ಆ್ಯಪ್ನಗರ

ಸಾಮಗ್ರಿ ತಲುಪಿಸದ ಕೊರಿಯರ್‌ ಸಂಸ್ಥೆಗೆ ದಂಡ

ಪಾರ್ಸಲ್‌ ಕಳುಹಿಸಿದ ಸಾಮಗ್ರಿ ತಲುಪದ ಹಿನ್ನೆಲೆಯಲ್ಲಿ ಹಾಸನದ ಮಹಾಲಸಾ ಪಾರ್ಸಲ್‌ ಹಾಗೂ ಕೊರಿಯರ್‌ ಸಂಸ್ಥೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

Vijaya Karnataka 14 Jun 2019, 5:00 am
ಹಾಸನ : ಪಾರ್ಸಲ್‌ ಕಳುಹಿಸಿದ ಸಾಮಗ್ರಿ ತಲುಪದ ಹಿನ್ನೆಲೆಯಲ್ಲಿ ಹಾಸನದ ಮಹಾಲಸಾ ಪಾರ್ಸಲ್‌ ಹಾಗೂ ಕೊರಿಯರ್‌ ಸಂಸ್ಥೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.
Vijaya Karnataka Web penalty for a courier company that does not deliver the goods
ಸಾಮಗ್ರಿ ತಲುಪಿಸದ ಕೊರಿಯರ್‌ ಸಂಸ್ಥೆಗೆ ದಂಡ


ಕೊರಿಯರ್‌ ಸಂಸ್ಥೆ 1,30,898 ರೂ. ಸಾಮಗ್ರಿ ಮೊತ್ತ ಹಾಗೂ ಸೇವಾ ನ್ಯೂನತೆಗಾಗಿ 5 ಸಾವಿರ ದಂಡ ರೂ. ಅನ್ನು ಅರ್ಜಿದಾರರಿಗೆ ಸಲ್ಲಿಸಬೇಕು ಎಂದು ಅಧ್ಯಕ್ಷ ಎ.ಲೋಕೇಶ್‌ ಕುಮಾರ್‌, ಸದಸ್ಯೆ ಬಿ.ಕೆ. ಶಾಂತಲಾ ಅವರನ್ನು ಒಳಗೊಂಡ ಪೀಠ ವೇದಿಕೆ ಸೂಚಿಸಿದೆ.

ನಗರ ನಿವಾಸಿ ದಿಲೀಪ್‌ ಕುಮಾರ್‌ ಭಂಡಾರಿ ಎಂಬುವರು 2016ರ ಜು.12 ರಂದು 1,30,898 ರೂ. ಮೌಲ್ಯದ ಸಾಮಗ್ರಿಯನ್ನು ಮುಂಬೈ ವಿಳಾಸಕ್ಕೆ ಪಾರ್ಸಲ್‌ ಮಾಡಿದ್ದರು. ಆದರೆ, ನಿಗದಿತ ಸಮಯಕ್ಕೆ ಪಾರ್ಸಲ್‌ ತಲುಪದ ಕಾರಣ ಕೊರಿಯರ್‌ ಸಂಸ್ಥೆಯಲ್ಲಿ ವಿಚಾರಿಸಿದಾಗ ಸರಿಯಾದ ಸ್ಪಂದನೆ ದೊರೆತಿಲ್ಲ. ಮುಂಬೈ ಕಚೇರಿಯಲ್ಲಿ ವಿಚಾರಿಸಿದಾಗಲೂ ಪಾರ್ಸಲ್‌ ಬಂದಿಲ್ಲ ಎಂಬ ಉತ್ತರ ಬಂದಿದೆ. ಇದರಿಂದಾಗಿ ದಿಲೀಪ್‌ ಕುಮಾರ್‌ ವೇದಿಕೆಗೆ ದೂರು ಸಲ್ಲಿಸಿದ್ದರು.

ವಿಚಾರಣೆ ವೇಳೆ ಕೊರಿಯರ್‌ ಸಂಸ್ಥೆ ತಮ್ಮದೇನು ತಪ್ಪಿಲ್ಲ ಎಂದು ದಿಲೀಪ್‌ ಅವರ ಆರೋಪವನ್ನು ತಳ್ಳಿ ಹಾಕಿತ್ತು. ಆದರೆ, ದೂರದಾರ ದಾಖಲೆ ಸಮೇತ ಸಾಕ್ಷ ್ಯ ಒದಗಿಸಿದ ಹಿನ್ನೆಲೆಯಲ್ಲಿ ಸಂಸ್ಥೆ ಪ್ರಮಾದ ಎಸಗಿರುವುದು ಸಾಬೀತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ