ಆ್ಯಪ್ನಗರ

ವೃದ್ಧ ಮಹಿಳೆಯ ಕೊಲೆ

ಮಾರಕಾಸ್ತ್ರಗಳಿಂದ ವೃದ್ದೆಯೊಬ್ಬರನ್ನು ಕೊಲೆಗೈದಿರುವ ಘಟನೆ ಬೇಲೂರು ತಾಲೂಕಿನ ವಳಲು ಗ್ರಾಮದಲ್ಲಿ ಮೇ 16 ರ ಸಂಜೆ ನಡೆದಿದೆ.

Vijaya Karnataka 18 May 2019, 5:00 am
ಹಾಸನ: ಮಾರಕಾಸ್ತ್ರಗಳಿಂದ ವೃದ್ದೆಯೊಬ್ಬರನ್ನು ಕೊಲೆಗೈದಿರುವ ಘಟನೆ ಬೇಲೂರು ತಾಲೂಕಿನ ವಳಲು ಗ್ರಾಮದಲ್ಲಿ ಮೇ 16 ರ ಸಂಜೆ ನಡೆದಿದೆ.
Vijaya Karnataka Web old woman murdered
ವೃದ್ಧ ಮಹಿಳೆಯ ಕೊಲೆ


ಸುಶೀಲಮ್ಮ (60) ಮೃತ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೊಡಲಿಯಿಂದ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕೊಲೆ ಮಾಡಿದ ಬಳಿಕ ಮನೆಯ ಹಿಂಭಾಗದ ಕೊಟ್ಟಿಗೆಗೆ ಶವವನ್ನು ಎಸೆದಿದ್ದು, ಸಂಬಂಧಿಕರ ಮನೆಗೆ ತೆರಳಿದ್ದ ಮಗ ಮೇ 17 ರಂದು ಬಂದು ನೋಡಿದಾಗ ರಕ್ತಸಿಕ್ತ ಕುರುಹುಗಳನ್ನು ಕಂಡು ತಾಯಿಯನ್ನು ಹುಡುಕಿದ್ದಾನೆ. ರಕ್ತದ ಕಲೆಗಳ ನೆರವಿನಿಂದ ಕೊಟ್ಟಿಗೆ ಬಳಿ ಬಂದು ನೋಡಿದ್ದಾಗ ಕೊಲೆಯಾಗಿರೋ ತಾಯಿಯ ಮೃತದೇಹ ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕೊಲೆಯನ್ನು ಪಕ್ಕದ ಮನೆಯ ನಾಗರಾಜು ಮತ್ತು ದ್ರಾಕ್ಷಾಯಿಣಿಯೇ ಮಾಡಿರಬಹುದೆಂದು ಮೃತ ಸುಶೀಲಮ್ಮನ ಪುತ್ರ ಕಾಂತರಾಜು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಬೇಲೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಸ್ಥಳಕ್ಕೆ ಎಎಸ್ಪಿ ನಂದಿನಿ, ಡಿವೈಎಸ್ಪಿ ಸದಾನಂದ ಅ.ತಿಪ್ಪಣ್ಣನವರ್‌, ವೃತ್ತನಿರೀಕ್ಷ ಕ ಲೋಕೇಶ್‌ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ್ದ ಕೆಲವು ಮಾರಕಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ