ಆ್ಯಪ್ನಗರ

ಹಾಸನದಲ್ಲಿ ಕುಖ್ಯಾತ ಮನೆಗಳ್ಳನ ಬಂಧನ: ₹35 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹಾಸನ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಹಾಗೂ ಚಾಣಕ್ಷ್ಯ ಮನೆಗಳ್ಳನನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿ 35 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ

Vijaya Karnataka Web 29 Aug 2020, 7:24 pm
ಹಾಸನ: ಹಾಸನ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಹಾಗೂ ಚಾಣಕ್ಷ್ಯ ಮನೆಗಳ್ಳನನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿ 35 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.
Vijaya Karnataka Web gold loot


ಗಿರೀಶ್ ಕುಮಾರ್‌ ಬಂಧಿತ ಆರೋಪಿ . ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದ ಈತ ಹದಿನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.

ಈತನಿಗೆ ಸಹಕರಿಸಿದ ಮತ್ತೊಬ್ಬ ಆರೋಪಿ ಬೆಳಗಾವಿಯ ರಾಜೇಶ್ ತಲೆ ಮರೆಸಿಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆರೋಪಿಗೆ ಕೋವಿಡ್ ದೃಢಪಟ್ಟಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರು.

ಮನೆ ಮುಂದೆ ಆಟವಾಡ್ತಿದ್ದ ಉದ್ಯಮಿ ಪುತ್ರನ ಕಿಡ್ನಾಪ್‌, 2 ಕೋಟಿ ರೂ. ಡಿಮ್ಯಾಂಡ್‌

ಜ.1ರಂದು ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟಾವರ ಹೊಸಹಳ್ಳಿ ಕೊಪ್ಪಲು ಗ್ರಾಮದ ನಂಜೇಗೌಡರ ಮನೆಯ ಬೀರುವಿನ ಲಾಕರ್ ಮುರಿದು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದ. ಗ್ರಾಮಾಂತರ ಸಿಪಿಐ ವೈ. ಸತ್ಯನಾರಾಯಣ ನೇತೃತ್ವದ ತಂಡ ಶಾಂತಿಗ್ರಾಮ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸ್ನೇಹಿತ ರಾಜೇಶ್ ಜತೆ ಸೇರಿ ಹಲವು ಮನೆಗಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.

'ವಾಕಿಂಗ್ ಸ್ಟೈಲ್'‌ ಗಮನಿಸಿ ಎಟಿಎಂ ಕಳ್ಳರನ್ನು ಸೆರೆಹಿಡಿದ ಪೊಲೀಸರು..!

ಹಾಸನ ಜಿಲ್ಲೆಯ ಅರಸೀಕೆರೆ 2, ಜಾವಗಲ್ 1, ನುಗ್ಗೇಹಳ್ಳಿ 1, ಹಳೇಬೀಡು 1, ದುದ್ದ 2, ಹಾಸನ ಬಡಾವಣೆ 4, ಹಾಸನ ನಗರ 1, ತುಮಕೂರು ಜಿಲ್ಲೆಯ ಕುಣಿಗಲ್ 1, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರಕೆರೆ 1 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದರು.

ಹಳ್ಳಿಗಳಿಗೆ ಬೈಕ್‌ನಲ್ಲಿ ಒಬ್ಬನೇ ಹೋಗುತ್ತಿದ್ದ ಗಿರೀಶ್, ಬೀಗ ಹಾಕಿರುವ ಮನೆಗಳು, ಮನೆಯಿಂದ ಹೊರಗೆ ಹೋದವರು ಎಷ್ಟು ಹೊತ್ತಿಗೆ ವಾಪಸ್ ಬರುತ್ತಿದ್ದರು ಎಂಬುದನ್ನು ಗಮನಿಸುತ್ತಿದ್ದ. ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದ ಈತ ಕಳ್ಳತನ ಸಂದರ್ಭದಲ್ಲಿ ಮೊಬೈಲ್ ಬಳಸುತ್ತಿರಲಿಲ್ಲ. ಅಲ್ಲದೇ ಬೆರಳಚ್ಚು ಗುರುತು ಸಿಗದಂತೆ ನೋಡಿಕೊಳ್ಳುತ್ತಿದ್ದ. ಸಾಕಷ್ಟು ಬಾರಿ ಒಬ್ಬನೇ ಕಳ್ಳತನ ಮಾಡಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ