ಆ್ಯಪ್ನಗರ

ಹಾಸನ ಜಿಲ್ಲೆಯಲ್ಲಿರಕ್ತದ ಕೊರತೆಯಿಲ್ಲ: ರವಿಕುಮಾರ್‌

ರಾಜ್ಯದ ಪ್ರತಿಯೊಂದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲಿರಕ್ತದ ಕೊರತೆ ಎದುರಾಗಿದ್ದರೂ ಹಾಸನ ಜಿಲ್ಲೆಯಲ್ಲಿರಕ್ತದ ಕೊರತೆ ಇಲ್ಲವೆಂಬ ಅಂಶ ಬೆಳಕಿಗೆ ಬಂದಿದೆ.

Vijaya Karnataka 20 Sep 2019, 5:00 am
ಬೇಲೂರು: ರಾಜ್ಯದ ಪ್ರತಿಯೊಂದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲಿರಕ್ತದ ಕೊರತೆ ಎದುರಾಗಿದ್ದರೂ ಹಾಸನ ಜಿಲ್ಲೆಯಲ್ಲಿರಕ್ತದ ಕೊರತೆ ಇಲ್ಲವೆಂಬ ಅಂಶ ಬೆಳಕಿಗೆ ಬಂದಿದೆ.
Vijaya Karnataka Web no shortage of blood in hassan district ravikumar
ಹಾಸನ ಜಿಲ್ಲೆಯಲ್ಲಿರಕ್ತದ ಕೊರತೆಯಿಲ್ಲ: ರವಿಕುಮಾರ್‌


ಹಾಸನ ಜಿಲ್ಲಾಏಡ್ಸ್‌ ನಿಯಂತ್ರಣ ವಿಭಾಗದ ಜಿಲ್ಲಾಮೇಲ್ವಿಚಾರಕ ರವಿಕುಮಾರ್‌ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಇಲ್ಲಿನ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿಆಯೋಜನೆಗೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುವರ್ಣ ಮಹೋತ್ಸವದ ಅಂಗವಾಗಿ ಲಯನ್ಸ್‌ ಕ್ಲಬ್‌ ಆಶ್ರಯದಲ್ಲಿಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ರಕ್ತದ ಕೊರತೆ ಇಲ್ಲದೆ ಇರುವುದಕ್ಕೆ ಹೆಮ್ಮೆ ಪಟ್ಟರು.

ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮತ್ತೊಬ್ಬರ ಪ್ರಾಣ ಉಳಿವಿಗೆ ಮುಂದಾಗಬೇಕಿದೆ. ದೇಶದ ಜನಸಂಖ್ಯೆಯಲ್ಲಿಶೇ.10 ಜನರು ರಕ್ತದಾನ ಮಾಡಿದರೆ ದೇಶದಲ್ಲಿರುವ ರಕ್ತದ ಕೊರತೆ ನೀಗಿಸಬಹುದು. ನಾವು ರಕ್ತ ಕೊಡುವುದರಿಂದ ಹಲವಾರು ರೋಗಬಾಧೆ ತಪ್ಪಿಸಬಹುದಾಗಿದೆ. ಪ್ರತಿ ವರ್ಷ ಪ್ರಸವದ ಸಂದರ್ಭ ಮಹಿಳೆಯರು 900 ರಿಂದ 1 ಸಾವಿರ ಮಂದಿ ಮೃತಪಡುತ್ತಾರೆ. 800 ಜನರು ರಕ್ತದ ಕೊರತೆಯಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇತರ ಜಿಲ್ಲೆಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳ ಕಾರ್ಯಕರ್ತರು ರಕ್ತದಾನ ಮಾಡುವುದರಿಂದ ರಕ್ತ ಸಂಗ್ರಹಣೆಯಲ್ಲಿಮುಂದಿದೆ. ಬೇರೆ ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ಹಾಸನಕ್ಕೆ ಬರುವುದರಿಂದ ರಕ್ತದ ಅವಶ್ಯಕತೆ ಹೆಚ್ಚಿದೆ. ಆದ್ದರಿಂದ ಆರೋಗ್ಯವಂತ 18 ವರ್ಷ ಮೇಲ್ಪಟ್ಟ 60 ವರ್ಷ ಒಳಪಟ್ಟವರು ನಿರ್ಭೀತಿಯಿಂದ ರಕ್ತದಾನ ಮಾಡಬಹುದು ಎಂದರು.

ಲಯನ್ಸ್‌ ಸಂಸ್ಥೆ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿರಕ್ತದ ಕೊರತೆಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ತುರ್ತು ಸಂದರ್ಭದಲ್ಲಿರಕ್ತದ ಕೊರತೆಯಿಂದ ಸಾಕಷ್ಟು ಜನರು ಸಾವಿಗೀಡಾಗುವುದನ್ನು ಕಾಣುತ್ತಿದ್ದೇವೆ. ರಕ್ತಕ್ಕೆ ಪರ್ಯಾಯ ಮಾರ್ಗವಿಲ್ಲದ ಕಾರಣ ರಕ್ತವನ್ನು ಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಇತರೆ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದರು.

ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಪ್ರಶಾಂತ್‌, ಲಯನ್ಸ್‌ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್‌, ಖಜಾಂಚಿ ಲತೀಫ್‌, ಗುರುಪಾದಸ್ವಾಮಿ, ಆರೋಗ್ಯ ಇಲಾಖೆಯ ರೇಣುಕಪ್ರಸಾದ್‌, ಉಪನ್ಯಾಸಕರಾದ ರಾಘವೇಂದ್ರ, ವಿಜಯಪ್ರಕಾಶ್‌ ಇನ್ನಿತರರಿದ್ದರು. ರಕ್ತದಾನ ಶಿಬಿರದಲ್ಲಿ50ಕ್ಕೂ ಹೆಚ್ಚು ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ