ಆ್ಯಪ್ನಗರ

ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಎಚ್ಚರವಹಿಸಿ

ಮುಂಗಾರು ಪ್ರಾರಂಭಗೊಳ್ಳುತ್ತಿದ್ದು, ಕೃಷಿ ಚಟುವಟಿಕೆ ಚುರುಕು ಗೊಂಡಿದೆ. ಹೀಗಾಗಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕೆಂದು ಶಾಸಕ ಎ.ಟಿ.ರಾಮಸ್ವಾಮಿ ಸೂಚನೆ ನೀಡಿದರು.

Vijaya Karnataka 11 Jun 2019, 5:00 am
ಅರಕಲಗೂಡು: ಮುಂಗಾರು ಪ್ರಾರಂಭಗೊಳ್ಳುತ್ತಿದ್ದು, ಕೃಷಿ ಚಟುವಟಿಕೆ ಚುರುಕು ಗೊಂಡಿದೆ. ಹೀಗಾಗಿ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕೆಂದು ಶಾಸಕ ಎ.ಟಿ.ರಾಮಸ್ವಾಮಿ ಸೂಚನೆ ನೀಡಿದರು.
Vijaya Karnataka Web HSN-HSN10ARK3


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನೆಡೆಸಿ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ಸಾಕಷ್ಟು ಯೋಜನೆಗಳು ಲಭ್ಯವಿದ್ದು,ಈ ಕುರಿತು ಇಲಾಖೆ ಮುಂದೆ ನಾಮಫಲಕ ಮೂಲಕ ರೈತರಿಗೆ ಮಾಹಿತಿ ಒದಗಿಸಬೇಕು.ಅಲ್ಲದೆ ಕರಪತ್ರ ಮೂಲಕ ರೈತ ಸಂಪರ್ಕ ಕೇಂದ್ರಗಳ ಸುತ್ತಾಮುತ್ತಲಿನ ಗ್ರಾಮಗಳ ರೈತರಿಗೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.

ಆಡಳಿತ ಸರಿ ಇಲ್ಲ

ತಾಲೂಕು ಕಚೇರಿ ಆಡಳಿತ ಸರಿಯಿಲ್ಲ. ಈ ಕುರಿತು ಹಲವಾರು ದೂರುಗಳು ಬಂದಿವೆ. ಪಟ್ಟಣ ಪಂಚಾಯಿತಿ ಚುನಾವಣೆ ವೇಳೆ ಮತದಾರರ ಪಟ್ಟಿಯಲ್ಲಿನ ಹೆಸರು ಗೊಂದಲದಿಂದ ಕೂಡಿತ್ತು. ಈಗಾಗಲೇ ಮೃತಪಟ್ಟಿರುವವರು, ವಾರ್ಡ್‌ನಿಂದ ಬೇರಕಡೆ ನೆಲಸಿರುವವರು ಹಾಗೂ ಒಂದೇ ಕುಟುಂಬದ ಸದಸ್ಯರುಗಳ ಹೆಸರು ಬೇರೆ ಬೇರೆ ವಾರ್ಡ್‌ನ ಮತದಾರ ಪಟ್ಟಿಯಲ್ಲಿ ಇರುವುದು ಸೇರಿದಂತೆ ಇತರೆ ಹಲವು ಲೋಪ ಕಂಡುಬಂದಿದೆ. ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್‌ ಶಿವರಾಜ್‌ ಅವರಿಗೆ ಸೂಚಿಸಿದರು.

ಜನಸಾಮಾನ್ಯರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವಂತಾಗಬಾರದು ಎಲ್ಲ ಇಲಾಖೆಗಳ ಅಧಿಕಾರಿಗಳು ಬದ್ದತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಮಂಜೂರಾಗಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಕಾಲ ಮಿತಿಯೊಳಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮಕ್ಕಳಿಗೆ ಒದಗಿಸುವ ಪೂರಕ ಪೌಷ್ಟಿಕ ಅಹಾರದ ಸರಬರಾಜಿನಲ್ಲಿ ಹಲವು ಲೋಪಗಳು ಕಂಡುಬಂದಿದ್ದವು. ಇದರಿಂದಾಗಿ ಹಣ ಸೋರಿಕೆಯಾಗುತ್ತಿತ್ತು. ತಾವು ಶಾಸಕರಾದ ಪ್ರಾರಂಭದಲ್ಲೆ ಘಟಕದ ಗೋದಾಮಿಗೆ ಭೇಟಿ ನೀಡಿದ್ದ ವೇಳೆ ಈ ಅವ್ಯವಸ್ಥೆ ಕಂಡುಬಂದಿತ್ತು. ಈ ಕುರಿತು ಗಮನಹರಿಸುವಂತೆ ಅಧಿಕಾರಿಗೆ ಸೂಚಿಸಿದರು.

ಕಾಮಗಾರಿ ಕಳಪೆ

ಎನ್‌ಆರ್‌ಇಜಿ ಯೋಜನೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಈಗಾಗಲೇ ಅವೈಜ್ಞಾನಿಕ, ಗುಣಮಟ್ಟದಿಂದ ಕೂಡಿಲ್ಲದ ಕಾಮಗಾರಿಯನ್ನು ಪುನಃ ಗುತ್ತಿಗೆದಾರರಿಂದ ಮಾಡಿಸಲಾಗಿದೆ. ಮತ್ತೆ ಇದಕ್ಕೆ ಅವಕಾಶ ಮಾಡಿಕೊಡಬೇಡಿ. ತ್ವರಿತವಾಗಿ ಗುಣಮಟ್ಟದಿಂದ ಕೆಲಸ ಮಾಡಿಸಲು ಎಂಜಿನಿಯರ್‌ ಹಾಗೂ ಮೇಲಾಧಿಕಾರಿ ಗಮನಹರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಸ್ಮಶಾನಕ್ಕೆ ಹಾಗೂ ಸ್ವಂತ ಕಟ್ಟಡ ಇಲ್ಲದ ಶಾಲೆಗಳಿಗೆ ಭೂಮಿ ಗುರುತಿಸುವಂತೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಸ್ಥಳೀಯರ ಸಹಕಾರದಿಂದ ಜಾಗ ಗುರುತಿಸುವಿಕೆ ಕೂಡಲೇ ಆಗಬೇಕು. ಸಮಸ್ಯೆ ಕಂಡುಬಂದರೇ ತಹಸೀಲ್ದಾರ್‌, ಶಿಕ್ಷ ಣ ಇಲಾಖೆ ಅಧಿಕಾರಿ ಭೇಟಿನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳಿದ್ದರೆ ಬಗೆಹರಿಸುವಂತೆ ಹೇಳಿದರು.

ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸದೆ ಹಾಗೂ ಕೆಲವು ಚಾಲಕರು ಹಾಗೂ ನಿರ್ವಾಹಕರು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ನಿರಾಕರಿಸುತ್ತಿರುವ ಕುರಿತು ದೂರು ಬಂದಿದೆ ಈ ಕುರಿತು ಕ್ರಮವಹಿಸಲು ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌ಗೆ ರಾಮಸ್ವಾಮಿ ಸೂಚಿಸಿದರು.

ತಹಶೀಲ್ದಾರ್‌ ಶಿವರಾಜ್‌, ತಾಪಂ ಇಒ ಡಾ.ಯಶ್ವಂತ್‌ ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ