ಆ್ಯಪ್ನಗರ

ಹೆಂಡತಿ, ಮಾವನ ಕೊಲೆಗೈದಿದ್ದ ಆರೋಪಿ ಬಂಧನ

ಕಳೆದ 15 ದಿನಗಳ ಹಿಂದೆ ಸಾಂಸಾರಿಕ ದ್ವೇಷದ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಮಾವನನ್ನು ನಡುರಸ್ತೆಯಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 20 Feb 2019, 5:00 am
ಚನ್ನರಾಯಪಟ್ಟಣ: ಕಳೆದ 15 ದಿನಗಳ ಹಿಂದೆ ಸಾಂಸಾರಿಕ ದ್ವೇಷದ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಮಾವನನ್ನು ನಡುರಸ್ತೆಯಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web murder accused arrested
ಹೆಂಡತಿ, ಮಾವನ ಕೊಲೆಗೈದಿದ್ದ ಆರೋಪಿ ಬಂಧನ


ತಾಲೂಕಿನ ಯಲಿಯೂರು ಗ್ರಾಮದ ನಂಜೇಗೌಡ ಉ.ನಂದೀಶ (38) ಆರೋಪಿ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಟ್ಟಣ ಠಾಣೆ ಪಿಎಸ್‌ಐ ಯೂ.ಆರ್‌. ಮಂಜುನಾಥ್‌ ಮತ್ತು ಗ್ರಾಮಾಂತರ ಠಾಣೆ ಎಸ್‌ಐ ಕಿರಣ್‌ಕುಮಾರ್‌ ತಮ್ಮ ಸಿಬ್ಬಂದಿಗಳೊಂದಿಗೆ ಉದಯಪುರ ಬಳಿ ಇರುವ ತೋಟಗಾರಿಕೆ ಇಲಾಖೆಯ ಫಾರಂನಲ್ಲಿ ಆರೋಪಿಯನ್ನು ಪತ್ತೆಮಾಡಿ ಬಂಧಿಸಿದ್ದಾರೆ.

ಜ.30ರಂದು ಸಂಜೆ 4.30ರ ವೇಳೆಯಲ್ಲಿ ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಮುಖ್ಯ ರಸ್ತೆಯಲ್ಲಿಯೇ ನಂದೀಶ ತನ್ನ ಮಾವ ಪ್ರಕಾಶ ಹಾಗೂ ಪತ್ನಿ ದಿವ್ಯರನ್ನು ಆಕ್ರೋಶದಿಂದ ಮಚ್ಚಿನಿಂದ ಕತ್ತರಿಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಪಟ್ಟಣ ಠಾಣೆಯಲ್ಲಿ 302ನೇ ಕಲಂ ರೀತಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎ.ಎನ್‌.ಪ್ರಕಾಶ್‌ಗೌಡ ವಿಶೇಷ ತಂಡವನ್ನು ರಚಿಸಿದ್ದರು. ನಡುರಸ್ತೆಯಲ್ಲೇ ನಡೆದ ಕೊಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತಲ್ಲಣ ಮೂಡಿಸಿತ್ತು.

ಅಪರ ಪೊಲೀಸ್‌ ಅಧೀಕ್ಷ ಕಿ ನಂದಿನಿ, ಆರಕ್ಷ ಕ ಉಪಾಧೀಕ್ಷ ರಾದ ಬಿ.ಬಿ.ಲಕ್ಷ್ಮೇಗೌಡ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಚ್‌.ಎಂ.ಕಾಂತರಾಜು ನೇತೃತ್ವದ ತಂಡದಲ್ಲಿ ಪಟ್ಟಣಠಾಣೆ ಎಸ್‌ಐ ಯೂ.ಆರ್‌.ಮಂಜುನಾಥ್‌ ಮತ್ತು ಗ್ರಾಮಾಂತರ ಠಾಣೆ ಎಸ್‌ಐ ಕಿರಣ್‌ಕುಮಾರ್‌, ಸಿಬ್ಬಂದಿಗಳಾದ ರವಿಕುಮಾರ್‌, ಜಯಪ್ರಕಾಶ್‌ ನಾರಾಯಣ, ತೋಪೇಗೌಡ, ಸುರೇಶ, ಎಂ.ಎನ್‌.ಭೈರಶೆಟ್ಟಿ, ಲೋಹಿತಾಶ್ವ, ಅರುಣ್‌, ಸುರೇಶ್‌ ಮತ್ತು ಮಹೇಶ್‌ ತಮ್ಮ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ. ಪತ್ತೆ ಕಾರ‍್ಯವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ