ಆ್ಯಪ್ನಗರ

120 ಕೋಟಿ ವೆಚ್ಚದಲ್ಲಿ ಸುವಾಸಿತ ಹಾಲು ಉತ್ಪಾದನ ಘಟಕ

ಹಾಸನ ಹಾಲು ಒಕ್ಕೂಟ 2018-19ನೇ ಸಾಲಿನಲ್ಲಿ1130.15 ಕೋಟಿ ರೂ. ವಹಿವಾಟು ನಡೆಸಿ, 15.50 ಕೋಟಿ ರೂ. ಲಾಭ ಗಳಿಸಿದ್ದು, 120 ಕೋಟಿ ರೂ. ವೆಚ್ಚದ ಸುವಾಸಿತ ಹಾಲು ಉತ್ಪಾದನ ಘಟಕವನ್ನು ಮುಂದಿನ ಆರು ತಿಂಗಳಲ್ಲಿಆರಂಭಿಸುವ ಮೂಲಕ ರಾಜ್ಯದಲ್ಲಿಪ್ರಥಮ ಸ್ಥಾನಕ್ಕೆ ತರುವುದೇ ತನ್ನ ಗುರಿ ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ಹೇಳಿದರು.

Vijaya Karnataka 13 Sep 2019, 5:00 am
ಹಾಸನ: ಹಾಸನ ಹಾಲು ಒಕ್ಕೂಟ 2018-19ನೇ ಸಾಲಿನಲ್ಲಿ1130.15 ಕೋಟಿ ರೂ. ವಹಿವಾಟು ನಡೆಸಿ, 15.50 ಕೋಟಿ ರೂ. ಲಾಭ ಗಳಿಸಿದ್ದು, 120 ಕೋಟಿ ರೂ. ವೆಚ್ಚದ ಸುವಾಸಿತ ಹಾಲು ಉತ್ಪಾದನ ಘಟಕವನ್ನು ಮುಂದಿನ ಆರು ತಿಂಗಳಲ್ಲಿಆರಂಭಿಸುವ ಮೂಲಕ ರಾಜ್ಯದಲ್ಲಿಪ್ರಥಮ ಸ್ಥಾನಕ್ಕೆ ತರುವುದೇ ತನ್ನ ಗುರಿ ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web new milk unit in hassan
120 ಕೋಟಿ ವೆಚ್ಚದಲ್ಲಿ ಸುವಾಸಿತ ಹಾಲು ಉತ್ಪಾದನ ಘಟಕ


ಹಾಸನ ಹಾಲು ಒಕ್ಕೂಟದ 2018-19ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಿಕದ ಬಳಿ 10 ಲಕ್ಷ ಲೀಟರ್‌ ಸಂಗ್ರಹ ಸಾಮರ್ಥ್ಯದ ಮೆಗಾಡೇರಿಯನ್ನು 400 ಕೋಟಿ ರೂ. ವೆಚ್ಚದಲ್ಲಿತೆರೆಯಲು ಉದ್ದೇಶಿಸಿದ್ದು, ಇದಕ್ಕೆ ಅಗತ್ಯ ಇರುವ 50 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ಒಕ್ಕೂಟದ ವ್ಯಾಪ್ತಿಯ 105 ಸಂಘಗಳಲ್ಲಿಬಿಎಂಸಿ ಘಟಕಗಳನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಒಕ್ಕೂಟದ ವತಿಯಿಂದ ಎಂಟು ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಬಲ್‌್ಕ ಮಿಲ್‌್ಕ ಕೂಲರ್‌ ಘಟಕಗಳ ಸ್ಥಾಪನೆಯಿಂದ 400 ಸಂಘಗಳಲ್ಲಿಪ್ರತಿನಿತ್ಯ ಮೂರು ಲಕ್ಷ ಲೀಟರ್‌ ಹಾಲನ್ನು ಸಂಘದಲ್ಲಿಯೇ ಶೇಖರಿಸಿ ಟ್ಯಾಂಕರ್‌ ಮೂಲಕ ಡೇರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

2019-20ನೇ ಸಾಲಿನಲ್ಲಿಸಂಘಗಳ ಸ್ವಂತ ಕಟ್ಟಡಕ್ಕೆ 35 ಕೋಟಿ ರೂ., ಮೇವಿನ ಬಿತ್ತನೆ ಬೀಜ ಪೂರೈಕೆಗೆ 60 ಲಕ್ಷ ರೂ., ರಾಸುಗಳ ವೈದ್ಯಕೀಯ ವೆಚ್ಚಕ್ಕೆ 1.10 ಕೋಟಿ ರೂ., ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರಗಳನ್ನು ಒದಗಿಸಲು 50 ಲಕ್ಷ ರೂ., ರಬ್ಬರ್‌ ಮ್ಯಾಟ್‌ ಒದಗಿಸಲು 75 ಲಕ್ಷ ರೂ. ಸೇರಿದಂತೆ ಒಟ್ಟು 737.87 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.

ಒಕ್ಕೂಟವು 2019-20ನೇ ಸಾಲಿಗೆ ವಾರ್ಷಿಕ ವಹಿವಾಟು 1350 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಮೂರು ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದರು.

ಯುಎಚ್‌ಟಿ ಹಾಲಿನ ಉತ್ಪಾದನಾ ಸಾಮರ್ಥ್ಯವನ್ನು ಪ್ರತಿನಿತ್ಯ ಎರಡು ಲಕ್ಷ ಲೀಟರ್‌ಗಳಿಂದ ನಾಲ್ಕು ಲಕ್ಷ ಲೀಟರ್‌ಗೆ ಹೆಚ್ಚಿಸಲು ಯಂತ್ರೋಪಕರಣಗಳ ಸರಬರಾಜು ಮತ್ತು ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಈ ವರ್ಷದ ನವೆಂಬರ್‌ಗೆ ಉತ್ಪಾದನೆ ಪ್ರಾರಂಭಿಸಲಾಗುವುದು ಎಂದರು.

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೆಶಕ ಗೋಪಾಲಯ್ಯ, ನಿರ್ದೇಶಕ ನಾಗರಾಜ್‌, ಸತೀಶ್‌, ಹಿರಿಯ ಸಹಕಾರಿಗಳಾದ ರಾಮಚಂದ್ರೇಗೌಡ, ಬಸವರಾಜ್‌, ಜಯರಾಮ್‌, ಹೇಮಂತ್‌, ಕಮಲ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ