ಆ್ಯಪ್ನಗರ

ಮುಖ್ಯಮಂತ್ರಿ ತವರಲ್ಲಿ ರೌಡಿಗಳಿಂದ ಹಾಡಹಗಲೇ ವ್ಯಕ್ತಿಯ ಹತ್ಯೆ

ಸಮಾಜಘಾತುಕ ಶಕ್ತಿಯನ್ನು ಮಟ್ಟಹಾಕಿ ಎಂದು ರಾಜ್ಯದ ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಬೆನ್ನಲ್ಲೆ ಅವರ ತವರು ಕ್ಷೇತ್ರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ನೆತ್ತರು ಹರಿದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.

Vijaya Karnataka Web 23 Jun 2018, 9:48 pm
ಹಾಸನ: ಸಮಾಜಘಾತುಕ ಶಕ್ತಿಯನ್ನು ಮಟ್ಟಹಾಕಿ ಎಂದು ರಾಜ್ಯದ ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಬೆನ್ನಲ್ಲೆ ಅವರ ತವರು ಕ್ಷೇತ್ರದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ನೆತ್ತರು ಹರಿದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.
Vijaya Karnataka Web murder


ವಿಜ್ಞಾನಿಗಳೇ ಹೆಚ್ಚಿರುವ ಇಸ್ರೋವಸತಿ ಪ್ರದೇಶಕ್ಕೆ ತೆರಳುವ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೀದಿಕಾಳಗ ನಡೆಸಿರುವ ರೌಡಿಗಳು ವ್ಯಕ್ತಿಯನ್ನು ಹತ್ಯೆ ಮಾಡಿರುವ ಭೀಕರ ದೃಶ್ಯ ದಾಸರಕೊಪ್ಪಲು, ಹರಳಹಳ್ಳಿ ಸುತ್ತಲಿನ ಪ್ರದೇಶದ ಜನರನ್ನು ಭಯಗ್ರಸ್ತರನ್ನಾಗಿಸಿದೆ.

ರೌಡಿಗಳ ಅಟ್ಟಹಾಸ:
ನಗರದಲ್ಲಿ ಒಂದೆರಡು ವರ್ಷದಿಂದ ಆಗಾಗ್ಗೆ ಮರುಕಳಿಸುತ್ತಿರುವ ರೌಡಿಗಳ ಅಟ್ಟಹಾಸ ಪೊಲೀಸರಿಗೆ ಸವಾಲೆಸೆಯುವಂತಿದೆ. ನಗರದ ಸಹ್ಯಾದ್ರಿ ಚಿತ್ರಮಂದಿರದ ಮುಂಭಾಗ ರೌಡಿ ಚಿತ್ರಗಳಲ್ಲಿ ಸ್ಲಂಮಂಜನ್ನು ಹತ್ಯೆಮಾಡಿತ್ತು. ಸಿಸಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದ ದೃಶ್ಯಗಳನ್ನು ವೀಕ್ಷಿಸಿದ್ದ ಜನತೆ ಬೆಚ್ಚಿಬಿದ್ದಿದ್ದರು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೆಲದಿನದಲ್ಲೇ ಸೆರೆಹಿಡಿದು ಕಂಬಿಯ ಹಿಂದೆ ತಳ್ಳಿದರಾದರೂ, ಕೆಲ ತಿಂಗಳಲ್ಲೇ ಜಾಮೀನಿನ ಮೇಲೆ ಹೊರಬಂದಿದ್ದರು.

ಇದಾದ ಬಳಿಕ ತಮ್ಮದೇ ಸಾಮ್ರಾಜ್ಯ ಸೃಷ್ಟಿಸಿಕೊಂಡು ಚಟುವಟಿಕೆ ನಡೆಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ತಣ್ಣೀರುಹಳ್ಳದ ಬಳಿ ಕ್ರಿಕೆಟ್ ಆಡುತ್ತಿದ್ದ ಗುಂಪಿನ ನಡುವೆಯೂ ಘರ್ಷಣೆ ನಡೆಸಿ ಐವರು ಆಸ್ಪತ್ರೆಗೆ ದಾಖಲಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ