ಜೈಲಿನಿಂದ ಬಿಡುಗಡೆಯಾಗಿದ್ದ ಅಪರಾಧಿ ಹತ್ಯೆ
ಕೊಲೆ, ಅತ್ಯಾಚಾರ ಪ್ರಕರಣದಲ್ಲಿಜೈಲು ವಾಸ ಅನುಭವಿಸಿದ್ದ ಕೆಂಚಲೋಕಿ ವಿಕ ಸುದ್ದಿಲೋಕ ಹಾಸನ ಕೊಲೆ, ಅತ್ಯಾಚಾರ ಮತ್ತಿತರ ಪ್ರಕರಣದಲ್ಲಿಜೈಲು ಸೇರಿ 20 ದಿನದ ಹಿಂದೆ ಜಾಮೀನು ಮೇಲೆ ...
Vijaya Karnataka 29 Dec 2019, 5:00 am
ಕೊಲೆ, ಅತ್ಯಾಚಾರ ಪ್ರಕರಣದಲ್ಲಿಜೈಲು ವಾಸ ಅನುಭವಿಸಿದ್ದ ಕೆಂಚಲೋಕಿ
ಹಾಸನ: ಕೊಲೆ, ಅತ್ಯಾಚಾರ ಮತ್ತಿತರ ಪ್ರಕರಣದಲ್ಲಿಜೈಲು ಸೇರಿ 20 ದಿನದ ಹಿಂದೆ ಜಾಮೀನು ಮೇಲೆ ಬಿಡುಗಡೆಯಾಗಿದ್ದ ನಗರದ ವಲ್ಲಭಾಯಿರಸ್ತೆ ನಿವಾಸಿಯನ್ನು ಮಚ್ಚಿನಿಂದ ಕೊಚ್ಚಿ ಶಾಂತಿಗ್ರಾಮದ ಟೋಲ್ ಮುಂಭಾಗ ಕೊಲೆ ಮಾಡಲಾಗಿದೆ.
ಲೋಕೇಶ ಅಲಿಯಾಸ್ ಕೆಂಚಲೋಕಿ (38) ಮೃತನು. ಈತ ಜೈಲಿನಿಂದ ಬಿಡುಗಡೆಯಾದ ನಂತರ ಅಪಘಾತಕ್ಕೊಳಗಾಗಿ ತನ್ನ ತಂಗಿಯ ಮನೆಯಲ್ಲಿದ್ದ. ಡಿ.27ರಂದು ಬೆಳಗ್ಗೆ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡು ಬರುತ್ತೇನೆಂದು ಹೋಗಿದ್ದಾಗ ಶಾಂತಿಗ್ರಾಮ ಟೋಲ್ ಹತ್ತಿರ ಹಲಸಿನ ಮರದ ಸಮೀಪ ಯಾರೋ ಅಪರಿಚಿತರು ಯಾವುದೋ ಆಯುಧದಿಂದ ಮುಖ ಹಾಗೂ ತಲೆಗೆ ಹೊಡೆದು ಕೆಂಚಲೋಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತನ ಅಣ್ಣ ರವಿಪ್ರಸಾದ್ ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆಯಲ್ಲಿಪ್ರಕರಣ ತನಿಖೆ ಕೈಗೊಂಡಿದ್ದಾರೆ.
ಕೆಂಚಲೋಕಿಯನ್ನು ಆತನ ಐವರು ಸ್ನೇಹಿತರೇ ಕೊಲೆ ಮಾಡಿರುವ ಮಾಹಿತಿ ಕಲೆ ಹಾಕಿರುವ ಪೊಲೀಸರು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣ ವರದಿಯಾದ ಕೆಲವು ಗಂಟೆಯಲ್ಲೇ ಐವರ ಬಂಧನಕ್ಕೆ ತಂಡ ರಚಿಸಿದ್ದು, ಒಂದೆರಡು ದಿನದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ: ಕೊಲೆ, ಅತ್ಯಾಚಾರ ಮತ್ತಿತರ ಪ್ರಕರಣದಲ್ಲಿಜೈಲು ಸೇರಿ 20 ದಿನದ ಹಿಂದೆ ಜಾಮೀನು ಮೇಲೆ ಬಿಡುಗಡೆಯಾಗಿದ್ದ ನಗರದ ವಲ್ಲಭಾಯಿರಸ್ತೆ ನಿವಾಸಿಯನ್ನು ಮಚ್ಚಿನಿಂದ ಕೊಚ್ಚಿ ಶಾಂತಿಗ್ರಾಮದ ಟೋಲ್ ಮುಂಭಾಗ ಕೊಲೆ ಮಾಡಲಾಗಿದೆ.
ಲೋಕೇಶ ಅಲಿಯಾಸ್ ಕೆಂಚಲೋಕಿ (38) ಮೃತನು. ಈತ ಜೈಲಿನಿಂದ ಬಿಡುಗಡೆಯಾದ ನಂತರ ಅಪಘಾತಕ್ಕೊಳಗಾಗಿ ತನ್ನ ತಂಗಿಯ ಮನೆಯಲ್ಲಿದ್ದ. ಡಿ.27ರಂದು ಬೆಳಗ್ಗೆ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡು ಬರುತ್ತೇನೆಂದು ಹೋಗಿದ್ದಾಗ ಶಾಂತಿಗ್ರಾಮ ಟೋಲ್ ಹತ್ತಿರ ಹಲಸಿನ ಮರದ ಸಮೀಪ ಯಾರೋ ಅಪರಿಚಿತರು ಯಾವುದೋ ಆಯುಧದಿಂದ ಮುಖ ಹಾಗೂ ತಲೆಗೆ ಹೊಡೆದು ಕೆಂಚಲೋಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತನ ಅಣ್ಣ ರವಿಪ್ರಸಾದ್ ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆಯಲ್ಲಿಪ್ರಕರಣ ತನಿಖೆ ಕೈಗೊಂಡಿದ್ದಾರೆ.
ಕೆಂಚಲೋಕಿಯನ್ನು ಆತನ ಐವರು ಸ್ನೇಹಿತರೇ ಕೊಲೆ ಮಾಡಿರುವ ಮಾಹಿತಿ ಕಲೆ ಹಾಕಿರುವ ಪೊಲೀಸರು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣ ವರದಿಯಾದ ಕೆಲವು ಗಂಟೆಯಲ್ಲೇ ಐವರ ಬಂಧನಕ್ಕೆ ತಂಡ ರಚಿಸಿದ್ದು, ಒಂದೆರಡು ದಿನದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.