ಆ್ಯಪ್ನಗರ

ಜಿಪಂ ಮಾಜಿ ಸದಸ್ಯ ನೀಲಪ್ಪ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

ಬೂವನಹಳ್ಳಿ ಜಿಪಂ ಮಾಜಿ ಸದಸ್ಯ ನೀಲಪ್ಪ ಕೊಲೆ ಪ್ರಕರಣದ ಅಪರಾಧಿಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತು.

Vijaya Karnataka 18 Feb 2019, 5:00 am
ಹಾಸನ: ಬೂವನಹಳ್ಳಿ ಜಿಪಂ ಮಾಜಿ ಸದಸ್ಯ ನೀಲಪ್ಪ ಕೊಲೆ ಪ್ರಕರಣದ ಅಪರಾಧಿಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತು.
Vijaya Karnataka Web murder case life imprisonment for convict
ಜಿಪಂ ಮಾಜಿ ಸದಸ್ಯ ನೀಲಪ್ಪ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ


ಗುಡಿಕುಮಾರ್‌ ಶಿಕ್ಷೆಗೆ ಒಳಗಾದವ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ 2010ರ ಸೆ.19 ರಂದು ಬೂವನಹಳ್ಳಿ ಗ್ರಾಮದ ವಿಮಾನ ನಿಲ್ದಾಣಕ್ಕೆ ತೆರಳುವ ಕೋಳಿಫಾರಂ ಬಳಿ ಕಾರಿನಲ್ಲಿ ತಮ್ಮ ಪುತ್ರನೊಂದಿಗೆ ತೆರಳುತ್ತಿದ್ದ ವೇಳೆ ಅಪರಾಧಿ ಕುಮಾರ ಕಾರು ತಡೆದು ನೀಲಪ್ಪ ಅವರ ತಲೆಗೆ ದೊಣ್ಣೆಯಿಂದ ಹೊಡೆದು ತೀವ್ರಗಾಯಗೊಳಿಸಿದ್ದಲ್ಲದೆ, ತಡೆಯಲು ಹೋದ ನೀಲಪ್ಪ ಅವರ ಪುತ್ರ ದುರ್ಗಾಪ್ರಸಾದ್‌ ಮೇಲೂ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

ತಲೆಗೆ ತೀವ್ರಪೆಟ್ಟುಬಿದ್ದು ಆಸ್ಪತ್ರೆಗೆ ದಾಖಲಿಸಿ ಸ್ಥಳೀಯ ಹಾಗೂ ಬೆಂಗಳೂರಿನ ಆಸ್ಪತ್ರೆಯಲ್ಲಿ ನೂರುದಿನಗಳ ಕಾಲ ಚಿಕಿತ್ಸೆ ಕೊಡಿಸಿದರೂ, ಫಲಕಾರಿಯಾದೆ, 2010ರ ಡಿ.29 ರಂದು ರಾತ್ರಿ ನೀಲಪ್ಪ ನಿಧನರಾಗಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ಪೂರ್ಣಗೊಳಿಸಿದ ಜಿಲ್ಲಾ ಪ್ರಿನ್ಸಿಪಲ್‌ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್‌.ತಿಮ್ಮಣ್ಣಚಾರ್‌ ಅಪರಾಧಿ ಗುಡಿಕುಮಾರ್‌ಗೆ ಜೀವಾವಧಿ ಶಿಕ್ಷೆ, ಹತ್ತು ಸಾವಿರ ರೂ.ದಂಡ ಹಾಗೂ ಮೃತನ ಕುಟುಂಬಕ್ಕೆ ಒಂದು ಲಕ್ಷ ರೂ.ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿದ್ದಾರೆ ಎಂದು ಪ್ರಕರಣದ ಪರ ವಿಶೇಷ ಅಭಿಯೋಜಕ ಸುರೇಶ್‌ ತಿಳಿಸಿದರು. ತೀರ್ಪು ಹೊರಬೀಳುತ್ತಿದ್ದಂತೆ ಗುಡಿಕುಮಾರ್‌ ಕುಟುಂಬವರ್ಗ ಕಣ್ಣೀರಿಟ್ಟಿತು.

ಸತ್ಯಕ್ಕೆ ದೊರೆತ ಜಯ: ಪ್ರಕರಣದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಮೃತ ನೀಲಪ್ಪ ಅವರ ಸಹೋದರ ತುಳಸಿರಾಮ್‌ ಈ ತೀರ್ಪು ಸತ್ಯಕ್ಕೆ ಸಂದ ಜಯ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ