರಿನ ಸಿಂಗನಾಯಕನಹಳ್ಳಿಯ ಖಾಸಗಿ ಶಾಲೆಯ ಶಾಲಾಬಸ್‌ ಚಾಲಕನಾಗಿದ್ದು, ಚಿತ್ರಾಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ. ಎರಡು ಮಕ್ಕಳ ತಂದೆಯಾಗಿದ್ದ ಈತ ಈ ಅನೈತಿಕ ಸಂಬಂಧವನ್ನು ಮುಚ್ಚಿಹಾಕಲು ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಬಂದು ಮಟ್ಟನವಿಲೆ ಬಳಿ ಕೊಲೆಮಾಡಿ ಹೋಗಿದ್ದ,''ನೆಂದು ಹೊಳೆನರಸೀಪುರ ಡಿವೈಎಸ್ಪಿ ಬಿ.ಲಕ್ಷ್ಮೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರಕ್ಷಕ ನಿರೀಕ್ಷ ಕ ಎಚ್‌.ಎನ್‌.ಕಾಂತರಾಜ್‌ ನೇತೃತ್ವದಲ್ಲಿ ಹಿರೀಸಾವೆ ಎಸ್‌ಐ ಕೆ.ಎನ್‌.ಗಿರೀಶ್‌, ಎಎಸ್‌ಐ ಸುಬ್ರಹ್ಮಣ್ಯ, ಹರೀಶ್‌, ವೃತ್ತನಿರೀಕ್ಷ ಕರ ಕಚೇರಿ ಸಿಬ್ಬಂದಿ ಸುರೇಶ, ಮಹೇಶ್‌ ಮತ್ತು ಜಯಪ್ರಕಾಶ್‌ ಪತ್ತೆಕಾರ‍್ಯದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ