ಆ್ಯಪ್ನಗರ

ಹಾಸನ: ಬಿಜೆಪಿ ಪ್ರಚಾರ ಸಭೆಯಲ್ಲೇ ಕಾರ್ಯಕರ್ತರ ನಡುವೆ ಮಾರಾಮಾರಿ

ಹಾಸನದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

Lipi 30 Nov 2021, 5:22 pm
ಹಾಸನ: ಹಾಸನದ ಬಿಜೆಪಿ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿ ಏಕಪಕ್ಷೀಯರೇ ಹೊಡೆದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
Vijaya Karnataka Web party workers clash in bjp campaign in hassan
ಹಾಸನ: ಬಿಜೆಪಿ ಪ್ರಚಾರ ಸಭೆಯಲ್ಲೇ ಕಾರ್ಯಕರ್ತರ ನಡುವೆ ಮಾರಾಮಾರಿ


ಬಿಜೆಪಿ ಸ್ಥಳೀಯ ಮುಖಂಡ ಅಣ್ಣ ನಾಯಕನಹಳ್ಳಿ ವಿಜಯಕುಮಾರ್ ಬೆಂಬಲಿಗ ಹಾರನಹಳ್ಳಿಯ ಶಕ್ತಿಕೇಂದ್ರದ ಮೋಹನ್ ಎಂಬಾತನ ಮೇಲೆ ಜೆಡಿಎಸ್ ನಿಂದ ಬಿಜೆಪಿಗೆ ಬೆಂಬಲ ಸೂಚಿಸಿ ಉದ್ಘಾಟನೆಗೊಂಡಿದ್ದು, ನಗರಸಭೆ ಸದಸ್ಯರಾದ ಹರ್ಷವರ್ಧನ್ ರಾಜು ಚಂದ್ರಶೇಖರ್ ಸುಬ್ರಮಣ್ಯ ಬಾಬು ಮತ್ತು ಕುಮಾರ್ ಎಂಬ ನಾಲ್ಕು ಮಂದಿ ಮೋಹನ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ಹಾಸನ ಅಂದ್ರೇ ಬಿಜೆಪಿ ಸರ್ಕಾರಕ್ಕೆ ವಾಂತಿ, ಭೇದಿ ಎಲ್ಲ ಬರುತ್ತೆ: ಎಚ್‌ಡಿ ರೇವಣ್ಣ ವ್ಯಂಗ್ಯ

ಏನಿದು ಪ್ರಕರಣ?

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಇಂದು ವಿಧಾನಪರಿಷತ್ ಚುನಾವಣೆಯ ಪ್ರಯುಕ್ತ ಬಿಜೆಪಿಯ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಸಂದರ್ಭದಲ್ಲಿ ಹಾರನಹಳ್ಳಿಯ ಶಕ್ತಿಕೇಂದ್ರದ ಅಧ್ಯಕ್ಷ ಮೋಹನ್ ಎಂಬಾತ, ಯಾವುದೇ ಸ್ಥಾನಮಾನ ಹೊಂದಿರದೆ ವೇದಿಕೆ ಮೇಲೆ ಬಂದು ಎನ್. ಆರ್. ಸಂತೋಷ್ ಟಿಕೆಟ್ ಕೊಡಬಾರದೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗೆ ಆರೋಪ ಮಾಡುತ್ತಿದ್ದ ವೇಳೆ ಏಕಾಏಕಿ ಹರ್ಷವರ್ಧನ ಮತ್ತು ಇತರರು ಮೋಹನ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ಇನ್ನು ಈ ಘಟನೆ ಕೂಗಳತೆ ದೂರದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಘಟನೆ ಸಂಬಂಧ ಮೌನ ವಹಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಯಾಗಿರುವ ಎಚ್ಚೆನ್ ವಿಶ್ವನಾಥಪುರ ಮತ ಪ್ರಚಾರ ಮಾಡಲು ಇವತ್ತು ಅರಸೀಕೆರೆ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು.

ಕಾಂಗ್ರೆಸ್ ಸೇರುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಆಹ್ವಾನ ನೀಡಿದ ಸಂಸದ ಡಿಕೆ ಸುರೇಶ್!

ಸಭೆಯಲ್ಲಿ ಅಣ್ಣ ನಾಯಕನಹಳ್ಳಿ ವಿಜಯಕುಮಾರ್ ಬೆಂಬಲಿಗರ ಹಾಗೂ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಎನ್ ಆರ್ ಸಂತೋಷ್ ಬೆಂಬಲಿಗರ ಪುಂಡಾಟಿಕೆಗೆ ಇವತ್ತು ಜೆಡಿಎಸ್ ಪಕ್ಷದ ಮನೆ ಒಳಗೆ ಸಂತೋಷದ ಮನೆಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ