ಆ್ಯಪ್ನಗರ

ಹಾಸನ: ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಜನರ ಸಾಗಣೆ, ಹಿರೀಸಾವೆ ಚೆಕ್‌ಪೋಸ್ಟ್‌ನಲ್ಲಿ ವಶ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಐಯ್ಯಂಗಾರ್ ಕೇಕ್ ಸೆಂಟರನಲ್ಲಿ ಕೆಲಸ ಮಾಡುತ್ತಿದ್ದ, ಈ ಐದು ಯುವಕರನ್ನು ಬೇಲೂರು ತಾಲೂಕಿಗೆ ತಲುಪಿಸಲು, 7 ಸಾವಿರ ರೂಪಾಯಿ ಬಾಡಿಗೆ ಪಡೆಯಲಾಗಿತ್ತು.

Vijaya Karnataka Web 14 Apr 2020, 7:58 pm
ಹಾಸನ: ಬೆಂಗಳೂರಿನಿಂದ ಐದು ಯುವಕರನ್ನು ಹಾಸನ ಜಿಲ್ಲೆಗೆ ಖಾಸಗಿ ಆಂಬುಲೆನ್ಸ್‌ನನಲ್ಲಿ ಕರೆ ತರುತ್ತಿದ್ದಾಗ, ಹಿರೀಸಾವೆ ಸಮೀಪದ ಚೆಕ್ ಪೋಸ್ಟ್‌ನಲ್ಲಿ ಮಂಗಳವಾರ ಪೊಲೀಸರು ಪತ್ತೆಹಚ್ಚಿ, ವಾಹನವನ್ನು ವಶಕ್ಕೆ ಪಡೆದಿದ್ದಾರೆ.
Vijaya Karnataka Web ಆಂಬ್ಯುಲೆನ್ಸ್‌
ಆಂಬ್ಯುಲೆನ್ಸ್‌


ಲಾಕ್ ಡೌನ್ ಆದಾಗಿನಿಂದ ಆಂಬುಲೆನ್ಸ್ ಮತ್ತು ಗೂಡ್ಸ್ ವಾಹನದಲ್ಲಿ ಜನರನ್ನು ಸಾಗಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 75ರ ಹಾಸನ –ಮಂಡ್ಯ ಗಡಿಯಲ್ಲಿನ ಚೆಕ್ ಪೋಸ್ಟ್ ನಲ್ಲಿ ಜಿಲ್ಲೆಗೆ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುವಂತೆ ಹಾಸನ ಎಸ್ ಪಿಯವರ ಆದೇಶದ ಮಾಡಿದ್ದರು.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಐಯ್ಯಂಗಾರ್ ಕೇಕ್ ಸೆಂಟರನಲ್ಲಿ ಕೆಲಸ ಮಾಡುತ್ತಿದ್ದ, ಈ ಐದು ಯುವಕರನ್ನು ಬೇಲೂರು ತಾಲೂಕಿಗೆ ತಲುಪಿಸಲು, 7ಸಾವಿರ ಬಾಡಿಗೆ ಪಡೆಯಲಾಗಿತ್ತು.

ವಾಹನದ ಚಾಲಕ ಸಕಲೇಶಪುರ ತಾಲೂಕಿನ ವಡೂರು ಗ್ರಾಮದವರು. ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಎಸ್ ಪಿ ನಂದಿನಿ ತಿಳಿಸಿದರು.

ಹಿರೀಸಾವೆ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಶಿವಸ್ಬಾಮಿ ಯುವಕರ ಆರೋಗ್ಯ ತಪಾಸಣೆ ಮಾಡಿ, ಎಲ್ಲರೂ ಆರೋಗ್ಯವಾಗಿ ಇದ್ದಾರೆ. ಇವರಗಳ ಬಗ್ಗೆ ಅಲ್ಲಿನ ತಾಲೂಕು ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಿ, ಹೋಂ ಕ್ವಾರಂಟೈನ್ ನಲ್ಲಿ ಇಡುವಂತೆ ತಿಳಿಸಲಾಗುವುದು ಎಂದು ವೈದ್ಯರು ಹೇಳಿದರು.

ಜಾಮೀನು ನೀಡಿ ಎಲ್ಲರನ್ನು ಬೆಂಗಳೂರಿಗೆ ವಾಪಸ್ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ