ಆ್ಯಪ್ನಗರ

ನನ್ನ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾರ‌್ಯ:ಶಾಸಕ ಸ್ಪಷ್ಟನೆ

ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ‌್ಯಕರ್ತರು ಗ್ರಾಮೀಣ ಭಾಗದ ಸಮಸ್ಯೆಗಳನ್ನು ನೋಡಿ ನಂತರ ಟೀಕೆಗಳನ್ನು ಮಾಡಲಿ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Vijaya Karnataka 12 Dec 2017, 5:15 am
ಸಕಲೇಶಪುರ: ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ‌್ಯಕರ್ತರು ಗ್ರಾಮೀಣ ಭಾಗದ ಸಮಸ್ಯೆಗಳನ್ನು ನೋಡಿ ನಂತರ ಟೀಕೆಗಳನ್ನು ಮಾಡಲಿ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Vijaya Karnataka Web more development work in my period mla clarifies
ನನ್ನ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾರ‌್ಯ:ಶಾಸಕ ಸ್ಪಷ್ಟನೆ


ಪಟ್ಟಣದ ಜೆಡಿಎಸ್ ಕಚೇರಿ ಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ ದ ಅವರು, ‘‘ಚುನಾವಣೆ ಸಮೀಪಿಸುತ್ತಿ ದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲವು ಕಾರ‌್ಯಕರ್ತರು ತಮ್ಮ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಇವರು ಚುನಾವಣೆಯ ಲಾಭ ಪಡೆಯಲು ಜನರಲ್ಲಿ ಕಹಿ ಭಾವನೆಗಳ ನ್ನು ತುಂಬಿ ಹಾದಿ ತಪ್ಪಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿ ದ್ದಾರೆ. ಮಲೆನಾಡು ಜನ ಅಷ್ಟೊಂದು ದಡ್ಡರಲ್ಲ ಎಂಬ ವಿಚಾರ ಅವರು ಅರ್ಥ ಮಾಡಿಕೊಂಡು ಮುನ್ನಡೆಯುವುದು ಉತ್ತಮ,’’ ಎಂದರು.

‘‘ಎತ್ತಿನಹೊಳೆ ಯೋಜನೆಯಡಿ ತಾಲೂಕಿಗೆ 14 ಮಾರ್ಗದ ರಸ್ತೆಗಳು ಮಂಜೂರಾಗಿದ್ದು, ಕ್ಯಾನಹಳ್ಳಿ- ಮೂದರಹಳ್ಳಿ, ಹಲಸುಲಿಗೆ-ಕಾಟಿಹಲ್ಳಿ ಹಾಗೂ ಆಲೂರು ತಾಲುಕಿನ ಮೇಟಗನ ಹಳ್ಳಿ-ಸಂಕಲಾಪುರ ಮಾರ್ಗ ದ ರಸ್ತೆಗಳ ಟೆಂಡರ್ ಅಂಗೀಕಾರವಾಗಿದೆ. ಉಳಿದ 11 ರಸ್ತೆಗಳು ಟೆಂಡರ್ ಹಂತಕ್ಕೆ ಬಂದಿವೆ. ತಮ್ಮ ಸ್ವ ಪ್ರಯತ್ನದಿಂದ ಈ ಕ್ಷೇತ್ರಕ್ಕೆ ಎಷ್ಟೋ ಅಭಿವದ್ಧಿ ಕೆಲಸಗಳಾಗುತ್ತಿವೆ,’’ ಎಂದು ಹೇಳಿದರು.

ಸಮಾವೇಶ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆಸಲು ಉದ್ದೇಶಿಸಿರುವ ಜೆಡಿಎಸ್ ಪಿರಿಶಿಷ್ಟ ಜಾತಿ, ವರ್ಗಗಳ ಕಾರ‌್ಯಕರ್ತರು ಹಾಗೂ ಸಾರ್ವಜನಿಕ ಸಮಾವೇಶಕ್ಕೆ ತಾಲೂಕಿ ನಿಂದ ಸುಮಾರು 1500ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ದಲಿತ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ಮನವರಿಕೆ ಮಾಡಿಕೊಟ್ಟು ಜೆಡಿಎಸ್ ಸರಕಾರದ ಜನೋಪಯೋಗಿ ಯೋಜನೆಗಳ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಸೋಮಶೇಖರ್, ಜಿಪಂ ಸದಸ್ಯೆ ಉಜ್ಮಾರಿಜ್ವಿ ಸುದರ್ಶನ್, ಪುರಸಭೆ ಅಧ್ಯಕ್ಷೆ ಪುಷ್ಪವತಿ ರಮೇಶ್, ಜಿಪಂ ಮಾಜಿ ಸದಸ್ಯ ಡಿ.ಸಿ.ಸಣ್ಣಸ್ವಾಮಿ, ಜೆಡಿಎಸ್ ಮುಖಂಡ ಸ.ಬ.ಭಾಸ್ಕರ್, ಪುರಸಭೆ ಸದಸ್ಯ ನಿರ್ವಾಣಯ್ಯ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ