ಆ್ಯಪ್ನಗರ

ನರ್ಸಿಂಗ್‌ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ

ಪಟ್ಟಣದ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿಪ್ರಾಧ್ಯಾಪಕಿಯೊಬ್ಬಳ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿಗಳ ಸಮಸ್ಯೆಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಸ್ಪಂದಿಸಿದ್ದಾರೆ.

Vijaya Karnataka 14 Sep 2019, 5:00 am
ಹೊಳೆನರಸೀಪುರ: ಪಟ್ಟಣದ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿಪ್ರಾಧ್ಯಾಪಕಿಯೊಬ್ಬಳ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿಗಳ ಸಮಸ್ಯೆಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಸ್ಪಂದಿಸಿದ್ದಾರೆ.
Vijaya Karnataka Web mla listens to students complaints
ನರ್ಸಿಂಗ್‌ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ


ಶುಶ್ರೂಷ ವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ಪ್ರಾಧ್ಯಾಪಕಿ ವಿರುದ್ಧ ದೂರು ಹೇಳಲು ಮಾಜಿ ಸಚಿವ ರೇವಣ್ಣ ನಿವಾಸದ ಬಳಿ ಕಾದು ಕುಳಿತು ಸುದ್ದಿಯಾಗಿದ್ದರು. ಶಾಸಕರಲ್ಲಿನಮ್ಮ ಸಮಸ್ಯೆ ಹೇಳಿಕೊಳ್ಳದ ಹೊರತು ನಾವು ಹಿಂದಿರುಗುವುದಿಲ್ಲಎಂದು ಪ್ರತಿಭಟಿಸಿದ್ದರು. ವಿಚಾರ ತಿಳಿದು ಶುಕ್ರವಾರ ನರ್ಸಿಂಗ್‌ ಕಾಲೇಜಿಗೆ ಭೇಟಿ ಇತ್ತ ರೇವಣ್ಣಅವರಿಗೆ ವಿದ್ಯಾರ್ಥಿಗಳು ಪ್ರಾಧ್ಯಾಪಕಿ ಮತ್ತು ಪ್ರಾಂಶುಪಾಲರ ವಿರುದ್ಧ ದೂರುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಇದರಿಂದ ಕೆರಳಿದ ಶಾಸಕರು, ವಿದ್ಯಾರ್ಥಿಗಳಿಂದ ಶೌಚಾಲಯ ಶುಚಿಗೊಳಿಸುವುದು, ಕಾರು ಸ್ವಚ್ಛಗೊಳಿಸುವ ಮತ್ತು ಇಂಟರ್‌ನಲ್‌ ಅಂಕ ನೀಡುವಲ್ಲಿಟಾರ್ಗೆಟ್‌ ಮಾಡುವ ಎಲ್ಲವಿಚಾರಗಳಿಗೂ ಕಡಿವಾಣ ವಿಧಿಸುವಂತೆ ಪ್ರಾಧ್ಯಾಪಕಿ ಗೆ ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಇದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಯಾದ ತನ್ನ ಗಮನಕ್ಕೆ ತನ್ನಿ , ನಿಮ್ಮ ಸಮಸ್ಯೆ ಪರಿಹರಿಸಲು ನಾವು ಸಿದ್ದ ಎಂದು ಅಭಯ ನೀಡಿದರು.

ಜಿಲ್ಲೆಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿ ಇಲ್ಲಿವ್ಯಾಸಂಗ ನಡೆಸಿದ್ದೀರಿ, ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ನಿಮ್ಮ ವ್ಯಾಸಂಗಕ್ಕೆ ಹೆಚ್ಚಿನ ಗಮನ ಕೊಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಡುಗೆ ತಯಾರಕರು, ಡಿ ಗ್ರೂಪ್‌ ಸಿಬ್ಬಂದಿ ಕರೆದ ಶಾಸಕರು, ನಿಮ ಕೆಲಸವನ್ನು ನೀವು ಮಾಡಬೇಕು. ವಿದ್ಯಾರ್ಥಿಗಳ ಓದು, ವ್ಯಾಸಂಗಕ್ಕೆ ಅಡ್ಡಿಯುಂಟುಮಾಡಿದರೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು. ಜತೆಗಿದ್ದ ತಹಸೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಹಾಗೂ ನಗರ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗೆ ಆಗಾಗ್ಗೆ ಕಾಲೇಜಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿ ಎಂದು ಸೂಚನೆ ನೀಡಿದರು.

ದೂರು ಹೇಳಿದ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗುವುದೇ ? ಎಂಬ ವಿದ್ಯಾರ್ಥಿಗಳ ದುಮ್ಮಾನಕ್ಕೆ ತೆರೆ ಎಳೆದ ಶಾಸಕ ರೇವಣ್ಣ, ಹಾಗೇನೂ ಆಗಲ್ಲ, ಪುಂಡಾಟಿಕೆ ಮೆರೆದರೆ ಶಿಸ್ತು ಕ್ರಮ ಗ್ಯಾರಂಟಿ ಎಂದು ವಿವಾದವನ್ನು ಸುಖಾಂತ್ಯಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ