ಆ್ಯಪ್ನಗರ

ಕಂದಾಯ ಅಧಿಕಾರಿಗಳ ಮೂಲಕ ನೋಟಿಸ್‌: ವಿಶ್ವನಾಥ್‌ ಆರೋಪ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ನನಗೆ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ನೋಟಿಸ್‌ ಕೊಡಿಸಿ ಬೆದರಿಕೆ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಆರೋಪಿಸಿದರು.

Vijaya Karnataka 15 Apr 2019, 12:03 am
ವನಗೂರು(ಸಕಲೇಶಪುರ) ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ನನಗೆ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ನೋಟಿಸ್‌ ಕೊಡಿಸಿ ಬೆದರಿಕೆ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಆರೋಪಿಸಿದರು.
Vijaya Karnataka Web notice by revenue officials vishwanath accused
ಕಂದಾಯ ಅಧಿಕಾರಿಗಳ ಮೂಲಕ ನೋಟಿಸ್‌: ವಿಶ್ವನಾಥ್‌ ಆರೋಪ


ಸಕಲೇಶಪುರ ತಾಲೂಕಿನ ಹೆತ್ತೂರು, ಯಸಳೂರು ಹಾಗೂ ಕಸಬಾ ಹೋಬಳಿ ಮತಯಾಚನೆ ಸಂದರ್ಭದಲ್ಲಿ ವನಗೂರು-ಕೂಡುರಸ್ತೆಯಲ್ಲಿ ಮಾತನಾಡಿದ ಅವರು, ''ಇಂತಹ ಬೆದರಿಕೆಗೆ ನಾನು ಬಗ್ಗುವುದಿಲ್ಲ. ದೇವೇಗೌಡರ ಕುಟುಂಬ ರಾಜಕಾರಣದ ವಿರೋಧಿ ನಾನು'' ಎಂದು ಗುಡುಗಿದರು.

''ರಾಜಕೀಯ ಭ್ರಷ್ಟಾಚಾರದಿಂದ ದೇವೇಗೌಡರ ಟೀಮ್‌ 30 ಸಾವಿರ ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು, ಅದರ ಮುಂದಿನ ಯಜಮಾನ ಪ್ರಜ್ವಲ್‌ ರೇವಣ್ಣರಿಗೆ ನಾವು ಮತ ನೀಡಬಾರದು. ದೇಶಕ್ಕಾಗಿ ಹೋರಾಟ ನಡೆಸಿರುವ ಮೋದಿಗಾಗಿ ನಮ್ಮ ಮತ ನೀಡಬೇಕು. ಈ ಬಾರಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಶೇ.90 ರಷ್ಟು ಬಿಜೆಪಿಗೆ, ಮತನೀಡಲಿದ್ದಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ಕಾಂಗ್ರೆಸ್‌ನ ಬೆರಳೆಣಿಕೆ ಕಾರ್ಯಕರ್ತರು ಮಾತ್ರ ಜೆಡಿಎಸ್‌ ಜೊತೆ ಇದ್ದು, ಉಳಿದ ಕಾರ್ಯಕರ್ತರ ಸಂಪೂರ್ಣ ಬೆಂಬಲ ನಮಗೆ ಇದೆ. ಈ ಬಾರಿ ಹಾಸನದಲ್ಲಿ ಎ.ಮಂಜುಗೆ ಜಯ ಗ್ಯಾರಂಟಿ'' ಎಂದು ಹೇಳಿದರು.

ಮುಖಂಡರಾದ ನಾರ್ವೆ ಸೋಮಶೇಖರ್‌, ಸಮಾಜ ಸೇವಕ ಉದಯ್‌ ಕುಮಾರ್‌, ಚಿದನ್‌ ಹೊಂಗಡಹಳ್ಳಿ, ತಾಲೂಕು ಪಂಚಾಯತಿ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್‌ ಇದ್ದರು.

------------

ಸೂಟ್‌ಕೇಸ್‌ ಬಂದಿತ್ತು !

''ಈ ಬಾರಿ ಜೆಡಿಎಸ್‌ ಬೆಂಬಲಿಸುವಂತೆ, ನಮ್ಮ ತೋಟದ ಮನೆಗೆ ಸೂಟ್‌ ಕೇಸ್‌ ಹಿಡಿದು ಮುಖಂಡರು ಒಬ್ಬರನ್ನು ಕಳುಹಿಸಿದ್ದು, ದೇಶದ ಹಿತಕ್ಕಾಗಿ ವಾಪಸ್‌ ಕಳುಹಿಸಲಾಗಿದೆ. ಹಿಂದೆ ಸೂಟ್‌ಕೇಸ್‌ ಕೊಟ್ಟು ಮುಂದೆ ಕತ್ತು ಹಿಸುಕುವ ದೇವೇಗೌಡ ಕುಟುಂಬದ ಕುತಂತ್ರದ ಅನುಭವ ನನಗೆ ತಿಳಿದಿದೆ'' ಎಂದು ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

ಹಿರಿಯ ಮುಖಂಡ ಮಾಗೇರಿ ರಾಜೇಗೌಡ ಮಾತನಾಡಿ, ''1977ರಲ್ಲಿ ಇದೇ ದೇವೇಗೌಡರು ಕಪ್ಪು ಬಣ್ಣದ ಅಂಬಾಸಿಡರ್‌ ಕಾರಿನಲ್ಲಿ ದಿವಂಗತ ಬಿ.ಬಿ.ಶಿವಪ್ಪ ಅವರ ಕುಂಬ್ರಹಳ್ಳಿ ಮನೆಗೆ ಬಂದು ರಾಜಕೀಯ ಭವಿಷ್ಯ ಹಾಳುಮಾಡಿದ್ದನ್ನು ಈ ಭಾಗದ ಜನರು ಮರೆತಿಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ