ಆ್ಯಪ್ನಗರ

ನಾಳೆ ಮಡಿವಾಳರ ವಧು ವರರ ಸಮಾವೇಶ

ರಾಜ್ಯ ಮಡಿವಾಳ ಸಂಘದ ವತಿಯಿಂದ ಅ.2ರಂದು ಬೆಂಗಳೂರಿನಲ್ಲಿಮಡಿವಾಳರ ವಧು ವರರ ಸಮಾವೇಶವನ್ನು ಆಯೋಜಿಲಾಗಿದೆ ಎಂದು ಮಡಿವಾಳ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಂಜನಪ್ಪ ತಿಳಿಸಿದರು.

Vijaya Karnataka 1 Oct 2019, 5:00 am
ಹಾಸನ : ರಾಜ್ಯ ಮಡಿವಾಳ ಸಂಘದ ವತಿಯಿಂದ ಅ.2ರಂದು ಬೆಂಗಳೂರಿನಲ್ಲಿಮಡಿವಾಳರ ವಧು ವರರ ಸಮಾವೇಶವನ್ನು ಆಯೋಜಿಲಾಗಿದೆ ಎಂದು ಮಡಿವಾಳ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಂಜನಪ್ಪ ತಿಳಿಸಿದರು.
Vijaya Karnataka Web nale madivalara vadhu varara samavesa
ನಾಳೆ ಮಡಿವಾಳರ ವಧು ವರರ ಸಮಾವೇಶ


''ಸಮುದಾಯದ ಹೋರಾಟ ಮನೋಭಾವವುಳ್ಳವರು ಇದ್ದರೂ, ಸಂಘಟನೆಗಳನ್ನು ನಡೆಸಿಕೊಂಡು ಹೋಗುವ ಒಬ್ಬ ಬಲಿಷ್ಠ ನಾಯಕ ಸಿಗದಂತಾಗಿದೆ. ಮಡಿವಾಳ ಸಮುದಾಯದಲ್ಲಿಬುದ್ಧಿವಂತ ಹಾಗೂ ವಿದ್ಯಾವಂತ ಮಕ್ಕಳಿದ್ದಾರೆ. ಆದರೆ, ಅವರ ವಿದ್ಯಾಭ್ಯಾಸಕ್ಕೆ ಬೇಕಾದಂತಹ ಸೌಲಭ್ಯಗಳನ್ನು ಸಿಗದೆ ಇರುವ ಕಾರಣ ಐಎಎಸ್‌ ಅಂತಹ ದೊಡ್ಡ ದೊಡ್ಡ ವಿದ್ಯಾಭ್ಯಾಸವನ್ನು ಮಾಡಲು ಬಯಸುವವರು ತಮ್ಮ ಆಸೆ ಕನಸುಗಳನೆಲ್ಲ ತಮ್ಮಲಿಯೇ ಬಚಿಟ್ಟು ಕೂರುವಂತಾಗಿದೆ,'' ಎಂದು ಸುದ್ದಿಗೋಷ್ಠಿಯಲ್ಲಿಬೇಸರ ವ್ಯಕ್ತಪಡಿಸಿದರು.

''ಮಡಿವಾಳ ಸಮುದಾಯ ಎಂದರೆ ಮಡಿ ಮಾಡಿಸಿಕೊಳ್ಳು ಸೀಮಿತ ಎಂಬ ತಾತ್ಸಾರವಿದೆ. ಕಷ್ಟಪಟ್ಟು ಕಂಡವರ ಬಟ್ಟೆ ಹೊಗೆದು ಶುಚಿಗೊಳ್ಳಲು, ಸತತ ನೀರಿನಲ್ಲಿನಿಂತು ಕೈ,ಕಾಲುಗಳು ಸೆಲುಬುತ್ತದೆ ಇಂತಹ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲವಾಗಿದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಬಳ್ಳಾರಿ ಜಿಲ್ಲೆಯ ಗ್ರಾಮದಲ್ಲಿಪುಟ್ಟ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣದಲ್ಲಿಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದು, ಸರಕಾರ ಸೂಕ್ತ ಪರಿಹಾರ ಕೊಡುವ ಜತೆಗೆ ಸಮುದಾಯಕ್ಕೆ ರಕ್ಷಣೆ ನೀಡಬೇಕು,'' ಎಂದು ಮನವಿ ಮಾಡಿದರು.

ಸಂಘದ ಕಾರ್ಯಾದರ್ಶಿ ಬಿ.ಎ.ಗೋವಿಂದರಾಜು ಮಾತನಾಡಿ, ''ದೇಶದ 18 ರಾಜ್ಯದಲ್ಲಿಮಡಿವಾಳ ಸಮುದಾಯವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಸೇರ್ಪಡೆ ಮಾಡಬೇಕೆಂದು ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದರು ಕೂಡ ರಾಜ್ಯ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ವಿಷಾದಕರ ಸಂಗತಿ,'' ಎಂದು ತಿಳಿಸಿದರು.

ವಧುವರರ ಸಮಾವೇಶದ ಹೆಚ್ಚಿನ ಮಾಹಿತಿಗಾಗಿ ಎಸ್‌.ಆರ್‌.ಯಲ್ಲಪ್ಪ 9448974251 ಸಂಪರ್ಕಿಸಲು ಕೋರಲಾಗಿದೆ.

ಗೋಷ್ಠಿಯಲ್ಲಿಕಮಲ, ರಾಜಣ್ಣ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ