ಚನ್ನರಾಯಪಟ್ಟಣ : ದೇಶಾದ್ಯಂತ ಬಹುಬೇಡಿಕೆ ಇರುವ ವೃತ್ತಿಪರ ಶಿಕ್ಷ ಣದಲ್ಲಿ ನರ್ಸಿಂಗ್ ಶಿಕ್ಷ ಣ ಅಗ್ರಪಂಕ್ತಿಯಲ್ಲಿದ್ದು, ಈ ವೃತ್ತಿಯ ಬಗ್ಗೆ ಯಾರಲ್ಲಿಯೂ ಕೀಳರಿಮೆ ಬೇಡ ಎಂದು ಬಿ.ಜಿ.ನಗರದ ಆದಿಚುಂಚನಗಿರಿ ಶುಶ್ರೂಷ ಮಹಾವಿದ್ಯಾಲದ ಪ್ರಾಂಶುಪಾಲ ಪ್ರೊ.ಕೆ.ಜಿ.ವಿಜಯಕುಮಾರ್ ಹೇಳಿದರು.
ಪಟ್ಟಣದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸೈನ್ಸ್ನ ವೈದ್ಯೋತ್ಸವ ಹಾಗೂ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ದಿನೇದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಅದಕ್ಕೆ ಅಗತ್ಯವಾದಷ್ಟು ಸಂಖ್ಯೆಯಲ್ಲಿ ಶುಶ್ರೂಷಕರು ಲಭ್ಯವಿಲ್ಲದ ಕಾರಣ ಹೊರದೇಶಗಳಲ್ಲೂ ಈ ವೃತ್ತಿಗೆ ಬೇಡಿಕೆ ಇದೆ. ಸಮಯಕ್ಕೆ ಮಹತ್ವನೀಡಿ ಗೌರವದಿಂದ ನಿಮ್ಮ ವೃತ್ತಿಯನ್ನು ಕಂಡುಕೊಳ್ಳಬೇಕು. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಣೆ ಮಾಡಬೇಕೆಂದರು.
ರೋಗಿಗಳನ್ನು ಶುಶ್ರೂಷೆ ಮಾಡುವ ಮೊದಲು ಅವರ ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳುವ ಸಮಾಧಾನ ಹೊಂದಿರಬೇಕು. ನಂತರ ಚಿಕಿತ್ಸೆಗೆ ಮುಂದಾಗಬೇಕೆಂದ ಅವರು ಕೌಶಲ್ಯಯುತ ಕೆಲಸ ನಿಮ್ಮದಾಗಿರಬೇಕು. ಸಮವಸ್ತ್ರದಲ್ಲಿದ್ದಾಗ ವೃತ್ತಿಯ ಘನತೆಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದ ಅವರು ಬಹುಭಾಷಿಕರಾದರೆ ವಿಫುಲ ಅವಕಾಶಗಳು ನಿಮ್ಮನ್ನು ಅರಸಿಬರುತ್ತವೆ ಎಂದರು.
ಪುರಸಭೆ ಸದಸ್ಯ ಸಿ.ಎನ್.ಶಶಿಧರ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಇದೊಂದು ಪವಿತ್ರ ವೃತ್ತಿಯಾಗಿದ್ದು ಸಮಾಜಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕರ್ತವ್ಯನಿರ್ವಹಿಸಬೇಕು. ಸೇವೆಗಾಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿ ಈಶಿಕ್ಷ ಣವನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಶಂಸನೀಯವಾಗಿದ್ದು ಸಾಮಾಜಿಕ ಕಳಕಳಿ ಇರಲಿ ಎಂದರು.
ನಿಮ್ಮ ಕೆಲಸದ ಜೊತೆಗೆ ಪರಿಸರದ ಕಾಳಜಿಯನ್ನೂ ಹೊಂದಿರಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ತಾಪಮಾನ ಇನ್ನೂ ಹೆಚ್ಚಾಗಿ ಅನೇಕ ಅನಾಹುತಗಳಿಗೆ ನಾವೇ ಕಾರಣರಾಗಬೇಕಾಗುತ್ತದೆ. ನೀರನ್ನು ಮಿತವಾಗಿ ಬಳಕೆ ಮಾಡಬೇಕೆಂದರು. ಪ್ರಾಂಶುಪಾಲ ಬಿ.ಎಲ್.ಅರುಣ್ಕುಮಾರ್ ಅಧ್ಯಕ್ಷ ತೆವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷ ಣಾಧಿಕಾರಿ ಅನಿತಾ ದೀಪಪ್ರಜ್ವಲನಕ್ಕೆ ನೆರವಾದರು.