ಆ್ಯಪ್ನಗರ

ಮೂಲವಿಜ್ಞಾನಕ್ಕೆ ಜಾನಪದದ ನಂಟಿದೆ

ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರಗಳನ್ನು ಮರೆಯುತ್ತಿರುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಜಾನಪದ ತಜ್ಞ ಡಾ.ಹಂಪನಹಳ್ಳಿತಿಮ್ಮೇಗೌಡ ಹೇಳಿದರು.

Vijaya Karnataka 17 Sep 2019, 5:00 am
ಚನ್ನರಾಯಪಟ್ಟಣ: ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರಗಳನ್ನು ಮರೆಯುತ್ತಿರುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಜಾನಪದ ತಜ್ಞ ಡಾ.ಹಂಪನಹಳ್ಳಿತಿಮ್ಮೇಗೌಡ ಹೇಳಿದರು.
Vijaya Karnataka Web HSN16CRP4_16


ಪ್ರತಿಮಾಟ್ರಸ್ಟ್‌ ವತಿಯಿಂದ ಶತಮಾನದ ಇತಿಹಾಸ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆಯೋಜಿಸಿರುವ ಜಾನಪದ ನೃತ್ಯಗಳ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದರು.

''ಮನುಷ್ಯನ ಹುಟ್ಟಿನೊಂದಿಗೆ ಹುಟ್ಟಿಕೊಂಡ ಜನಪದ ಬ್ರಹ್ಮಾಂಡ ಸ್ವರೂಪದ್ದಾಗಿದ್ದು, ಅದಕ್ಕೆ ಅಂತ್ಯವಿಲ್ಲ. ಸತ್ವಹೀನವಾಗದಂತೆ ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ನಮ್ಮ ಜನಪದರು ಅಕ್ಷರಸ್ಥರಲ್ಲದಿದ್ದರೂ ಅವಿವೇಕಿಗಳಾಗಿರಲಿಲ್ಲ. ವಿಜ್ಞಾನದ ಮೂಲಕ್ಕೆ ಜನಪದದ ನಂಟಿದೆ,'' ಎಂದರು.

''ಮಕ್ಕಳಲ್ಲಿಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ಅವರಲ್ಲಿಬದುಕನ್ನು ಕಟ್ಟಿಕೊಳ್ಳುವ ರೀತಿಯನ್ನು ಕಲಿಸಬಹುದಾಗಿದೆ. ಅವರ ಸುಪ್ತಚೇತನಗಳನ್ನು ಹೊರತರಲು ಈ ಶಿಬಿರ ಉತ್ತಮ ವೇದಿಕೆಯಾಗಿದ್ದು, ಎಳೆಯ ವಯಸ್ಸಿನಲ್ಲೇ ಮೊಬೈಲ್‌ ಮತ್ತು ಟಿವಿಗಳಿಂದ ಮಕ್ಕಳ ಕ್ರಿಯಾಶೀಲ ಸಾಮರ್ಥ್ಯಗಳು ಕಳೆದುಹೋಗುತ್ತಿವೆ. ಮಾತೃಸಂಸ್ಕೃತಿಯ ಆರಾಧಕರಾಗಿ ಅವರನ್ನು ತಯಾರು ಮಾಡಬೇಕು,'' ಎಂದು ಹೇಳಿದರು.

ಕ್ಷೇತ್ರಶಿಕ್ಷಣಾಧಿಕಾರಿ ಎಚ್‌.ಕೆ.ಪುಷ್ಪಲತಾ ಮಾತನಾಡಿ, ''ಮಕ್ಕಳಲ್ಲಿಜೀವನದ ಕಲೆಯನ್ನು ಕಲಿಸುವ ಪ್ರಯತ್ನ ಪ್ರತಿಮಾ ಟ್ರಸ್ಟ್‌ನಿಂದ ಆಗುತ್ತಿದೆ. ಜನಪದ ವಿನಾಶದಂಚಿಗೆ ಹೋಗದಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತೆರೆಯ ಮರೆಯಲ್ಲಿರುವ ಕಲೆಗಳು ಪ್ರವರ್ಧಮಾನಕ್ಕೆ ಬರುವಂತಾಗಬೇಕು. ಸರಕಾರಿ ಶಾಲೆಗಳನ್ನೇ ಆಯ್ಕೆ ಮಾಡಿಕೊಂಡು ಅಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿರುವುದು ಸಂತಸದ ವಿಷಯವಾಗಿದೆ,'' ಎಂದರು.

ಟ್ರಸ್ಟ್‌ನ ಅಧ್ಯಕ್ಷ ಉಮೇಶ್‌ತೆಂಕನಹಳ್ಳಿ ಮಾತನಾಡಿ, ''ಟ್ರಸ್ಟ್‌ನ ಚಟುವಟಿಕೆಗಳನ್ನು ವಿವರಿಸಿ ಎಲ್ಲಕ್ಷೇತ್ರಗಳಲ್ಲೂಮಕ್ಕಳು ಪ್ರತಿಭಾವಂತರಾಗಬೇಕು. ಮಕ್ಕಳಿಗೆ ಕಂಸಾಳೆ, ಪಟಕುಣಿತ, ರಂಗದ ಕುಣಿತಗಳನ್ನು ಕಲಿಸಿಕೊಡಲಾಗುವುದು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಎಚ್‌.ಎಸ್‌.ಚಂದ್ರಶೇಖರ್‌, ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಮೇಶ್‌, ಶಾಲೆಯ ಮುಖ್ಯ ಶಿಕ್ಷಕ ನರಸಿಂಹೇಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್‌ ಮತ್ತಿತರರು ಹಾಜರಿದ್ದರು.

ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಹೇರುವ ಮೂಲಕ ನಮ್ಮ ಅನನ್ಯತೆಯನ್ನು ಹಾಳುಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಬಹುಸಂಸ್ಕೃತಿಯ ಚಿಂತನೆ ನಮ್ಮದಾಗಬೇಕು. ಬಹುಮುಖ ಸಂಸ್ಕೃತಿಯನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿಈ ಬೆಳವಣಿಗೆಗಳು ಆಗುತ್ತಿರುವುದು ವಿಷಾದಕರ. ನಾವು ವಿದ್ಯಾವಂತರು, ನಾಗರಿಕರು ಆದಂತೆ ವಿಶ್ವಮಾನವತ್ವವನ್ನು ಅರಿಯಲು ವಿಫಲರಾಗುತ್ತಿದ್ದೇವೆ. ಮನೆಗಳು ವಿಶಾಲವಾದಂತೆ ಮನಸ್ಸುಗಳು ಸಂಕುಚಿತವಾಗುತ್ತಿವೆ.

- ಡಾ.ಹಂಪನಹಳ್ಳಿ ತಿಮ್ಮೇಗೌಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ