ಆ್ಯಪ್ನಗರ

ಹಾಸನದಲ್ಲಿ ಲಘು ಭೂಕಂಪ: ಜನರಲ್ಲಿ ತೀವ್ರ ಆತಂಕ

ಹಾಸನ ತಾಲೂಕು ಸಾಲಗಾಮೆ ಹೋಬಳಿ ದೇವಿಹಳ್ಳಿಯಲ್ಲಿ ಕಂಪನ ಅನುಭವಕ್ಕೆ ಬಂದಿದ್ದು, ಜನತೆ ಆತಂಕಕ್ಕೆ ಒಳಗಾಗಿ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ಅಡುಗೆ ಪಾತ್ರೆಗಳು ಅಲುಗಾಡಿದ್ದನ್ನು ಕಂಡಿದ್ದೇವೆ

Vijaya Karnataka Web 17 Sep 2021, 9:58 pm
ಹಾಸನ: ಹಾಸನ ಜಿಲ್ಲೆಯ ವಿವಿದೆಡೆ ಶುಕ್ರವಾರ ಸಂಜೆ ಭೂ ಕಂಪನದ ಅನುಭವಾಗಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಭೂಕಂಪನ ಕೇಂದ್ರ ಬಿಂದು ಸಾಲಗಾಮೆ ಹೋಬಳಿಯ ರಾಯಪುರ ದಿಂದ 1.5 ಕಿಲೋಮೀಟರ್ ದೂರದಲ್ಲಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3 ಎಂದು ದಾಖಲಾಗಿದೆ. ಇದು ಭೂಮಿಯಿಂದ ಸುಮಾರು 2.4 ಕಿಲೋಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಸನ ಹಾಗೂ ಹಳೇಬೀಡು ಹೋಬಳಿಯಲ್ಲಿ ಲಘು ಭೂಕಂಪನದ ಅನುಭವವಾಗಿದ್ದು, ಜನತೆ ಆತಂಕಗೊಂಡಿದ್ದಾರೆ.

ಹಾಸನ ತಾಲೂಕು ಸಾಲಗಾಮೆ ಹೋಬಳಿ ದೇವಿಹಳ್ಳಿಯಲ್ಲಿ ಕಂಪನ ಅನುಭವಕ್ಕೆ ಬಂದಿದ್ದು, ಜನತೆ ಆತಂಕಕ್ಕೆ ಒಳಗಾಗಿ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ಅಡುಗೆ ಪಾತ್ರೆಗಳು ಅಲುಗಾಡಿದ್ದನ್ನು ಕಂಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಳೇಬೀಡು ಹೋಬಳಿಯ ಘಟ್ಟದಹಳ್ಳಿ ಹಾಗೂ ಚಟ್ಟಚಟ್ಟಹಳ್ಳಿಯ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಾಯಗೊಂಡನಹಳ್ಳಿ, ದ್ಯಾವಪ್ಪನಹಳ್ಳಿ, ಲಿಂಗಪ್ಪನಕೊಪ್ಪಲು, ಮಹ್ಮದ್‌ಪುರದ ಹಾಗೂ ಮಾಚೇನಹಳ್ಳಿ, ಈ ಗ್ರಾಮಗಳಲ್ಲಿ ಲಘುವಾಗಿ ಭೂಕಂಪವಾಗಿದೆ.

ದ್ಯಾವಪ್ಪನಹಳ್ಳಿಯಲ್ಲಿ ರಂಗಸ್ವಾಮಿ ಅವರ ಮನೆಯಲ್ಲಿ ಅಡುಗೆ ಮನೆ ಪಾತ್ರೆಗಳು ಕೆಳಗೆ ಬಿದ್ದಿದೆ. ಸಂಜೆ 5.28ರ ಸಮಯದಲ್ಲಿ 1-2 ಸೆಕೆಂಡ್ ಲಘು ಭೂಕಂಪದ ಅರಿವು ಮೂಡಿತು. ತಕ್ಷಣವೇ ನಾವು ಮನೆಯಿಂದ ಹೊರಕ್ಕೆ ಬಂದಾಗ ಹಳ್ಳಿ ತುಂಬ ಸುದ್ದಿಯಾಗಿತ್ತು ಎಂದು ಗ್ರಾಮದ ವಾಸಿ ಡಿ.ಎಲ್.ಸೋಮಶೇಖರ್ ತಿಳಿಸಿದರು.

ಮಹಮ್ಮದ್‌ಪುರದ ವಾಸಿ ಇಮ್ತಾಜ್ ಅವರ ಮನೆಯಲ್ಲಿ ಪಾತ್ರೆಗಳು ಕೆಳಗೆ ಬಿದ್ದಿದೆ ಅದರ ಅರಿವು ತಿಳಿಯದೆ ಹೊರಕ್ಕೆ ಭಯದಿಂದ ಬಂದಿದ್ದಾರೆ. ಲಿಂಗಪ್ಪನಕೊಪ್ಪಲು ಗ್ರಾಮದ ರಸ್ತೆಯಲ್ಲಿ ಭೂಕಂಪದ ಅನುಭವವಾಗಿದೆ ಈ ಸಂದರ್ಭ ಯಾವ ತೊಂದರೆಯಾಗಿಲ್ಲ ಎಂದು ಪಿ.ಎಸ್.ಐ. ಗಿರಿಧರ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ