ಆ್ಯಪ್ನಗರ

ವಿಜಯಪುರ -ಮಂಗಳೂರು ಹೊಸ ರೈಲು

ಹಾಸನ-ಸಕಲೇಶಪುರ ಮಾರ್ಗವಾಗಿ ವಿಜಯ ಪುರದಿಂದ ಮಂಗಳೂರಿಗೆ ಮತ್ತೊಂದು ರೈಲು ಸಂಚಾರ ಮಂಗಳವಾರದಿಂದ ಪ್ರಾರಂಭ ಗೊಂಡಿದ್ದು, ಪ್ರಯಾಣಿಕರು ಖುಷಿಗೊಂಡಿದ್ದಾರೆ.

Vijaya Karnataka 13 Nov 2019, 5:00 am
ಸಕಲೇಶಪುರ: ಹಾಸನ-ಸಕಲೇಶಪುರ ಮಾರ್ಗವಾಗಿ ವಿಜಯಪುರದಿಂದ ಮಂಗಳೂರಿಗೆ ಮತ್ತೊಂದು ರೈಲು ಸಂಚಾರ ಮಂಗಳವಾರದಿಂದ ಪ್ರಾರಂಭಗೊಂಡಿದ್ದು, ಪ್ರಯಾಣಿಕರು ಖುಷಿಗೊಂಡಿದ್ದಾರೆ.
Vijaya Karnataka Web train-1


ದಕ್ಷಿಣ ಕನ್ನಡದ ಕರಾವಳಿ(ಮಂಗಳೂರು) ಭಾಗ ಹಾಗೂ ಉತ್ತರ ಕರ್ನಾಟಕದ ಭಾಗಕ್ಕೆ ಪ್ರಯಾಣ ಬೆಸೆಯುವ ಈ ಮಾರ್ಗದ ಪ್ರಥಮ ರೈಲು ಸಂಚಾರ ಇದಾಗಿದೆ. ಈ ಹೊಸ ರೈಲು ಸಂಚಾರಕ್ಕೆ ಪಟ್ಟಣದಲ್ಲಿಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಕಾರ‍್ಯಕರ್ತರಿಂದ ಸ್ವಾಗತ ಕೋರಲಾಯಿತು.

ನಿಗದಿಯಂತೆ ಸಕಲೇಶಪುರಕ್ಕೆ ಬೆಳಗ್ಗೆ 7.10ಕ್ಕೆ ಬರಬೇಕಾಗಿದ್ದ ರೈಲು, ಪ್ರಾರಂಭದ ದಿನವಾದ ಮಂಗಳವಾರ ಸುಮಾರು 9ಕ್ಕೆ ಪಟ್ಟಣದ ರೈಲು ನಿಲ್ದಾಣಕ್ಕೆ ಬಂದು ತಲುಪಿತು.

ವೇಳಾ ಪಟ್ಟಿ: ವಿಜಯಪುರ (ಬಿಜಾಪುರ) ದಿಂದ ನಿತ್ಯ ಸಂಜೆ 6.30ಕ್ಕೆ ಹೊರಟು, ಬಸವನಬಾಗೆವಾಡಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಗದಗ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು ಮಾರ್ಗವಾಗಿ ಅರಸೀಕೆರೆಗೆ ಬೆಳಗಿನ ಜಾವ 5.15ಕ್ಕೆ ಬರಲಿದೆ. ಅಲ್ಲಿಂದ ಹಾಸನಕ್ಕೆ 6.15, ಸಕಲೇಶಪುರಕ್ಕೆ ಬೆಳಗ್ಗೆ 7.10 ಬಂದು ಇಲ್ಲಿಂದ 7.30 ಕ್ಕೆ ಹೊರಟು ಮಧ್ಯಾಹ್ನ 12.40 ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರು ಕಡೆಯಿಂದ ಸಂಜೆ 4.30ಕ್ಕೆ ಹೊರಟು ಸಕಲೇಶಪುರಕ್ಕೆ ರಾತ್ರಿ 9.10, ಹಾಸನಕ್ಕೆ 10.00, ಅರಸಿಕೆರೆಗೆ 10.50ಕ್ಕೆ ಹಾಗೂ ವಿಜಯಪುರಕ್ಕೆ ಮರುದಿನ ಬೆಳಗ್ಗೆ 11 ಕ್ಕೆ ತಲುಪಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ