ಆ್ಯಪ್ನಗರ

ಕಲ್ಲು ಎತ್ತಿಹಾಕಿ ಯುವಕನ ಹತ್ಯೆ: ಆರೋಪಿ ಸೆರೆ

ನಗರದ ಕೈಗಾರಿಕಾ ಪ್ರದೇಶದ ಹಿಮತ್‌ಸಿಂಗ್ ಕಾರ್ಖಾನೆ ಕಾಂಪೌಂಡಿನ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಲೂರು ತಾಲೂಕು ಹಾಂಜೀಹಳ್ಳಿಯ ಯುವಕ ಚಂದನ್ ಎಂಬಾತನನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 11 Jan 2020, 10:25 pm
ಹಾಸನ: ನಗರದ ಕೈಗಾರಿಕಾ ಪ್ರದೇಶದ ಹಿಮತ್‌ಸಿಂಗ್ ಕಾರ್ಖಾನೆ ಕಾಂಪೌಂಡಿನ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಲೂರು ತಾಲೂಕು ಹಾಂಜೀಹಳ್ಳಿಯ ಯುವಕ ಚಂದನ್ ಎಂಬಾತನನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web CRIME LOGO


ತಿಮ್ಮಪ್ಪ(27) ಬಂಧಿತ ಆರೋಪಿ. ಕೆಲವು ದಿನದ ಹಿಂದೆ ಚಂದನ್ ಶವ ಪತ್ತೆಯಾಗಿತ್ತು. ಮೃತರ ತಂದೆ ರಮೇಶ್ ಹಳೆ ದ್ವೇಷದಿಂದ ಪಕ್ಕದ ಗ್ರಾಮವಾದ ಹಂಚೂರಿನ ನಯನ ಹಾಗೂ ಅವರ ಸಂಬಂಧಿಕರು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಚಿಸಿದ್ದ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ, ಸಿಪಿಐ ಕೃಷ್ಣರಾಜು ಮತ್ತಿತರನ್ನೊಳಗೊಂಡ ತಂಡವು ಚನ್ನರಾಯಪಟ್ಟಣದ ಹೊಸ ಬಸ್‌ನಿಲ್ದಾಣದ ಬಳಿ ತಿಮ್ಮಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು.

ಪೈಂಟರ್ ವೃತ್ತಿ ಅವಲಂಬಿಸಿದ್ದ ತಿಮ್ಮಪ್ಪ ವಿಚಾರಣೆ ವೇಳೆ ಚಂದನ್ ತನಗೆ 50 ಸಾವಿರ ರೂ. ಸಾಲ ಕೊಡಬೇಕಿದ್ದು, ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ತಾನು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಿಪಿಐ ಕೃಷ್ಣರಾಜು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ